ಸುಮಂತ್ ಶೈಲೇಂದ್ರ 
ಸಿನಿಮಾ ಸುದ್ದಿ

'ಲೀ' ನಂತರ ಕಮರ್ಷಿಯಲ್ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿರುವ ಸುಮಂತ್

ಸಿನೆಮಾ ಹಿನ್ನಲೆ ಇರುವವರಿಗೆ ಕೀರ್ತಿ ಸುಲಭವಾಗಿ ದಕ್ಕುತ್ತದೆ ಎಂಬುದು ಸತ್ಯಕ್ಕೆ ದೂರ ಎನ್ನುತ್ತಾರೆ ಸುಮಂತ್ ಶೈಲೇಂದ್ರ. ನಟನ ವೃತ್ತಿಜೀವನ ಅವನ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ

ಬೆಂಗಳೂರು: ಸಿನೆಮಾ ಹಿನ್ನಲೆ ಇರುವವರಿಗೆ ಕೀರ್ತಿ ಸುಲಭವಾಗಿ ದಕ್ಕುತ್ತದೆ ಎಂಬುದು ಸತ್ಯಕ್ಕೆ ದೂರ ಎನ್ನುತ್ತಾರೆ ಸುಮಂತ್ ಶೈಲೇಂದ್ರ. ನಟನ ವೃತ್ತಿಜೀವನ ಅವನ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ನಟ. 
ನಟನ ತಂದೆ ಶೈಲೇಂದ್ರ ಬಾಬು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ಮಾಪಕರು, ಆದರೆ ಸುಮಂತ್ ಬೇರೆಯದೇ ದಾರಿ ತುಳಿಯಲು ನಿಶ್ಚಯಿಸಿದವರು. ಐದು ಸಿನೆಮಾಗಳ ನಟ ಈಗ 'ಲೀ'ನೊಂದಿಗೆ ಹಿಂದಿರುಗಿದ್ದಾರೆ. ಈ ವಾರ ಚಲನಚಿತ್ರಮಂದಿರಗಳಲ್ಲಿ 'ಲೀ' ಬಿಡುಗಡೆಯಾಗಲಿದೆ. 
ಸಿಟಿ ಎಕ್ಸ್ಪ್ರೆಸ್ ನೊಂದಿಗೆ ಮಾತನಾಡಿದ ನಟ, 'ಲೀ' ನಂತರ ಕಮರ್ಷಿಯಲ್ ಮಾದರಿ ಸಿನೆಮಾಗಳಿಂದ ಅಲ್ಪ ವಿರಾಮ ಪಡೆಯುವುದಾಗಿ ತಿಳಿಸಿ ಅಚ್ಚರಿ ಮೂಡಿಸುತ್ತಾರೆ. "ಗಾಂಧಿನಗರದಲ್ಲಿ ನಮ್ಮ ಕಚೇರಿ ಇರುವುದರಿಂದ ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗ ಕಂಡಿದ್ದೇನೆ. ಹಲವಾರು ನಿರ್ಮಾಪಕರು, ವಿತರಕರು ಮತ್ತು ನಿರ್ದೇಶಕರುಗಳನ್ನು ಭೇಟಿಯಾದ ನಂತರ ಅವರಿಂದ ಸಿನೆಮಾ ಆಯ್ಕೆಯ ಬಗ್ಗೆ ಸಲಹೆ ಪಡೆದೆ, ನಂತರ ನನ್ನ ಮೊದಲೆರಡು ಸಿನೆಮಾಗಳಾದ 'ಆಟ' ಮತ್ತು 'ದಿಲ್ವಾಲಾ'ದಲ್ಲಿ ನಟಿಸಿದೆ. ಅದರ ನಂತರ ಮತ್ತೊಂದಷ್ಟು ಮಾಸ್ ಸಿನೆಮಾಗಳಲ್ಲಿ ನಟಿಸಿದೆ. ಒಂದು ದಿನ, ನಾನೆತ್ತ ಸಾಗುತ್ತಿದ್ದೇನೆ ಎಂದು ಕುಳಿತು ಚಿಂತಿಸಿದೆ, ನಾನು ಮಾಸ್ ಹೀರೊ ಆಗಬೇಕೆ ಅಥವಾ ಒಳ್ಳೆಯ ವಿಷಯ-ವಸ್ತು ಇರುವ ಸಿನೆಮಾಗಳಲ್ಲಿ ನಟಿಸಬೇಕೇ ಎಂದು ಚಿಂತಿಸಿದೆ. 
ಸಾಕಷ್ಟು ಚಿಂತಿಸಿದ ನಂತರ  ಒಳ್ಳೆಯ ವಿಷಯ-ವಸ್ತು ಇರುವ ಸಿನೆಮಾಗಳಲ್ಲಿ ನಟಿಸಬೇಕು ಎಂದು ನಿಶ್ಚಯಿಸಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಸಿನೆಮಾಗಳು ಒಳ್ಳೆಯ ಹೆಸರು ಮಾಡುತ್ತಿವೆ. 'ಲೂಸಿಯಾ', 'ರಾಮ ರಾಮ ರೇ', 'ತಿಥಿ' ಮತ್ತು ಇತ್ತೀಚಿನ 'ಕಿರಿಕ್ ಪಾರ್ಟಿ' ಇಂತಹ ಸಿನೆಮಾಗಳು. ನಾನು ಇದೆ ಹಾದಿ ತುಳಿಯಬೇಕೆಂದಿದ್ದೇನೆ. ಇದು ಹಸಿರಾಗಿರುತ್ತದೆ" ಎಂದು ವಿವರಿಸುತ್ತಾರೆ ಸುಮಂತ್.  
'ಲೀ' ಸಿನೆಮಾದ ಪಾತ್ರಕ್ಕೋಸ್ಕರ ಅದನ್ನು ಆಯ್ಕೆ ಮಾಡಿಕೊಂಡೆ ಎಂದು ತಿಳಿಸುವ ಸುಮಂತ್ "ಇಲ್ಲಿ ಹೀರೊ ಹಲವಾರು ಸವಾಲುಗಳನ್ನು ಎದುರಿಸುತ್ತಾನೆ.... ನಾನಿಲ್ಲಿ ಮಾನಸಿಕ ಅಸ್ವಸ್ಥ, ಭಿಕ್ಷುಕ, ಲವರ್ ಬಾಯ್ ಮತ್ತು ಆಕ್ಷನ್ ಹೀರೊ ಛಾಯೆಗಳನ್ನು ಪೋಷಿಸಿದ್ದೇನೆ. ಪ್ರತಿ ಛಾಯೆಗೂ ನನ್ನ ಆಂಗಿಕ ಭಾಷೆ ಬದಲಾಗಬೇಕಿತ್ತು. ಪ್ರತಿಯೊಂದಕ್ಕೂ ಮೂರೂ ತಿಂಗಳು ಹಿಡಿಯಿತು" ಎನ್ನುತ್ತಾರೆ ಸುಮಂತ್. 
ನಭಾ ನಟೇಶ್ ಸುಮಂತ್ ಎದುರು 'ಲೀ'ನಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT