ಸಿನಿಮಾ ಸುದ್ದಿ

ಮಳೆಯೊಂದಿಗೆ ಕಣ್ಣ ಮುಚ್ಚಾಲೆ ಆಡಿ ಇಟಲಿಯಿಂದ 'ಸಾಹೇಬ' ವಾಪಸ್

Guruprasad Narayana

ಬೆಂಗಳೂರು: ಹಿರಿಯ ನಟ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಪಾದಾರ್ಪಣೆ ಮಾಡುತ್ತಿರುವ 'ಸಾಹೇಬ' ಚಿತ್ರತಂಡ ಇಟಲಿಯಿಂದ ಹಿಂದಿರುಗಿದೆ. ಕೆಲವು ದೃಶ್ಯಗಳು ಮತ್ತು ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ತಂಡ ಇಟಲಿಗೆ ತೆರಳಿತ್ತು.

ತಮ್ಮ ಅನುಭವವನ್ನು ವಿವರಿಸುವ ನಿರ್ದೇಶಕನ ಭರತ್ ಇಟಲಿಯಲ್ಲಿ ಮುಂಗಾರು ಮಳೆಯಿಂದಾಗಿ ಚಿತ್ರೀಕರಣಕ್ಕೆ ತುಸು ಅಡೆತಡೆಯಾಯಿತಂತೆ. "ತೀವ್ರ ಮಳೆಯಿದ್ದಾಗ ನಾವು ಅಲ್ಲಿಗೆ ಹೋಗಿದ್ದೆವು. ಇಟಲಿಯಲ್ಲಿ ಹವಾಮಾನ ವಿಪರೀತವಾಗಿ ನಿಮಿಷ ನಿಮಿಷಕ್ಕೂ ಬದಲಾವಣೆಯಾಗುತ್ತದೆ. ಇವೆಲ್ಲದರ ನಡುವೆಯೂ ನಾವು ಛಲ ಬಿಡದೆ ಹಾಡುಗಳ ಮತ್ತು ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದೆವು. ೧೨ ದಿನಗಳ ಪ್ರವಾಸದಲ್ಲಿ ಒಂದು ದಿನವನ್ನು ನಾವು ಕಳೆದುಕೊಂಡೆವು" ಎಂದು ತಿಳಿಸುತ್ತಾರೆ.

ಇಟಲಿಗೆ ತೆರಳಿದ ಮೇಲೆಯೇ ಚಿತ್ರೀಕರಣ ನಡೆಸುವ ಪ್ರದೇಶಗಳ ಬಗ್ಗೆ ನಿರ್ಧರಿಸಿ ವೆರೋನ, ಸಿಮಿಯೋನ್ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದರಂತೆ.

ಮುಂದಿನ ಹಂತದ ಚಿತ್ರೀಕರಣ ಜುಲೈ ೨ ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ ೭ ರಂದು ಚಿತ್ರ ಬಿಡುಗಡೆ ಮಾಡುವ ಇರಾದೆ ಹೊಂದಿದೆ ಚಿತ್ರತಂಡ.

SCROLL FOR NEXT