ಸಿನಿಮಾ ಸುದ್ದಿ

'ನಟನ ಮಗನೆಂಬ ಕಾರಣಕ್ಕೆ ನನಗೇನು ಕೆಂಪು ಹಾಸಿನ ಸ್ವಾಗತ ಸಿಗುವುದಿಲ್ಲ': ರಾಜವರ್ಧನ್

Guruprasad Narayana
ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ 'ಫ್ಲೈ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನೆಮಾದ ಚಿತ್ರೀಕರಣ ಸ್ಥಗಿತಗೊಂಡಿದೆ "ನಿರ್ಮಾಣದ ತೊಂದರೆಗಳಿಂದ 'ಫ್ಲೈ' ಸಿನೆಮಾದ ಚಿತ್ರೀಕರಣದಲ್ಲಿ ಅಡಚಣೆ ಉಂಟಾಗಿದೆ" ಎನ್ನುತ್ತಾರೆ ರಾಜವರ್ಧನ್. 
ಈಗ ಮತ್ತೊಂದು ಬಹುನಟರ ಚಿತ್ರವೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ರಾಜವರ್ಧನ್ ಖುಷಿಯಿಂದಿದ್ದಾರೆ. 'ನೂರೊಂದು ನೆನಪು' ಸಿನೆಮಾದಾ ಚಿತ್ರೀಕರಣವನ್ನು ರಾಜವರ್ಧನ್ ಮುಗಿಸಿದ್ದಾರೆ. 
ಕುಮಾರೇಶ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್ ಮತ್ತು ಮೇಘನಾ ರಾಜ್ ಜೊತೆಗೆ ರಾಜವರ್ಧನ್ ನಟಿಸಿದ್ದಾರೆ. "ನಾನು 'ಫ್ಲೈ' ಸಿನೆಮಾದಲ್ಲಿ ನೂರಕ್ಕೆ ನೂರು ಪ್ರತಿಶತ ತೊಡಗಿಸಿಕೊಂಡಿದ್ದರು, ನೂರೊಂದು ನೆನಪು ಸಿನೆಮಾದಲ್ಲಿ ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಯಿತು" ಎನ್ನುತ್ತಾರೆ. 
ಈಗ ನಟ 'ಇರಾ' ಎಂಬ ಹೊಸ ನಿನೆಮಾದಲ್ಲಿ ಕೂಡ ನಟಿಸಲಿದ್ದಾರೆ. "ಪವನ್ ಒಡೆಯರ್ ಅವರ ಬ್ಯಾನರ್ ಇಂದ ಈ ಸಿನೆಮಾ ನಿರ್ಮಾಣ ಆಗುತ್ತಿರುವುದರಿಂದ ಇದನ್ನು ಆಯ್ಕೆ ಮಾಡಿಕೊಂಡೆ" ಎನ್ನುತ್ತಾರೆ ನಟ. 
SCROLL FOR NEXT