ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ 
ಸಿನಿಮಾ ಸುದ್ದಿ

ಸತ್ಯಜಿತ್ ರೇ ಜನ್ಮದಿನದಂದು ಗೌರವ ಸಲ್ಲಿಸಿದ ನಿರ್ದೇಶಕರು

ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಜಯಂತಿಯಾದ ಇಂದು ಅವರನ್ನು ನೆನಪಿಸಿಕೊಂಡಿರುವ ಹಲವಾರು ನಿರ್ದೇಶಕ -ನಟ- ನಿರ್ಮಾಪಕರು ಭಾರತೀಯ ಸಿನೆಮಾದ ಮಾಸ್ಟರ್ ಎಂದೇ ಖ್ಯಾತಿಯಾದ

ಮುಂಬೈ: ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ ಜಯಂತಿಯಾದ ಇಂದು ಅವರನ್ನು ನೆನಪಿಸಿಕೊಂಡಿರುವ ಹಲವಾರು ನಿರ್ದೇಶಕ -ನಟ- ನಿರ್ಮಾಪಕರು ಭಾರತೀಯ ಸಿನೆಮಾದ ಮಾಸ್ಟರ್ ಎಂದೇ ಖ್ಯಾತಿಯಾದ ರೇ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಗೌರವ ಸಲ್ಲಿಸಿದ್ದಾರೆ.

ರೇ ಅವರನ್ನು ನೆನಪಿಸಿಕೊಂಡಿರುವ ನಿರ್ದೇಶಕ ಮಧುರ್ ಭಂಡಾರ್ಕರ್, ರೇ ವಿಶ್ವ ಸಿನೆಮಾಗಳ ಪ್ರಭಾವಿ ನಿರ್ದೇಶಕರಲ್ಲಿ ಒಬ್ಬರು ಎಂದಿದ್ದಾರೆ. ಸತ್ಯಜಿತ್ ರೇ ಅವರ ಮೊದಲ ಸಿನೆಮಾ 'ಪಥೇರ್ ಪಾಂಚಾಲಿ' ೧೧ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತ್ತು  ಇದರಲ್ಲಿ ೧೯೫೬ ರ ಕಾನ್ ಚಲನಚಿತ್ರೋತ್ಸವ ಗೆದ್ದ ಪ್ರಶಸ್ತಿಯೂ ಒಂದು .

ನಿರ್ದೇಶಕ ಅಶೋಕ್ ಪಂಡಿತ್ ಕೂಡ ಭಾರತ ರತ್ನ ಪುರಸ್ಕೃತ ನಿರ್ದೇಶಕನನ್ನು ನೆನಪಿಸಿಕೊಂಡಿದ್ದಾರೆ.

ಈ ಕೆಲವು ತಾರೆಯರು ಟ್ವಿಟ್ಟರ್ ನಲ್ಲಿ ರೇ ಅವರನ್ನು ನೆನಪಿಸಿಕೊಂಡಿದ್ದು ಹೀಗೆ

ಸುಜಿತ್ ಸರ್ಕಾರ್: "ಇಂದು ರೇ ದಿನ. ಮಾಸ್ಟರ್ ಸತ್ಯಜಿತ್ ರೇ ಜಯಂತಿಯ ಶುಭಾಶಯಗಳು"

ಅಶೋಕ್ ಪಂಡಿತ್: "ಭಾರತೀಯ ಸಿನೆಮಾದ ಮಾಸ್ಟರ್ ಅವರ ಜಯಂತಿಯ ಶುಭಾಶಯಗಳು. ಸತ್ಯಜಿತ್ ರೇ ಸಾಹೇಬರಿಗೆ ಈ ಮೂಲಕ ಗೌರವ ಸಲ್ಲಿಸುತ್ತಿದ್ದೇನೆ".

ಮಧುರ ಭಂಡಾರ್ಕರ್: "ಅತ್ಯದ್ಭುತ ನಿರ್ದೇಶಕ ಮತ್ತು ವಿಶ್ವ ಸಿನೆಮಾದ ಪ್ರಭಾವಿ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್ ರೇ ಹುಟ್ಟಿದ್ದು ಮೇ ೨ ೧೯೨೧" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಬೆಂಗಳೂರಿನಲ್ಲಿ ಭಯಾನಕ ರೋಡ್ ರೇಜ್: ಬೈಕ್ ಸವಾರನ ಬೆನ್ನಟ್ಟಿ ಲಾರಿ ಗುದ್ದಿಸಿ ಹತ್ಯೆಗೆ ಯತ್ನಿಸಿದ ಚಾಲಕ!

ರೈಲಿನಲ್ಲಿ ನಿದ್ದೆಗೆ ಜಾರಿದ ವ್ಯಾಪಾರಿ; 5.53 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ!

ಜೈಪುರ-ಬಿಕಾನೇರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್-ಟ್ರಕ್ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು, 27 ಜನರಿಗೆ ಗಾಯ

SCROLL FOR NEXT