ನಟಿ ಪ್ರೇಮ 
ಸಿನಿಮಾ ಸುದ್ದಿ

17 ವರ್ಷಗಳ ನಂತರ ಮತ್ತೆ ಒಟ್ಟಾಗಿ ನಟಿಸಲಿರುವ ಉಪೇಂದ್ರ-ಪ್ರೇಮ

'ಕಲ್ಪನಾ-೨', 'ಮುಕುಂದ ಮುರಾರಿ' ಸಿನೆಮಾಗಳ ನಂತರ ನಟ-ನಿರ್ದೇಶಕ ಉಪೇಂದ್ರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶೀರ್ಷಿಕೆ ಎಂದಿನಂತೆ ವಿಚಿತ್ರವಾಗಿದೆ. 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ'

ಬೆಂಗಳೂರು: 'ಕಲ್ಪನಾ-೨', 'ಮುಕುಂದ ಮುರಾರಿ' ಸಿನೆಮಾಗಳ ನಂತರ ನಟ-ನಿರ್ದೇಶಕ ಉಪೇಂದ್ರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶೀರ್ಷಿಕೆ ಎಂದಿನಂತೆ ವಿಚಿತ್ರವಾಗಿದೆ. 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಎಂಬ ಉದ್ದದ ಹೆಸರಿನ ಈ ಚಿತ್ರ ತೆಲುಗು ಸಿನೆಮಾ 'ಸೊಗ್ಗದೆ ಚಿನ್ನಿ ನಯನ'ದಿಂದ ಸ್ಫೂರ್ತಿ ಪಡೆದಿದೆಯಂತೆ. ಕನ್ನಡದಕ್ಕೆ ಕಥೆ ಉಪೇಂದ್ರ ಅವರೇ ಬರೆದಿದ್ದು, ಅರುಣ್ ಲೋಕನಾಥ್ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ. ಈ ಹಿಂದ ಪ್ರಿಯಾಂಕಾ, ಪ್ರಭುದೇವ ಮತ್ತು ಉಪೇಂದ್ರ ನಟನೆಯ ಎಚ್೨ಒ ಸಿನೆಮಾ ಕೂಡ ಇವರೇ ನಿರ್ದೇಶಿಸಿದ್ದರು.

'ಉಪೇಂದ್ರ ಮತ್ತೆ ಹುಟ್ಟಿ ಬಾ.. ' ಸಿನೆಮಾದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರೇಮಾ ಮೊದಲ ಬಾರಿಗೆ ಉಪೇಂದ್ರ ನಿರ್ದೇಶನದ 'ಓಂ' ಸಿನೆಮಾದಲ್ಲಿ ನಟಿಸಿದ್ದರು ನಂತರ 'ಉಪೇಂದ್ರ' ಸಿನೆಮಾದಲ್ಲೂ ಕೂಡ ಉಪೇಂದ್ರ ಜೊತೆಗೆ ನಟಿಸಿದ್ದರು. ೨೦೦೯ರಲ್ಲಿ 'ಶಿಶಿರ' ಸಿನೆಮಾದ ನಂತರ ನಟನೆಯಿಂದ ದೂರ ಉಳಿದಿದ್ದರು.

"೧೭ ವರ್ಷಗಳ ನಂತರ ಉಪೇಂದ್ರ ಜೊತೆಗೆ ಒಟ್ಟಿಗೆ ನಟಿಸಲಿದ್ದಾರೆ ಪ್ರೇಮ" ಎಂದು ಮೂಲಗಳು ತಿಳಿಸಿವೆ.

ಉಪೇಂದ್ರ ಅವರ ಕೆಲಸಗಳನ್ನು ನಿರ್ವಹಿಸುವ ಶ್ರೀರಾಮ್ ಈ ಸಿನೆಮಾದ ನಿರ್ಮಾಪಕರಂತೆ. ಎಲ್ಲವೂ ಸುಸೂತ್ರವಾಗಿ ನೆರವೇರಿದರೆ ಜೂನ್ ಎರಡನೇ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಸದ್ಯಕ್ಕೆ ನಂದ ಕಿಶೋರ್ ನಿರ್ದೇಶನದ 'ಮುಕುಂದ ಮುರಾರಿ' ಸಿನೆಮಾದ ಚಿತ್ರಿಕರಣದ ಮುಕ್ತಾಯ ಹಂತದಲ್ಲಿ ಉಪೇಂದ್ರ ಭಾಗಿಯಾಗಿದ್ದು, ಅನಂತ ರಾಜು ನಿರ್ದೇಶನದ 'ಕಲ್ಪನಾ-೨' ಸಿನೆಮಾದ ಹಾಡಿನ ಚಿತ್ರೀಕರಣದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT