'ಕಹಿ' ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

ನನ್ನ ಕನಸಿಗೆ ರೆಕ್ಕೆ ಕಟ್ಟಿದ ಸಿನೆಮಾ 'ಕಹಿ': ಸೂರಜ್ ಗೌಡ

ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಮೂಲಕ ನಟ ಸೂರಜ್ ಗೌಡ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು, ಅವರನ್ನು ಬೆಳ್ಳಿತೆರೆಗೆ ಕರೆತಂದ ಸಿನೆಮಾ 'ಕಹಿ'.

ಬೆಂಗಳೂರು: ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಸಿನೆಮಾದ ಮೂಲಕ ನಟ ಸೂರಜ್ ಗೌಡ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪಾದಾರ್ಪಣೆ ಮಾಡಿದರು, ಅವರನ್ನು ಬೆಳ್ಳಿತೆರೆಗೆ ಕರೆತಂದ ಸಿನೆಮಾ 'ಕಹಿ'. ಈ ಸಿನೆಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸವಾಗಿರುವ ನಟ ಇದು ಅವರಿಗೆ ವಿಶೇಷ ಸಿನೆಮಾ ಹೇಗೆಂದು ತಿಳಿಸುತ್ತಾರೆ. 
"ನಾನು ಈ ಸಿನಿಮಾಗೋಸ್ಕರವೇ ಮೈಸೂರಿನಿಂದ ಬೆಂಗಳೂರಿಗೆ ಬಂದದ್ದು ಮತ್ತು ನನ್ನ ವೃತ್ತಿಯನ್ನು ಮಾಡೆಲಿಂಗ್ ನಿಂದ ನಟನೆಗೆ ಬದಲಿಸಿಕೊಂಡಿದ್ದು. ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದ ಸಿನೆಮಾ ಕೂಡ ಇದು" ಎಂದು ನೆನಪಿಸಿಕೊಳ್ಳುತ್ತಾರೆ ಸೂರಜ್.
ಈಗ ಸದ್ಯಕ್ಕೆ ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸುತ್ತಿರುವ ನಟ ತಮ್ಮ ವೃತ್ತಿ ಜೀವನವನ್ನು ನೈಜಕ್ಕೆ ಹತ್ತಿರವಾದ ಕಲಾತ್ಮಕ ಚಿತ್ರದಿಂದ ಪ್ರಾರಂಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. "ಕಹಿ ನಾಲಗೆಗೆ ಸಂಬಂಧಿಸಿದ ರುಚಿಯಾದರು, ಸಿನೆಮಾದಲ್ಲಿ ಇದು ಭಾವನೆಗಳಿಗೆ ಸಂಬಂಧಿಸಿದ್ದು" ಎಂದು ವಿವರಿಸುತ್ತಾರೆ ಸೂರಜ್. 
"ಮೆಟ್ರೋ ನಗರದಲ್ಲಿ ಜೀವಿಸುವ ನಾಲ್ವರು ಯುವಕರ ಬಗೆಗಿನ ಚಿತ್ರ ಇದಾಗಿದ್ದು, ಸೈಕೋಪಾಥ್, ಕುಡುಕ ಮತ್ತು ಡ್ರಗ್ ಚಟಕ್ಕೆ ಬಿದ್ದಿರುವ ನನ್ನ ಪಾತ್ರದ ಸುತ್ತ ಎಲ್ಲ ಪಾತ್ರಗಳು ಸುತ್ತುತ್ತವೆ" ಎನ್ನುವ ಅವರು ಇಂತಹ ವ್ಯತಿರಿಕ್ತ ಪಾತ್ರವನ್ನು ಮಾಡುವುದು ಸವಾಲಾಗಿತ್ತು ಎನ್ನುತ್ತಾರೆ. 
"ಇಂದಿನ ಯುವಕರಿಗೆ ಆಪ್ತವಾಗುವ ಸಿನೆಮಾ ಇದೆ. ವಿಭಿನ್ನ ಶೈಲಿಯ ಚಿತ್ರಗಳನ್ನು ಜನ ಮೆಚ್ಚುತ್ತಿರುವ ಸಮಯದಲ್ಲಿ ಈ ಸಿನೆಮಾ ಮೂಡುತ್ತಿರುವುದು ಒಳ್ಳೆಯದು" ಎನ್ನುತ್ತಾರೆ ಸೂರಜ್. 
ಚೊಚ್ಚಲ ನಿರ್ದೇಶಕ ಅರವಿಂದ್ ಶಾಸ್ತ್ರಿ ಅವರೇ 'ಕಹಿ' ಸಿನೆಮಾದ ಸಂಕಲನಕಾರ ಕೂಡ. ಸೂರಜ್ ಗೌಡ ಜೊತೆಗೆ ಕೃಷಿ ತಾಪಂಡ, ಹರೀಶ್ವರ, ರಮೇಶ್ ಭಟ್, ಶ್ರೀನಿವಾಸ್ ಮೇಷ್ಟ್ರು, ಕಿಶೋರಿ ಬಲ್ಲಾಳ್, ಮಹೇಶ್ ಬುಂಗ್, ಮಾತಂಗಿ ಪ್ರಸನ್ನ ಮತ್ತು ಅರವಿಂದ್ ಅಯ್ಯರ್ ಕೂಡ ತಾರಾಗಣದ ಭಾಗವಾಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT