ಮರಾಠಿ ಬ್ಲಾಕ್ ಬಸ್ಟರ್ 'ಸೈರಾತ್' ನಲ್ಲಿ ನಟಿ ರಿಂಕು ರಾಜಗುರು ಮತ್ತು ನಟ ಆಕಾಶ್ ತೋಮರ್ 
ಸಿನಿಮಾ ಸುದ್ದಿ

ಮರಾಠಿ ಬ್ಲಾಕ್ ಬಸ್ಟರ್ 'ಸೈರಾತ್' ದಕ್ಷಿಣದ ಭಾಷೆಗಳಿಗೆ; ರಾಕ್ಲೈನ್ ಗೆ ರಿಮೇಕ್ ಹಕ್ಕು

ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್' ಈಗ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಲಿದೆ. ಇವೆಲ್ಲದರ ರಿಮೇಕ್ ಹಕ್ಕುಗಳನ್ನು

ಚೆನ್ನೈ: ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಬ್ಲಾಕ್ ಬಸ್ಟರ್ ಸಿನೆಮಾ 'ಸೈರಾತ್' ಈಗ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಆಗಲಿದೆ. ಇವೆಲ್ಲದರ ರಿಮೇಕ್ ಹಕ್ಕುಗಳನ್ನು ಕೊಂಡವರು ಮತ್ಯಾರು ಅಲ್ಲ, ಕರ್ನಾಟಕದ ನಿರ್ಮಾಪಕ 'ಲಿಂಗಾ' ಖ್ಯಾತಿಯ ರಾಕ್ಲೈನ್ ವೆಂಕಟೇಶ್.

"ಮೂಲ ಸಿನೆಮಾದ ನಿರ್ಮಾಪಕರ ಜೊತೆಗೆ ದಕ್ಷಿಣ ಭಾರತದ ಭಾಷೆಗಳ ರಿಮೇಕ್ ಚಿತ್ರಗಳಿಗೆ ರಾಕ್ಲೈನ್ ಸಹ ನಿರ್ಮಾಪಕರಾಗಲಿದ್ದಾರೆ. ಶೀಘ್ರದಲ್ಲೇ ತಾರಾಗಣದ ಆಯ್ಕೆ ಪ್ರಕ್ರಿಯೆ ಮುಗಿಯಲಿದ್ದು ಆಗಸ್ಟ್ ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ" ಎಂದು ರಾಕ್ಲೈನ್ ವೆಂಕಟೇಶ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗರಾಜ್ ಮಂಜುಳೆ ನಿರ್ದೇಶಿಸಿದ್ದ ಈ ಸಿನೆಮಾದ ಬಜೆಟ್ ೫ ಕೋಟಿಗೂ ಕಡಿಮೆ ಆದರೆ ಗಳಿಗೆ ೬೦ ಕೋಟಿಗೂ ಮೀರಿತ್ತು! ಈಗ ತೆಲುಗು ಅವತರಿಣೆಕೆಯನ್ನು ನಾಗರಾಜ್ ಅವರೇ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.  

ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದ ರಿಂಕು ರಾಜಗುರು ಮತ್ತು ಆಕಾಶ್ ತೋಮರ್ ಪ್ರೇಕ್ಷಕರ ಮತ್ತು ವಿಮರ್ಶಕರ ಮನಗೆದ್ದಿದ್ದರು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT