ಚಿರಂಜೀವಿ ಸರ್ಜಾ 
ಸಿನಿಮಾ ಸುದ್ದಿ

ಮತ್ತೆ ಒಂದಾದ ಕೆ ಎಂ ಚೈತನ್ಯ ಮತ್ತು ಚಿರಂಜೀವಿ ಸರ್ಜಾ

ಇನ್ನೂ ನಾಮಕರಣಗೊಳ್ಳದ ಸಿನೆಮಾದ ಚಿತ್ರೀಕರಣಕ್ಕಾಗಿ ಚಿರಂಜೀವಿ ಸರ್ಜಾ ಲಂಡನ್ ನಲ್ಲಿದ್ದಾರೆ. ಅಲ್ಲಿ ಚಿತ್ರೀಕರಣದ ಪ್ರಗತಿಯನ್ನು ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಳ್ಳುತ್ತಿದ್ದರೂ, ಸಿನೆಮಾದ ಬಗ್ಗೆ ಹೆಚ್ಚಿನ

ಬೆಂಗಳೂರು: ಇನ್ನೂ ನಾಮಕರಣಗೊಳ್ಳದ ಸಿನೆಮಾದ ಚಿತ್ರೀಕರಣಕ್ಕಾಗಿ ಚಿರಂಜೀವಿ ಸರ್ಜಾ ಲಂಡನ್ ನಲ್ಲಿದ್ದಾರೆ. ಅಲ್ಲಿ ಚಿತ್ರೀಕರಣದ ಪ್ರಗತಿಯನ್ನು ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಳ್ಳುತ್ತಿದ್ದರೂ, ಸಿನೆಮಾದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ.

ಮೂಲಗಳ ಪ್ರಕಾರ 'ಆಟಗಾರ' ಸಿನೆಮಾದ ನಿರ್ದೇಶಕ ಕೆ ಎಂ ಚೈತನ್ಯ ಕೂಡ ಲಂಡನ್ ನಲ್ಲಿದ್ದು ಈ ಸಿನೆಮಾದ ನಿರ್ದೇಶಕ ಎನ್ನಲಾಗಿದೆ. 'ಆಟಗಾರ' ಸಿನೆಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು.  

"ಚೈತನ್ಯ ಕಳೆದ ೧೫ ದಿನಗಳಿಂದ ಲಂಡನ್ ನಲ್ಲಿದ್ದಾರೆ. ಚಿತ್ರತಂಡದ ಜೊತೆಗೆ ಈ ತಿಂಗಳ ಕೊನೆಯವರೆಗೂ ಅವರು ಅಲ್ಲಿರಲಿದ್ದಾರೆ. ಅವರು ನಿರ್ಮಾಪಕರ ಜೊತೆಗೆ ಯಾವ ವಿಷಯವನ್ನು ಬಿಚ್ಚಿಡದ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಸಿನೆಮಾದ ಬಗ್ಗೆ ಅವರು ಮಾಹಿತಿ ನೀಡುವಂತಿಲ್ಲ. ನಿರ್ಮಾಪಕ ಹಸಿರು ನಿಶಾನೆ ತೋರಿದ ನಂತರವಷ್ಟೇ ಹೆಚ್ಚಿನ ವಿವರಗಳನ್ನು ಚೈತನ್ಯ ನೀಡಲಿದ್ದಾರೆ" ಎನ್ನುತ್ತವೆ ಮೂಲಗಳು.

ಏಪ್ರಿಲ್ ೨೭ ರಂದು ಚಿರಂಜೀವಿ ಸರ್ಜಾ ಮಾಡಿರುವ ಟ್ವೀಟ್ ಪ್ರಕಾರ "ಲಂಡನ್ ನಲ್ಲಿ ಆರನೇ ದಿನದ ಶೂಟಿಂಗ್" ಎಂದಿದೆ.

ಈ ಟ್ವೀಟ್ ಅನ್ನು ಅವರು ನಿರ್ದೇಶಕ, ನಟಿ ಶರ್ಮಿಳಾ ಮಾಂಡ್ರೆ ಮತ್ತು ಯೋಗಿಶ್ ದ್ವಾರಕೀಶ್ ಅವರಿಗೆ ಬರೆದಿದ್ದು, ಶರ್ಮಿಳಾ ಚಿತ್ರದ ನಾಯಕಿ ಮತ್ತು ಯೋಗಿಶ್ ನಿರ್ಮಾಪಕ ಎಂದು ಊಹಿಸಲಾಗಿದೆ. ಇದು ಚೈತನ್ಯ ಅವರ ಐದನೇ ಸಿನೆಮಾ ಆಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT