'ಮುಗುಳುನಗೆ'ಯಲ್ಲಿ ಗಣೇಶ್ 
ಸಿನಿಮಾ ಸುದ್ದಿ

'ಮುಗುಳುನಗೆ' ಗಣೇಶ್ ಪಾತ್ರಕ್ಕೆ ಗಾಂಧಿ ಸ್ಫೂರ್ತಿ

ನಿರ್ದೇಶಕ-ನಟ ಜೋಡಿ ಯೋಗರಾಜ್ ಭಟ್ ಮತ್ತು ಗಣೇಶ್ ಹಿಂದಿರುಗಿದ್ದಾರೆ. ಪ್ರೇಮಿಗಳ ದಿನಕ್ಕೆ ಅವರ ಮುಂದಿನ ಸಿನೆಮಾ 'ಮುಗುಳುನಗೆ' ಪೋಸ್ಟರ್ ಬಿಡುಗಡೆ ಮಾಡಿರುವುದು ವಿಶೇಷ.

ಬೆಂಗಳೂರು: ನಿರ್ದೇಶಕ-ನಟ ಜೋಡಿ ಯೋಗರಾಜ್ ಭಟ್ ಮತ್ತು ಗಣೇಶ್ ಹಿಂದಿರುಗಿದ್ದಾರೆ. ಪ್ರೇಮಿಗಳ ದಿನಕ್ಕೆ ಅವರ ಮುಂದಿನ ಸಿನೆಮಾ 'ಮುಗುಳುನಗೆ' ಪೋಸ್ಟರ್ ಬಿಡುಗಡೆ ಮಾಡಿರುವುದು ವಿಶೇಷ. 
ಸಾಫ್ಟ್ ವೇರ್ ಎಂಜಿನಿಯರ್ ಪಾತ್ರ ನಿರ್ವಹಿಸುತ್ತಿರುವ ಗಣೇಶ್ ಈ ಸಿನೆಮಾದಲ್ಲಿ ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮತ್ತೊಂದು ಆಸಕ್ತಿದಾಯಕ ಸಂಗತಿಯಲ್ಲಿ ಈ ಸಿನೆಮಾ ಪೋಸ್ಟರ್ ನಲ್ಲಿ ಗಾಂಧಿ ಪ್ರತಿಮೆ ಕೂಡ ಕಾಣಿಸಿಕೊಂಡಿದೆ. ಇದು ಸಿನೆಮಾ ಕಥೆಗೆ ಪ್ರಮುಖ ಸಂಗತಿ ಎಂದು ತಿಳಿದುಬಂದಿದೆ. 
ಪುದುಚೆರಿಯಲ್ಲಿರುವ ಈ ಗಾಂಧಿ ವೃತ್ತದ ಸುತ್ತ ಸಿನೆಮಾದ ಹಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಸಿನೆಮಾತಂಡ ಚಿತ್ರಕಥೆ, ಸಿನೆಮಾ ವಿಷಯ ಅಥವಾ ಗಾಂಧಿ ಪ್ರತಿಮೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದೆ ಹೋದರು, ನಾಯಕನಟನ ಜೀವನದಲ್ಲಿ ನಡೆಯುವ ಘಟನೆಗಳಿಗೆ ಆ ಪ್ರತಿಮೆ ಸಾಂಕೇತಿಕವಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. 
ಸಿನೆಮಾ ನೋಡಿದ ಮೇಲೆ ಗಾಂಧಿ ಪ್ರತಿಮೆ ಚಿತ್ರಿತವಾಗಿರುವುದರ ಬಗ್ಗೆ ಪ್ರೇಕ್ಷಕರಿಗೆ ತಿಳಿಯಲಿದೆ ಎನ್ನುತ್ತದೆ ಚಿತ್ರತಂಡ. ಇಂದಿನಿಂದ ಬೆಂಗಳೂರಿನ ಸಾಫ್ಟ್ವೇರ್ ಸಂಸ್ಥೆಯಲ್ಲಿ ಎರಡು ದಿನದ ಚಿತ್ರೀಕರಣ ನಡೆಯಲಿದೆ. 
'ಮುಂಗಾರು ಮಳೆ', 'ಗಾಳಿಪಟ' ಸಿನೆಮಾಗಳ ನಂತರ ಯೋಗರಾಜ್-ಗಣೇಶ್ ಜೋಡಿಯ ಮೂರನೇ ಸಿನೆಮಾ ಇದು. ಈ ರೋಮ್ಯಾಂಟಿಕ್ ಚಿತ್ರದಲ್ಲಿ ಮೂವರು ನಾಯಕ ನಟಿಯರು ಇದ್ದು, ಅಮೂಲ್ಯ, ಆಶಿಕಾ ಮತ್ತು ನಿಕಿತಾ ನಾರಾಯಣ ಗಣೇಶ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ. 
ವಿ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಸುಜ್ಞಾನ ಸಿನೆಮ್ಯಾಟೋಗ್ರಾಫರ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT