ಜಿಗರ್ಥಂಡ ಸಿನೆಮಾದಲ್ಲಿ ನಟ ರವಿಶಂಕರ್ 
ಸಿನಿಮಾ ಸುದ್ದಿ

ರವಿಶಂಕರ್ ರಿಂದ, ಅವರಿಗಾಗಿಯೇ, ಅವರಿಗೋಸ್ಕರ ಜಿಗರ್ಥಂಡ ಹಾಡು

ಸಿನೆಮಾದಲ್ಲಿ ವಿಲನ್ ಗಳಿಗಾಗಿಯೇ ಹಾಡುಗಳನ್ನು ಗಿಟ್ಟಿಸಿಕೊಳ್ಳುವುದು ಅತಿ ವಿರಳ. ಆದರೆ ತಮಿಳು ಚಿತ್ರದ ಕನ್ನಡ ರಿಮೇಕ್ 'ಜಿಗರ್ಥಂಡ' ಸಿನೆಮಾದಲ್ಲಿ ಮುಖ್ಯ ಖಳನಾಯಕ ರವಿಶಂಕರ್ ಅವರಿಗಾಗಿಯೇ

ಬೆಂಗಳೂರು: ಸಿನೆಮಾದಲ್ಲಿ ವಿಲನ್ ಗಳಿಗಾಗಿಯೇ ಹಾಡುಗಳನ್ನು ಗಿಟ್ಟಿಸಿಕೊಳ್ಳುವುದು ಅತಿ ವಿರಳ. ಆದರೆ ತಮಿಳು ಚಿತ್ರದ ಕನ್ನಡ ರಿಮೇಕ್ 'ಜಿಗರ್ಥಂಡ' ಸಿನೆಮಾದಲ್ಲಿ ಮುಖ್ಯ ಖಳನಾಯಕ ರವಿಶಂಕರ್ ಅವರಿಗಾಗಿಯೇ ಹಾಡೊಂದನ್ನು ಸೇರಿಸಿಕೊಂಡಿರುವುದು ವಿಶೇಷ. ಈ ಸಿನೆಮಾದ ನಾಯಕ ನಟ ರಾಹುಲ್.

ಅರ್ಜುನ್ ಸಂಗೀತ ನೀಡಿರುವ ಈ ಹಾಡು ರವಿಶಂಕರ್ ರಿಂದ, ಅವರಿಗಾಗಿಯೇ, ಅವರಿಗೋಸ್ಕರವಂತೆ. ಮೊದಲ ಬಾರಿಗೆ ನಟ ಹಾಡಿರುವುದಲ್ಲದ, ಅದರ ಸಾಹಿತ್ಯವಾಗಿ ಅವರ ಇತರ ಸಿನೆಮಾಗಳ ಜನಪ್ರಿಯ ಸಂಭಾಷಣೆಗಳನ್ನು ಸೇರಿಸಲಾಗಿದೆಯಂತೆ. ಅವುಗಳಲ್ಲಿ ಬಹುತೇಕ ರವಿಶಂಕರ್ ಅವರಿಗೆ ಜನಪ್ರಿಯತೆ ತಂದುಕೊಟ್ಟ 'ಕೆಂಪೇಗೌಡ' ಸಿನೆಮಾದ ಸಂಭಾಷಣೆ.

'ಜಿಗರ್ಥಂಡ' ದಲ್ಲಿ ತಮ್ಮ ಪಾತ್ರದ ಬಗ್ಗೆ ಸಂತಸ ವ್ಯಕ್ತಪಡಿಸುವ ರವಿಶಂಕರ್ "ಇದು ನನ್ನ ಕನಸಿನ ಪಾತ್ರ. ಸಾಮಾನ್ಯವಾಗಿ ನನಗೆ ಖಳನಾಯಕ ಪಾತ್ರ ಸಿಗುತ್ತದೆ ಆದರೆ ಈ ಪಾತ್ರದಲ್ಲಿ ಋಣಾತ್ಮಕ ಛಾಯೆ ಇದ್ದರೂ, ಮನರಂಜನಾತ್ಮಕವಾದದ್ದು ಕೂಡ. 'ಕೆಂಪೇಗೌಡ' ಸಿನೆಮಾದಲ್ಲಿ ಅರ್ಮುಗ ಕೋಟೆ ಪಾತ್ರದಿಂದ ನನಗೆ ಜನಪ್ರಿಯತೆ ಬಂದಿದ್ದರಿಂದ, ಇಲ್ಲೂ ಕೂಡ ನಿರ್ದೇಶಕರು ನನಗೆ ಅದೇ ಹೆಸರನ್ನು ಉಳಿಸಿಕೊಂಡಿದ್ದಾರೆ. ನಾನು ಒಂದು ಹಾಡು ಕೂಡ ಹಾಡಿದ್ದೇನೆ. ನನ್ನು ಸಂತಸ ವಿವರಿಸಲು ಕಷ್ಟ. ಇದು ದೇವರ ದಯೆ" ಎನ್ನುತ್ತಾರೆ.

ಈ ಸಿನೆಮಾದಲ್ಲಿ ಚಿಕ್ಕಣ್ಣ. ಸಂಯುಕ್ತ ಹೊರನಾಡ, ಸಾಧು ಕೋಕಿಲಾ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT