'ದಂಡುಪಾಳ್ಯ೨'ರಲ್ಲಿ ಪೂಜಾ ಗಾಂಧಿ ಮಹಿಳಾ ಪಾತ್ರಧಾರಿಗೆ ಚುಂಬಿಸುತ್ತಿರುವ ದೃಶ್ಯ 
ಸಿನಿಮಾ ಸುದ್ದಿ

'ದಂಡುಪಾಳ್ಯ-2' ಇನ್ನು ಹೆಚ್ಚು ಪ್ರಚೋದನಕಾರಿ!

ಶ್ರೀನಿವಾಸ ರಾಜು ಅವರ 'ದಂಡುಪಾಳ್ಯ' ಮೊದಲನೇ ಭಾಗಗ ಕೆಲವು ದಿಟ್ಟತನದ ದೃಶ್ಯಗಳು ಹೆಚ್ಚೆಚ್ಚು ಚರ್ಚೆಗೆ ಗ್ರಾಸವಾಗಿದ್ದವು. ಪೂಜಾಗಾಂಧಿ ಅವರ ಕೆಲವು ದೃಶ್ಯಗಳಂತೂ ಕೊಂಚ ವಿವಾದವನ್ನು

ಬೆಂಗಳೂರು: ಶ್ರೀನಿವಾಸ ರಾಜು ಅವರ 'ದಂಡುಪಾಳ್ಯ' ಮೊದಲನೇ ಭಾಗಗ ಕೆಲವು ದಿಟ್ಟತನದ ದೃಶ್ಯಗಳು ಹೆಚ್ಚೆಚ್ಚು ಚರ್ಚೆಗೆ ಗ್ರಾಸವಾಗಿದ್ದವು. ಪೂಜಾಗಾಂಧಿ ಅವರ ಕೆಲವು ದೃಶ್ಯಗಳಂತೂ ಕೊಂಚ ವಿವಾದವನ್ನು ಎಬ್ಬಿಸಿದ್ದವು. 
"ಪೂಜಾ ಅವರ ನಗ್ನ ಬೆನ್ನಿನ ದೃಶ್ಯ ಹಿಡಿದು ಸಲ್ಲದ ಚರ್ಚೆಗಳು ಎದ್ದಿದ್ದವು ಆದರೆ ಜನ ಕೊನೆಗೆ ಸಿನೆಮಾ ನೋಡಿದ ಮೇಲೆ ಅದು ಸಿನೆಮಾಗೆ ಅಗತ್ಯವಿದ್ದ ದೃಶ್ಯ ಎಂದು ತಿಳಿದರು" ಎನ್ನುವ ನಿರ್ದೇಶಕ ಈಗ ದ್ವಿತೀಯ ಭಾಗದಲ್ಲಿಯೂ ಇನ್ನಷ್ಟು ಪ್ರಚೋದನಕಾರಿ ಸಂಗತಿಗಳನ್ನು ಚರ್ಚಿಸಿದ್ದಾರೆ. 
ನಟಿ ಪೂಜಾಗಾಂಧಿ ಮತ್ತೊಬ್ಬ ಮಹಿಳಾ ಪಾತ್ರವನ್ನು ಚುಂಬಿಸುತ್ತಿರುವ ದೃಶ್ಯ ಈಗ 'ದಂಡುಪಾಳ್ಯ೨'ರಲ್ಲಿ ಮೂಡಿ ಬಂದಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದು ಕಥಾ ನಿರೂಪಣೆಗೆ ಅಗತ್ಯವಾಗಿದ್ದ ದೃಶ್ಯ ಎನ್ನುವ ನಿರ್ದೇಶಕ ಶ್ರೀನಿವಾಸ್ "ಇದು ಇಬ್ಬರು ಜೈಲು ಖೈದಿಗಳು ಚುಂಬಿಸುವ ದೃಶ್ಯ, ಪ್ರಚಾರಕ್ಕಾಗಿ ಮಾಡಿರುವುದಲ್ಲ" ಎನ್ನುತ್ತಾರೆ. "ಸ್ಕ್ರಿಪ್ಟ್ ಗೆ ಅಗತ್ಯವಿದ್ದಂತೆ ನಾನು ಚಿತ್ರೀಕರಿಸುತ್ತೇನೆ ನಂತರ ಪ್ರೇಕ್ಷಕರಿಗೆ ನಿರ್ಧರಿಸಲು ಬಿಡುತ್ತೇನೆ. ನಾನು ನನ್ನ ಸಿನೆಮಾಗಳನ್ನು ಪ್ರೀತಿಸುತ್ತೇನೆ ಮತ್ತು ಅದರಲ್ಲಿ ಸುಳ್ಳುಗಳನ್ನು ಉಳಿಸುವುದಿಲ್ಲ. ಎಲ್ಲವನ್ನು ಪ್ರಾಮಾಣಿಕತೆಯಲ್ಲೇ ನಾನು ಮಾಡುವುದು" ಎನ್ನುತ್ತಾರೆ. 
ನಿರ್ದೇಶಕ ಶ್ರೀನಿವಾಸ್ ಹೇಳುವಂತೆ ಈ ದೃಶ್ಯವನ್ನು ಚಿತ್ರೀಕರಿಸಲು ಪೂಜಾ ಮೊದಲ ಬಾರಿಗೆ ತುಸು ಹಿಂಜರಿದಿದ್ದರಂತೆ. ಆದರೆ ನಂತರ ಅದನ್ನು ನಿಭಾಯಿಸಿದರು ಎನ್ನುವ ಅವರು "ಕೊನೆಗೆ ಅವರಿಗೆ ಸ್ಕ್ರಿಪ್ಟ್ ನಲ್ಲಿ ನಂಬಿಕೆಯಿತ್ತು ಮತ್ತು ಈ ದೃಶ್ಯದ ನಾಲ್ಕನೇ ಬಾರಿ ಚಿತ್ರೀಕರಣದ ವೇಳೆಗೆ ನಿಖರವಾಗಿ ಅಭಿನಯಿಸಿದರು" ಎನ್ನುತ್ತಾರೆ. 
'ದಂಡುಪಾಳ್ಯ೨' ಸಿನೆಮಾದಲ್ಲಿ ಶ್ರುತಿ, ಮಾರ್ಕಂಡ್ ದೇಶಪಾಂಡೆ, ರವಿ ಕಾಳೆ, ಸಂಜನಾ, ಪೆಟ್ರೋಲ್ ಪ್ರಸನ್ನ, ಕರಿಸುಬ್ಬು, ಯತಿರಾಜ್, ಡ್ಯಾನಿ, ಜಯದೇವ್ ಮತ್ತು ಮುನಿ ಕೂಡ ನಟಿಸಿದ್ದಾರೆ. ಈಗ ಸಿನೆಮಾದ ಮೂರನೇ ಭಾಗವನ್ನು ಕೂಡ ಚಿತ್ರೀಕರಿಸುತ್ತಿರುವ ನಿರ್ದೇಶಕ, ಬಾಕ್ಸ್ ಆಫಿಸ್ ಗಳಿಕೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕಿದ್ದು ವೆಂಕಟ್ ಪ್ರಸಾದ್ ಅವರ ಸಿನೆಮ್ಯಾಟೋಗ್ರಫಿ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT