ಮುಂಗಾರು ಮಳೆ 2 ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಮುಂಗಾರು ಮಳೆ 2' ಹಾಡುಗಳು ಅಂತರ್ಜಾಲದಲ್ಲಿ ಸಂಚಲನ; ನೂರಕ್ಕೂ ಹೆಚ್ಚು ಮರು ಆವೃತ್ತಿಗಳು

ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ 2' ಮೂರನೇ ವಾರಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ಈ ಸಿನೆಮಾದ ಹಾಡುಗಳು 'ಸರಿಯಾಗಿ ನೆನಪಿದೆ', 'ಗಮನಿಸು' ಮತ್ತು 'ಕನಸಲೂ' ಅಂತರ್ಜಾಲದಲ್ಲಿ

ಬೆಂಗಳೂರು: ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ 2' ಮೂರನೇ ವಾರಕ್ಕೆ ಕಾಲಿಡುತ್ತಿರುವ ಸಮಯದಲ್ಲಿ ಈ ಸಿನೆಮಾದ ಹಾಡುಗಳು 'ಸರಿಯಾಗಿ ನೆನಪಿದೆ', 'ಗಮನಿಸು' ಮತ್ತು 'ಕನಸಲೂ' ಅಂತರ್ಜಾಲದಲ್ಲಿ ಜನಪ್ರಿಯವಾಗಿದ್ದು ಭಾರಿ ಸಂಚಲನ ಮೂಡಿಸಿವೆ. 
ಜನ ಈ ಹಾಡುಗಳನ್ನು ಎಷ್ಟು ಮೆಚ್ಚಿದ್ದಾರೆ ಎಂದರೆ, ಈ ಹಾಡುಗಳನ್ನು ಮತ್ತೆ ರೆಕಾರ್ಡ್ ಮಾಡಿ ಮರು ಆವೃತ್ತಿಗಳನ್ನು ಯೂಟ್ಯೂಬ್ ನಲ್ಲಿ ಹಾಕುತ್ತಿದ್ದಾರೆ. ಈ ಪ್ರತಿಕ್ರಿಯೆಯಿಂದ ಸಂತಸಗೊಂಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ "ದಿನಾಲು ಸರಾಸರಿಯಾಗಿ ಎರಡು ಮರು ಆವೃತ್ತಿ ಹಾಡುಗಳು ಬರುತ್ತಿವೆ" ಎನ್ನುತ್ತಾರೆ. 
"ಕೆಲವು ಬಾರಿ ಹಾಡುಗಳನ್ನು ಮತ್ತೆ ಅರೇಂಜ್ ಮಾಡಿ ಹಾಡಿದ್ದರೆ, ಇನ್ನು ಕೆಲವೊಮ್ಮೆ ವಿಭಿನ್ನ ವಾದ್ಯಗಳೊಂದಿಗೆ, ರ್ಯಾಪ್ ಸಂಗೀತದೊಂದಿಗೆ ಹಾಡಿರುವ ಆವೃತ್ತಿಗಳು ಬಿಡುಗಡೆಯಾಗಿವೆ. ಒಂದು ಆವೃತ್ತಿಯಲ್ಲಿ ಯುವತಿಯೊಬ್ಬಳು, ಹಿನ್ನಲೆಯಲ್ಲಿ ಸಂಗೀತವೇ ಇಲ್ಲದೆ ಹಾಡಿದ್ದಾರೆ. ಬಹುತೇಕ ಈ ಎಲ್ಲ ಮರು ಆವೃತ್ತಿಗಳು ವೈರಲ್ ಆಗಿದ್ದು 50 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿವೆ" ಎನ್ನುತ್ತಾರೆ ಸಂಗೀತ ನಿರ್ದೇಶಕ. 
ಈ ಟ್ರೆಂಡ್ ಭಾರತವನ್ನು ಮೀರಿ ಬೆಳೆದಿದೆ ಎನ್ನುವ ಅರ್ಜುನ್ "ದುಬೈ, ಲಂಡನ್, ಕತಾರ್, ಬೆಂಗಳೂರು, ಮುಂಬೈ ಎಲ್ಲ ಭಾಗಗಳಿಂದಲೂ ರೆಕಾರ್ಡಿಂಗ್ ಗಳು ಬರುತ್ತಿವೆ. ಅವುಗಳೆಲ್ಲವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇವೆ" ಎನ್ನುತ್ತಾರೆ ಅರ್ಜುನ್. 
ಇವುಗಳಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೆಕ್ಕಿ ಮುನ್ನೆಲೆಗೆ ತರುವ ಇರಾದೆ ಹೊಂದಿರುವ ಸಂಗೀತ ನಿರ್ದೇಶಕ "ಸದ್ಯಕ್ಕೆ ಅಲ್ಲದಿದ್ದರೂ, ಅವುಗಳಲ್ಲಿ ಕೆಲವನ್ನು ಆಯ್ಕೆ ಮಾಡಿ ಮುನ್ನೆಲೆಗೆ ತರುವ ಇಚ್ಛೆ ಇದೆ" ಎಂದು ವಿವರಿಸುತ್ತಾರೆ. 
ಗಣೇಶ್, ನೇಹಾ ಶೆಟ್ಟಿ ಮತ್ತು ರವಿಚಂದ್ರನ್ ನಟಿಸಿರುವ ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

NCERT ಪಠ್ಯಪುಸ್ತಕ ವಿವಾದ: ನಾವು ನ್ಯಾಯಾಂಗವನ್ನು ಗೌರವಿಸುತ್ತೇವೆ; ಬಿಜೆಪಿ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

SCROLL FOR NEXT