ಸಂಯುಕ್ತ ಹೆಗಡೆ 
ಸಿನಿಮಾ ಸುದ್ದಿ

ಸಂಯುಕ್ತ ಹೆಗಡೆ 'ರೋಡೀಸ್' ಕನಸು ನನಸು

ಯಶಸ್ವಿ ಸಿನೆಮಾ 'ಕಿರಿಕ್ ಪಾರ್ಟಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಂಯುಕ್ತ ಹೆಗಡೆ ಸದ್ಯಕ್ಕೆ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಬಾಲ್ಯದ ಕನಸು

ಬೆಂಗಳೂರು: ಯಶಸ್ವಿ ಸಿನೆಮಾ 'ಕಿರಿಕ್ ಪಾರ್ಟಿ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಂಯುಕ್ತ ಹೆಗಡೆ ಸದ್ಯಕ್ಕೆ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಅವರ ಬಾಲ್ಯದ ಕನಸು ನನಸಾಗಿರುವುದುದೇ ಈ ಸಂತಸಕ್ಕೆ ಕಾರಣ. "ನಟನೆ ಅದಾಗಿಯೇ ಬಂತು, ಆದರೆ ನಾನು ೮ ವರ್ಷದವಳಾಗಿದ್ದಾಗಿಲಿಂದಲೂ ರೋಡೀಸ್ ನನ್ನ ಕನಸಾಗಿತ್ತು. ರೋಡೀಸ್ ಗೆ ಆಯ್ಕೆಯಾಗಿರುವುದಕ್ಕೆ ನನಗೆ ಅತೀವ ಸಂತಸವಾಗಿದೆ" ಎನ್ನುತ್ತಾರೆ. ಇತ್ತೀಚಿಗೆ ನಡೆದ ಆಡಿಷನ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಒಬ್ಬರೇ ಸ್ಪರ್ಧಿ ಸಂಯುಕ್ತ.
ರೋಡೀಸ್ ಭಾಗವಾಗುವುದಕ್ಕೆ ಇಷ್ಟು ಉತ್ಸಾಹವೇಕೆ ಎಂದು ಪ್ರಶ್ನಿಸಿದರೆ "ನನಗೆ ಪ್ರವಾಸ ಎಂದರೆ ಪ್ರೀತಿ ಮತ್ತು ನನ್ನ ಜೀವನದಲ್ಲಿ ಸಾಹಸವನ್ನು ಯಾವಾಗಲೂ ಎದುರು ನೋಡುತ್ತೇನೆ. ಮತ್ತು ಈಗ ೩೦ ದಿನಗಳನ್ನು ಅದನ್ನೇ ಮಾಡುವುದು ಮತ್ತು ಫೋನ್ ಹಾಗು ಪ್ರೀತಿಪಾತ್ರರಾದವರಿಂದ ದೂರವಿರಬೇಕು ಎನ್ನುವುದು ಸುಲಭವಲ್ಲ. ಆದುದರಿಂದ ಇದನ್ನು ಪ್ರಯತ್ನಿಸಬೇಕು ಎಂದೆನಿಸಿತು" ಎನ್ನುತ್ತಾರೆ ಸಂಯುಕ್ತ. 
"ನಾನು ಅಲ್ಲಿ ಹೆಸರು ಗಳಿಸಲು ಹೋಗುತ್ತಿಲ್ಲ ಆದರೆ ಆ ಪ್ರದರ್ಶನದಲ್ಲಿ ಭಾಗವಹಿಸುವುದು ನನ್ನ ಕನಸಾಗಿತ್ತು" ಎನ್ನುತ್ತಾರೆ ಸಂಯುಕ್ತ. 
ಇಂದಿನಿಂದ ಈ ಪ್ರದರ್ಶನ ಪ್ರಸಾರವಾಗಲಿದ್ದು, ಶನಿವಾರ ಮತ್ತು ಭಾನುವಾರ ಇದು ಮೂಡಿಬರಲಿದೆ. ಅವರು ರಣ್ ವಿಜಯ್ ಸಿಂಗ್ ಅವರನ್ನು ಭೇಟಿ ಮಾಡುವುದಕ್ಕೂ ಉತ್ಸುಕರಾಗಿದ್ದಾರಂತೆ. "ನಾನು ರಣ್ ವಿಜಯ್ ಅವರ ಅತಿ ದೊಡ್ಡ ಅಭಿಮಾನಿ. ನಾನು ಅವರ ಭೇಟಿಗಾಗಿ ಎದುರು ನೋಡುತ್ತಿದ್ದೇನೆ. ನನಗೆ ಅವರ ಮೇಲೆ ಕ್ರಶ್ ಇಲ್ಲ ಆದರೆ ಅವರ ವ್ಯಕ್ತಿತ್ವ ನನಗೆ ಬಹಳ ಇಷ್ಟ" ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT