ಶಶಾಂಕ್ 
ಸಿನಿಮಾ ಸುದ್ದಿ

ತಮ್ಮದೇ ಸ್ವಂತ ಬ್ಯಾನರ್ ನಲ್ಲಿ ಮೂರು ಸಿನಿಮಾ ನಿರ್ಮಿಸುತ್ತಿರುವ ನಿರ್ದೇಶಕ ಶಶಾಂಕ್

ಶಾಂಕ್‌ ತಮ್ಮ ಸ್ವಂತ ಬ್ಯಾನರ್ ಅಡಿ ಬರೋಬ್ಬರಿ ಮೂರು ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಪುನೀತ್‌ ಹೋಂ ಬ್ಯಾನರ್ ಅಡಿಯಲ್ಲಿ ...

ಬೆಂಗಳೂರು: ನಿರ್ದೇಶಕ ಶಶಾಂಕ್‌ ಸದ್ಯ ಪುನೀತ್‌ ಹೋಂ ಬ್ಯಾನರ್ ಅಡಿಯಲ್ಲಿ  ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಪುನೀತ್‌ರಾಜಕುಮಾರ್‌ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ನಿರ್ಮಿಸಲಿದ್ದು, ಚಿತ್ರ ಮುಂದಿನ ವರ್ಷ ಆರಂಭವಾಗಲಿದೆ. ಇದರ ಜೊತೆಗೆ ಶಶಾಂಕ್‌ ತಮ್ಮ ಸ್ವಂತ ಬ್ಯಾನರ್ ಅಡಿ ಬರೋಬ್ಬರಿ ಮೂರು ಸಿನಿಮಾ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಶಶಾಂಕ್‌ ಸಿನಿಮಾಸ್‌ ಎಂಬ ಬ್ಯಾನರ್‌  ನಡಿ ಅಜೇಯ್‌ ರಾವ್‌ ನಾಯಕರಾಗಿರುವ "ತಾಯಿಗೆ ತಕ್ಕ ಮಗ', "ಆಪರೇಷನ್‌ ಅಲಮೇಲಮ್ಮ' ಮೂಲಕ ನಾಯಕರಾದ ರಿಷಿ ನಟನೆ ಒಂದು ಚಿತ್ರ ಹಾಗೂ "ಕ್ರೇಜಿ ಬಾಯ್‌' ದಿಲೀಪ್‌ ಪ್ರಕಾಶ್‌ ಹೀರೋ ಆಗಿರುವ ಸಿನಿಮಾಗಳು ತಯಾರಾಗಲಿವೆ. 
ಅಜೇಯ್‌ರಾವ್‌ ನಾಯಕರಾಗಿರುವ "ತಾಯಿಗೆ ತಕ್ಕ ಮಗ' ಚಿತ್ರವನ್ನು ಶಶಾಂಕ್‌ ಅವರ ಶಿಷ್ಯ ರಘು ಕೋಮಿ ನಿರ್ದೇಶನ ಮಾಡುತ್ತಿದ್ದು, ಚಿತ್ರ ಇದೇ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಇನ್ನು, ರಿಷಿ ನಾಯಕರಾಗಿರುವ ಚಿತ್ರ ಮುಂದಿನ ವರ್ಷ ಆರಂಭವಾಗಲಿದ್ದು, ಈ ಚಿತ್ರದ ನಿರ್ದೇಶಕರು ಇನ್ನಷ್ಟೇ ಅಂತಿಮವಾಗಬೇಕು. 
ದಿಲೀಪ್‌ ಪ್ರಕಾಶ್‌ ಅವರ ಸಿನಿಮಾವನ್ನು ಸ್ವತಃ ಶಶಾಂಕ್‌ ಅವರೇ ನಿರ್ದೇಶಿಸಲಿದ್ದು, ಪುನೀತ್ ಚಿತ್ರ ಮುಂಗಿದ ನಂತರ  ಪ್ರಾಜೆಕ್ಟ್ ಗೆ ಕೈ ಹಾಕಲಿದ್ದಾರೆ. ಸಿನಿಮಾ ಮಾಡಿಕೊಡಿ ಎಂದು ನನ್ನಲ್ಲಿ ಸಾಕಷ್ಟು ಮಂದಿ ನಿರ್ಮಾಪಕರು ಬರುತ್ತಾರೆ. ಆದರೆ, ನಾನು ಒಂದು ಸಿನಿಮಾ ಸಂಪೂರ್ಣ ಮುಗಿಯುವ ಮುಂಚೆ ಮತ್ತೂಂದು ಸಿನಿಮಾ ಮಾಡೋದಿಲ್ಲ. ಹಾಗಂತ ಸಿನಿಮಾ ಮಾಡಿಕೊಡಿ ಎಂದು ಬಂದವರನ್ನು ನಿರಾಸೆ ಮಾಡಿ ಕಳಿಸೋದು ಸರಿಯಲ್ಲ. 
ಹಾಗಾಗಿ, ನನ್ನದೇ ಒಂದು ತಂಡ ಮಾಡಿಕೊಂಡು ಜಾಯಿಂಟ್‌ವೆಂಚರ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದೇನೆ. ಇಲ್ಲಿ ಚಿತ್ರದ ಕ್ರಿಯೇಟಿವ್‌ ಪಾರ್ಟ್‌ ಬಗ್ಗೆ ನಾನು ಗಮನಹರಿಸುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT