'ಊರ್ವಿ' ಸಿನೆಮಾಗಾಗಿ ಕಲಾತ್ಮಕವಾಗಿ ಮಾರ್ಪಾಡಾದ ಭೂತ ಬಂಗಲೆ 
ಸಿನಿಮಾ ಸುದ್ದಿ

ಚೊಚ್ಚಲ ಸಿನೆಮಾಗೆ ಕಲಾತ್ಮಕತೆಯ ಮೊರೆ ಹೋದ ಪ್ರದೀಪ್ ವರ್ಮಾ

ಪ್ರಖ್ಯಾತ ಕಲಾವಿದ ಬಿ ಕೆ ಎಸ್ ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಊರ್ವಿ'ಗಾಗಿ ಕಲಾತ್ಮಕತೆಯ ವಿಭಿನ್ನ ಸೃಷ್ಟಿಗೆ ಮೊರೆ ಹೋಗಿದ್ದಾರೆ.

ಬೆಂಗಳೂರು: ಪ್ರಖ್ಯಾತ ಕಲಾವಿದ ಬಿ ಕೆ ಎಸ್ ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ 'ಊರ್ವಿ'ಗಾಗಿ ಕಲಾತ್ಮಕತೆಯ ವಿಭಿನ್ನ ಸೃಷ್ಟಿಗೆ ಮೊರೆ ಹೋಗಿದ್ದಾರೆ.

ಮೊದಲ ಹಂತದ ಚಿತ್ರೀಕರಣಕ್ಕಾಗಿ, ತಾವರೆಕೆರೆಯ ಭೂತ ಬಂಗಲೆಯನ್ನು ಕಲಾ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಿ ಅದನ್ನು ಸ್ವರ್ಗದ ಮನೆ ಎಂದು ಹೆಸರಿಸಿದ್ದಾರೆ. ಇದಕ್ಕಾಗಿ ನಿರ್ಮಾಪಕರು ೧೬ ಲಕ್ಷ ವ್ಯಯಿಸಿದ್ದು, ೧೬ ದಿನಗಳ ಕೆಲಸ ಹಿಡಿಯಿತಂತೆ. ಪ್ರದೀಪ್ ಅವರ ಸೂಚನೆಯಂತೆ, ಕಲಾ ನಿರ್ದೇಶಕ ಬಾಬು ಖಾನ್ ಈ ಮಾರ್ಪಾಡನ್ನು ಸಾಧ್ಯವಾಗಿಸಿದ್ದಾರೆ,

"ನಾವು ನಡೆಸಲಿರುವ ಮೊದಲ ಹಂತದ ಚಿತ್ರೀಕರಣದಲ್ಲಿ, ಸಿನೆಮಾದ ತಿರುವು ಪಡೆಯಲಿದ್ದು ಅದು ಘಟಿಸುವುದು ಈ ಪ್ರದೇಶದಲ್ಲೇ. ಮತ್ತು ಈ ಮನೆಯೇ ಪಾತ್ರವಾಗುತ್ತದೆ. ಆದುದರಿಂದ ಮನೆಯನ್ನು ಕಲಾತ್ಮಕವಾಗಿ ಮಾರ್ಪಾಡು ಮಾಡುವ ಅವಶ್ಯಕತೆ ಇತ್ತು" ಎಂದು ನಿರ್ದೇಶಕ ವಿವರಿಸುತ್ತಾರೆ.

ಬಿ ಕೆ ಎಸ್ ವರ್ಮಾ ಅವರ ಅತಿ ದೊಡ್ಡ ಕಲಾಕೃತಿಗಳನ್ನು ಬಳಸಿ ಮನೆಯನ್ನು ಸಿಂಗರಿಸಲಾಗಿದೆಯಂತೆ. "ಈ ಎಲ್ಲಾ ಕಲಾಕೃತಿಗಳೂ ಸಿನಮಾದ ವಿಷಯಕ್ಕೆ ಸಂಬಂಧಿಸಿರುವವೇ. ಈ ಮನೆಯನ್ನು ಸ್ವರ್ಗದ ಮನೆ ಎಂದು ಕರೆದದ್ದು ಏಕೆಂದರೆ ಮೂಲ ಹೆಸರು ಸಿನೆಮಾದ ಶೀರ್ಷಿಕೆ ಮತ್ತು ಕಥೆಗೆ ಸರಿ ಹೊಂದಲಿಲ್ಲ" ಎಂದು ವಿವರಿಸುತ್ತಾರೆ ಪ್ರದೀಪ್.

೨೦ ದಿನಗಳ ಕಾಲದವರೆಗೆ ನಡೆದ ಮೊದಲ ಹಂತದ ಚಿತ್ರೀಕರಣದಲ್ಲಿ ಶ್ವೇತಾ ಪಂಡಿತ್, ಶ್ರದ್ಧಾ ಶ್ರೀನಾಥ್, ಜಾಹ್ನವಿ ಮತ್ತು ಅಚ್ಯುತ್ ಕುಮಾರ್ ಭಾಗವಿಸಿದ್ದಾರೆ. "ಮಾರ್ಚ್ ೨೮ ರಿಂದ ಪ್ರಾರಂಭವಾಗುವ ಮುಂದಿನ ಹಂತದ ಚಿತ್ರೀಕರಣದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೃತಿ ಹರಿಹರನ್ ಭಾಗವಹಿಸಲಿದ್ದಾರೆ" ಎಂದು ವಿವರಿಸುತ್ತಾರೆ ಪ್ರದೀಪ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT