ದೀಪಾ ಸನ್ನಿಧಿ 
ಸಿನಿಮಾ ಸುದ್ದಿ

'ಮೊದಲಿಗೆ ಮಾಂಜಾ ಚಿತ್ರಕಥೆ ಬರೆದಿದ್ದು ಯಶ್ ಗಾಗಿ': ಡಾ. ಸೂರಿ

ಯಶ್ ಮತ್ತು ರಮ್ಯಾ ಒಟ್ಟಿಗೆ ನಟಿಸಿದ್ದ 'ಲಕ್ಕಿ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ಡಾ. ಸೂರಿ ತಮ್ಮ ಎರಡನೇ ಯೋಜನೆ 'ಮಾಂಜಾ'ಗೆ ಸಿದ್ಧರಾಗುತ್ತಿದ್ದಾತೆ.

ಬೆಂಗಳೂರು: ಯಶ್ ಮತ್ತು ರಮ್ಯಾ ಒಟ್ಟಿಗೆ ನಟಿಸಿದ್ದ 'ಲಕ್ಕಿ' ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ನಿರ್ದೇಶಕ ಡಾ. ಸೂರಿ ತಮ್ಮ ಎರಡನೇ ಯೋಜನೆ 'ಮಾಂಜಾ'ಗೆ ಸಿದ್ಧರಾಗುತ್ತಿದ್ದಾತೆ. ವಿಜಯದಶಮಿ ದಿನ ಯಶ್ ಕ್ಲಾಪ್ ಮಾಡುವ ಮೂಲಕ ಸಿನೆಮಾದ ಮುಹೂರ್ತ ನೆರವೇರಿದೆ. 
ದಂತ ವೈದ್ಯ ವೃತ್ತಿಯಿಂದ ನಿರ್ದೇಶನದತ್ತ ಜಿಗಿದ ಸೂರಿ, 'ಮಾಂಜಾ' ಸಿನಿಮಾಗಾಗಿ ಅನೀಶ್ ತೇಜೇಶ್ವರ್ ಮತ್ತು ದೀಪಾ ಸನ್ನಿಧಿ ಅವರನ್ನು ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಟೀಸರ್ ಹೊರತರಲು ನಿರತರಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ. 
ಡಾ. ಸೂರಿ ಹೇಳುವಂತೆ 'ಮಾಂಜಾ' ಕನ್ನಡದ ಆಡುಭಾಷೆಯಲ್ಲಿ ಸಿಹಿ ಸೇಡು ಎಂಬ ಅರ್ಥದಲ್ಲಿ ಬಳುಸತ್ತಾರೆ ಮತ್ತು ಅನಿಶ್ ಅವರನ್ನು ಈ ಸಿನೆಮಾಗೆ ಶಿಪಾರಸ್ಸು ಮಾಡಿದ್ದು ಯಶ್ ಅವರೇ ಅಂತೆ. "ಅನೀಶ್ ಅವರಿಗೆ ಒಳ್ಳೆಯ ಸಾಮರ್ಥ್ಯ ಇದೆ ಮತ್ತು ನಾನು ಅವರಿಗಾಗಿಯೇ ಸಿನೆಮಾ ಮಾಡಬೇಕು ಎಂದು ಹೇಳಿದ್ದು ಯಶ್" ಎನ್ನುತ್ತಾರೆ. 
ಇದು ಕಮರ್ಷಿಯಲ್ ಮನರಂಜನಾ ಚಿತ್ರ ಎಂದು ಬಣ್ಣಿಸುವ ನಿರ್ದೇಶಕ ಚಿಕ್ಕಣ್ಣ, ಸಾಧುಕೋಕಿಲಾ, ರವಿಶಂಕರ್, ರಂಗಾಯಣ ರಘು ಮತ್ತು ಕಡ್ಡಿಪುಡಿ ಚಂದ್ರು ಸಿನೆಮಾದ ತಾರಾಗಣದಲ್ಲಿದ್ದಾರಂತೆ. "ಅರುಣ್ ಸಾಗರ್ ಕೂಡ ನಮ್ಮನ್ನು ಸೇರುವ ಸಾಧ್ಯತೆಯಿದೆ ಮತ್ತು ಬಹುದೊಡ್ಡ ಮನರಂಜನಾ ತಾರಾಗಣ ಇದಾಗಲಿದೆ" ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT