ಕಾನ್ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ 
ಸಿನಿಮಾ ಸುದ್ದಿ

ಕಾನ್ ಚಿತ್ರೋತ್ಸವ: ನೇರಳೆ ತುಟಿಬಣ್ಣದಿಂದ ಎಲ್ಲರ ಹುಬ್ಬೇರಿಸಿದ ಐಶ್ವರ್ಯ

ಕಾನ್ ಚಿತ್ರೋತ್ಸವಕ್ಕೆ ೧೫ನೆಯ ವರ್ಷ ಭಾಗವಹಿಸುತ್ತಿರುವ ಬಾಲಿವುಡ್ ನಟಿ ಐಶ್ವರ್ಯ ರೈ, ಕೆಂಪು ಹಾಸಿನ ಮೇಲೆ ನಡೆಯುವಾಗ ತಮ್ಮ ನೇರಳೆ ಬಣದ ಲಿಪ್ಸ್ಟಿಕ್ ನಿಂದ ಎಲ್ಲರ ಹುಬ್ಬೇರಿಸುವಂತೆ

ಕಾನ್: ಕಾನ್ ಚಿತ್ರೋತ್ಸವಕ್ಕೆ ೧೫ನೆಯ ವರ್ಷ ಭಾಗವಹಿಸುತ್ತಿರುವ ಬಾಲಿವುಡ್ ನಟಿ ಐಶ್ವರ್ಯ ರೈ, ಕೆಂಪು ಹಾಸಿನ ಮೇಲೆ ನಡೆಯುವಾಗ ತಮ್ಮ ನೇರಳೆ ಬಣದ ಲಿಪ್ಸ್ಟಿಕ್ ನಿಂದ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅವರ ಮುಂದಿನ ಚಿತ್ರ 'ಸರಬ್ಜಿತ್' ಸಿನೆಮಾ ಅಲ್ಲಿ ಪ್ರದರ್ಶನಗೊಂಡಿದೆ.

ಲಾರಿಯಲ್ ಪ್ಯಾರಿಸ್ ಸೌಂದರ್ಯವರ್ಧಕ ಉತ್ಪನ್ನದ ರಾಯಭಾರಿಯಾಗಿ ಭಾಗವಹಿಸುತ್ತಿರುವ ಐಶ್ವರ್ಯ ರೈ, ಕಾನ್ ಸಿನೆಮೋತ್ಸವದಲ್ಲಿ ತಮ್ಮ ಮುಂದಿನ ಚಲನಚಿತ್ರ 'ಸರಬ್ಜಿತ್' ಪ್ರದರ್ಶನದಲ್ಲಿ ಭಾನುವಾರ ಭಾಗವಹಿಸಿದ್ದರು. ಅವರ ಜೊತೆಗೆ ಸಿನೆಮಾದ ನಿರ್ದೇಶಕ ಓಮುಂಗ್ ಕುಮಾರ್, ನಟಿ ರಿಚಾ ಚಡ್ಡ ಮತ್ತು ನಿರ್ಮಾಪಕ ಜಾಕಿ ಭಗನಿ ಕೂಡ ಭಾಗವಹಿಸಿದ್ದರು.

ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ತಪ್ಪಿತಸ್ಥನೆಂದು ಶಿಕ್ಷೆಕೆ ಗುರಿಯಾಗಿದ್ದ ಭಾರತೀಯ ರೈತ ಸರಬ್ಜಿತ್ ಸಿಂಗ್ ಅವರ ಕುರಿತಾದ ಸಿನೆಮಾ ಇದು. ಏಪ್ರಿಲ್ ೨೦೧೩ರಲ್ಲಿ ಲಾಹೋರ್ ಜೈಲಿನಲ್ಲಿ ಇತರ ಖೈದಿಗಳು ಸರಬ್ಜಿತ್ ಮೇಲೆ ಹಲ್ಲೆ ನಡೆಸಿ ಕೊಂದಿದ್ದರು. ರಣದೀಪ್ ಹೂಡ ಸರಬ್ಜಿತ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ಅವರ ದೃಷ್ಟಿಯಲ್ಲಿ ಸಿನೆಮಾವನ್ನು ನಿರೂಪಿಸಲಾಗಿದ್ದು, ಈ ಪಾತ್ರವನ್ನು ಐಶ್ವರ್ಯ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT