ದೀಪಾ ಸನ್ನಿಧಿ 
ಸಿನಿಮಾ ಸುದ್ದಿ

'ಮೊದಲಿಗೆ ಮಾಂಜಾ ಚಿತ್ರಕಥೆ ಬರೆದಿದ್ದು ಯಶ್ ಗಾಗಿ': ಡಾ. ಸೂರಿ

ಯಶ್ ಮತ್ತು ರಮ್ಯಾ ಒಟ್ಟಿಗೆ ನಟಿಸಿದ್ದ 'ಲಕ್ಕಿ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ಡಾ. ಸೂರಿ ತಮ್ಮ ಎರಡನೇ ಯೋಜನೆ 'ಮಾಂಜಾ'ಗೆ ಸಿದ್ಧರಾಗುತ್ತಿದ್ದಾತೆ.

ಬೆಂಗಳೂರು: ಯಶ್ ಮತ್ತು ರಮ್ಯಾ ಒಟ್ಟಿಗೆ ನಟಿಸಿದ್ದ 'ಲಕ್ಕಿ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ಡಾ. ಸೂರಿ ತಮ್ಮ ಎರಡನೇ ಯೋಜನೆ 'ಮಾಂಜಾ'ಗೆ ಸಿದ್ಧರಾಗುತ್ತಿದ್ದಾತೆ. ವಿಜಯದಶಮಿ ದಿನ ಯಶ್ ಕ್ಲಾಪ್ ಮಾಡುವ ಮೂಲಕ ಸಿನೆಮಾದ ಮುಹೂರ್ತ ನೆರವೇರಿದೆ. 
ದಂತ ವೈದ್ಯ ವೃತ್ತಿಯಿಂದ ನಿರ್ದೇಶನದತ್ತ ಜಿಗಿದ ಸೂರಿ, 'ಮಾಂಜಾ' ಸಿನಿಮಾಗಾಗಿ ಅನೀಶ್ ತೇಜೇಶ್ವರ್ ಮತ್ತು ದೀಪಾ ಸನ್ನಿಧಿ ಅವರನ್ನು ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಟೀಸರ್ ಹೊರತರಲು ನಿರತರಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. 
ಡಾ. ಸೂರಿ ಹೇಳುವಂತೆ 'ಮಾಂಜಾ' ಕನ್ನಡದ ಆಡುಭಾಷೆಯಲ್ಲಿ ಸಿಹಿ ಸೇಡು ಎಂಬ ಅರ್ಥದಲ್ಲಿ ಬಳುಸತ್ತಾರೆ ಮತ್ತು ಅನಿಶ್ ಅವರನ್ನು ಈ ಸಿನೆಮಾಗೆ ಶಿಪಾರಸ್ಸು ಮಾಡಿದ್ದು ಯಶ್ ಅವರೇ ಅಂತೆ. "ಅನೀಶ್ ಅವರಿಗೆ ಒಳ್ಳೆಯ ಸಾಮರ್ಥ್ಯ ಇದೆ ಮತ್ತು ನಾನು ಅವರಿಗಾಗಿಯೇ ಸಿನೆಮಾ ಮಾಡಬೇಕು ಎಂದು ಹೇಳಿದ್ದು ಯಶ್" ಎನ್ನುತ್ತಾರೆ. 
ಇದು ಕಮರ್ಷಿಯಲ್ ಮನರಂಜನಾ ಚಿತ್ರ ಎಂದು ಬಣ್ಣಿಸುವ ನಿರ್ದೇಶಕ ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್, ರಂಗಾಯಣ ರಘು ಮತ್ತು ಕಡ್ಡಿಪುಡಿ ಚಂದ್ರು ಸಿನೆಮಾದ ತಾರಾಗಣದಲ್ಲಿದ್ದಾರಂತೆ. "ಅರುಣ್ ಸಾಗರ್ ಕೂಡ ನಮ್ಮನ್ನು ಸೇರುವ ಸಾಧ್ಯತೆಯಿದೆ ಮತ್ತು ಬಹುದೊಡ್ಡ ಮನರಂಜನಾ ತಾರಾಗಣ ಇದಾಗಲಿದೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT