ರಮ್ಯ ಕೃಷ್ಣ 
ಸಿನಿಮಾ ಸುದ್ದಿ

ಪ್ರೇಕ್ಷಕರ ಪ್ರೀತಿ ಬೆಂಬಲದಿಂದ ತೀವ್ರ ಸಂತಸಗೊಂಡಿದ್ದೇನೆ: ರಮ್ಯ ಕೃಷ್ಣ

'ಬಾಹುಬಲಿ೨:ಅಂತ್ಯ' ಸಿನೆಮಾದಲ್ಲಿ ರಾಣಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯ ಕೃಷ್ಣ, ಸಿನೆಮಾದ ನಟನೆಗಾಗಿ ಪ್ರೇಕ್ಷಕರು ಪ್ರೀತಿ ಮತ್ತು ಬೆಂಬಲ ದೊಡ್ಡ ಮಟ್ಟದಲ್ಲಿ ತೋರುತ್ತಿರುವುದಕ್ಕೆ ತೀವ್ರ

ಚೆನ್ನೈ: 'ಬಾಹುಬಲಿ೨:ಅಂತ್ಯ' ಸಿನೆಮಾದಲ್ಲಿ ರಾಣಿ ಶಿವಗಾಮಿ ಪಾತ್ರದಲ್ಲಿ ನಟಿಸಿರುವ ನಟಿ ರಮ್ಯ ಕೃಷ್ಣ, ಸಿನೆಮಾದ ನಟನೆಗಾಗಿ ಪ್ರೇಕ್ಷಕರು ಪ್ರೀತಿ ಮತ್ತು ಬೆಂಬಲ ದೊಡ್ಡ ಮಟ್ಟದಲ್ಲಿ ತೋರುತ್ತಿರುವುದಕ್ಕೆ ತೀವ್ರ ಸಂತಸಗೊಂಡಿದುವುದಾಗಿ ಶನಿವಾರ ಹೇಳಿದ್ದಾರೆ. 
"ನಿಮೆಲ್ಲರನ್ನು ಪ್ರೀತಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ, ಆದರ ಮತ್ತು ಬೆಂಬಲ ಇಲ್ಲವಾಗಿದ್ದರೆ ನನ್ನ ಈ ಸ್ಥಿತಿ ಸಾಧ್ಯವಾಗುತ್ತಿರಲಿಲ್ಲ. ನಾನು ತೀವ್ರ ಸಂತಸಗೊಂಡಿದ್ದೇನೆ" ಎಂದು ರಮ್ಯ ಟ್ವೀಟ್ ಮಾಡಿದ್ದಾರೆ. 
ಬಾಹುಬಲಿ ಸಿನೆಮಾದ ಎರಡು ಭಾಗಗಳಲ್ಲಿ ನಟಿಸಿರುವ ರಮ್ಯ ಅವರ ನಟನೆ ವಿಮರ್ಶಕರ ಮತ್ತು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಪಾತ್ರದ ಜನಪ್ರಿಯತೆ ಎಷ್ಟಿತ್ತೆಂದರೆ 'ದ ರೈಸ್ ಆಫ್ ಶಿವಗಾಮಿ' ಎಂಬ ಪುಸ್ತಕ ಕೂಡ ಬಿಡುಗಡೆಯಾಗಿತ್ತು. ರಮ್ಯ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ಮಾಪಕ ಶೋಬು ಯರ್ಲಗಡ್ಡ ಮತ್ತು ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT