ಮಧುಕರ್ ನಿಯೋಗಿ 
ಸಿನಿಮಾ ಸುದ್ದಿ

'ಊರ್ವಿ' ಸಿನೆಮಾಗೆ ನಾಯಕನಾಗಿ ಮಧುಕರ್ ನಿಯೋಗಿ ಆಯ್ಕೆ

೨೦೧೪ರಲ್ಲಿ ಬಂದಂತೆ ಕಾಣೆಯಾಗಿದ್ದ 'ಕ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಮಧುಕರ್ ನಿಯೋಗಿ, ನಂತರ ಸಹ ನಿರ್ದೇಶಕ, ಸ್ಕ್ರಿಪ್ಟ್ ಬರಹಗಾರರಾಗಿ ತೊಡಗಿಸಿಕೊಂಡವರು.

ಬೆಂಗಳೂರು: ೨೦೧೪ರಲ್ಲಿ ಬಂದಂತೆ ಕಾಣೆಯಾಗಿದ್ದ 'ಕ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದ ಮಧುಕರ್ ನಿಯೋಗಿ, ನಂತರ ಸಹ ನಿರ್ದೇಶಕ, ಸ್ಕ್ರಿಪ್ಟ್ ಬರಹಗಾರರಾಗಿ ತೊಡಗಿಸಿಕೊಂಡವರು. ಐದು ಭಾರತಿಯ ಭಾಷೆಗಳನ್ನು ನುರಿತಿರುವ ಈ ಮಾಜಿ ಸಾಫ್ಟ್ವೇರ್ ಎಂಜಿನಿಯರ್ ಗೆ ಮತ್ತೆ ನಟನೆಯ ಅದೃಷ್ಟ ಒಲಿದು ಬಂದಿದೆ.

ಕನ್ನಡ ಚಿತ್ರೋದ್ಯಮಕ್ಕೆ ನಟನಾಗಲು ಬಂದಿದ್ದು ಎಂದು ಆತ್ಮವಿಶ್ವಾಸದಿಂದ ನುಡಿಯುವ ಮಧು "ಆರೋಗ್ಯಕರ ಸ್ವ-ಗೌರವ ಗಳಿಸುವುದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಇಲ್ಲಿಗೆ ಹಲವರು ಹಿರೋ ಆಗಲು ಬರುತ್ತಾರೆ ಆದರೆ ನಾನಿಲ್ಲಿರುವುದು ನಟನಾಗಿರಲು. ಎರಡರ ಮಧ್ಯೆ ಬಹಳ ವ್ಯತ್ಯಾಸ ಇದೆ. ಹಿರೋ ಜೀವನಕ್ಕಿಂತಲೂ ದೊಡ್ಡದಾಗಿ ಕಾಣಿಸಿ ಸ್ಫೂರ್ತಿ ನೀಡಬಲ್ಲವನಾದರೂ, ಸಾಮಾನ್ಯ ಮನುಷ್ಯನಿಗೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಾನು ಹೆಚ್ಚೆಚ್ಚು ಪಾತ್ರಗಳನ್ನು ಮಾಡಿ, ನಟನೆಯಲ್ಲೇ ನನನ್ನು ಕಂಡೂಕೊಳ್ಳಬೇಕೆಂದಿದ್ದೇನೆ" ಎನ್ನುತ್ತಾರೆ.

ನೈಜ ಸಿನೆಮಾದ ಪಾತ್ರವಾಗುವ ಬಯಕೆ ಹೊಂದಿರುವ ನಟ, ಊರ್ವಿ ಸಿನೆಮಾದಲ್ಲಿ ಪ್ರಧಾನ ಪಾತ್ರವನ್ನು ಗಳಿಸಿದ್ದಾರೆ. ಪ್ರದೀಪ್ ವರ್ಮಾ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಸಿನೆಮಾದಲ್ಲಿ ನಾಯಕ ನಟಿಯರ ದಂಡೆ ಇದೆ. ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಎಲ್ಲರು ಸಿನೆಮಾದಲ್ಲಿದ್ದಾರೆ.

ವಾಣಿಜ್ಯಾತ್ಮಕ ಸಿನೆಮಾ ಮತ್ತು ನೈಜ ಸಿನೆಮಾಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳುವ ಮಧು "ವಾಣಿಜ್ಯ ಸಿನೆಮಾಗಳು ಕೂಡ ಒಳ್ಳೆಯ ಯೋಜನೆಗಳೇ, ಅವುಗಳಲ್ಲಿ ಅವಕಾಶ ಸಿಕ್ಕರೆ ಆಗ ಚಿಂತಿಸುತ್ತೇನೆ ಆದರೆ ಸದ್ಯಕ್ಕೆ ಸಾಮಾನ್ಯರನ್ನು ತಟ್ಟಬಲ್ಲ ನೈಜ ಸಿನೆಮಾದತ್ತ ನನ್ನ ಚಿತ್ತ. ಚಿತ್ರೋದ್ಯಮದಲ್ಲಿ ಬೆಳೆಯುತ್ತಾ ಹೋದಂತೆ ನನ್ನ ನಿಲುವುಗಳು ಬದಲಾಗಬಹುದು" ಎನ್ನುತ್ತಾರೆ.

ಮಿ & ಮಿಸಸ್ ರಾಮಾಚಾರಿಯಲ್ಲಿ ಸಂತೋಶ್ ಆನಂದರಾಮ್ ಅವರ ಜೊತೆ ಸಹನಿರ್ದೇಶಕರಾಗಿದ್ದ ಮಧು, ಆಗ ಪ್ರದೀಪ್ ಜೊತೆಗೂ ಸಂಪರ್ಕದಲ್ಲಿದ್ದರಂತೆ "ನಾನು ಅವರ ಜೊತೆ ಸೇರಿ ಒಂದು ಸ್ಕ್ರೀನ್ ಪ್ಲೇ ಬರೆದೆ. ಆದರೆ ಅದಿನ್ನೂ ಪ್ರಾರಂಭವಾಗಬೇಕು. ಈ ಮಧ್ಯೆ ಅವರಿಗೆ ನಿರ್ದೇಶನದ ಅವಕಾಶ ಸಿಕ್ಕಿತು. ಈಗ ಅವರಿಗೆ ಸಹ ನಿರ್ದೇಶಕನಾಗಿಯೂ ಮತ್ತು ಅದೇ ಸಿನೆಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಕ್ರಾಂತಿಕಾರಿ ಕಲಾವಿದನ ಪಾತ್ರವಿದು. ನಾನಿದಕ್ಕೆ ತಕ್ಕವನು ಎಂದೆನಿಸಿತು ಅವರಿಗೆ" ಎಂದು 'ಊರ್ವಿ' ಸಿನೆಮಾದ ಬಗ್ಗೆ ತಿಳಿಸುತ್ತಾರೆ.

ಹತ್ತು ಹಲವು ಕೆಲಸಗಳನ್ನು ಹಚ್ಚಿಕೊಂಡಿರುವ ಅವರು ಬಾಲಿವುಡ್ ಸಿನೆಮಾದಲ್ಲಿ ಕೂಡ ಆಡಿಶನ್ ನೀಡಿದ್ದಾರಂತೆ. "ಅದರ ಫಲಿತಾಂಶ ಇನ್ನೂ ತಿಳಿಯಬೇಕಿದೆ. 'ಊರ್ವಿ' ಮುಗಿಸಿದ ನಂತರ ಚೈನಾದಲ್ಲಿ ನಾಟಕವೊಂದಿದೆ. ನಂತರ ಇನ್ನಷ್ಟು ಯೋಜನೆಗಳಿಗೆ ಆಡಿಶನ್ ನೀಡುತ್ತೇನೆ. ನಾನಿನ್ನೂ ಹೊಸಬ. ಸಿನೆಮಾದ ಎಲ್ಲ ವಿಭಾಗಗಳಲ್ಲೂ ಕಲಿಯುವುದು ಸಾಕಷ್ಟಿದೆ. ನಟನೆ ನನ್ನ ಆಯ್ಕೆ, ಆದರೆ ಸಿನೆಮಾದ ವಿವಿಧ ಆಯಾಮಗಳನ್ನು ತಿಳಿಯಲು ನಿರ್ದೇಶನ ಆಯ್ಕೆ ಮಾಡಿಕೊಂಡೆ" ಎನ್ನುತ್ತಾರೆ ಮಧುಕರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT