ಚೆನ್ನೈ: ಹೊಸದಾಗಿ ಜಾರಿ ಮಾಡಿರುವ ತೆರಿಗೆ ನೀತಿ ಜಿ ಎಸ್ ಟಿಯಲ್ಲಿ ಮನರಂಜನಾ ತೆರಿಗೆಯನ್ನು ೩೦%ಗೆ ಏರಿಸಿರುವುದನ್ನು ವಿರೋಧಿಸಿ ತಮಿಳುನಾಡಿನ ಚಿತ್ರಮಂದಿರಗಳು ಬಂದ್ ಮಾಡುತ್ತಿರುವ ಹಿನ್ನಲೆಯಲ್ಲಿ, ತಮಿಳು ಚಿತ್ರರಂಗ ಒಗ್ಗೂಡಿದ ಧ್ವನಿಯಲ್ಲಿ ಮಾತನಾಡಲಿದೆ ಎಂದು ಸೋಮವಾರ ನಟ-ನಿರ್ದೇಶಕ ಕಮಲ್ ಹಾಸನ್ ಹೇಳಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಜುಲೈ ೧ ರಿಂದ ಜಾರಿಯಾಗಿದೆ.
ಡಬ್ಬಿಂಗ್ ಸ್ಟುಡಿಯೋಗೆ ಚಾಲನೆ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಕಮಲ್ "ಇಡೀ ಚಿತ್ರರಂಗ ಒಗ್ಗೂಡುತ್ತಿದೆ ಮತ್ತು ಶೀಘ್ರದಲ್ಲೆ ಒಂದೇ ಧ್ವನಿಯಲ್ಲಿ ಮಾತನಾಡಲಿದ್ದೇವೆ" ಎಂದಿದ್ದಾರೆ.
ದ್ವಿಮುಖ ತೆರಿಗೆ ವಿರೋಧಿಸಿ ತಮಿಳುನಾಡಿನಾದ್ಯಂತ ಇಂದು ಚಿತ್ರಮಂದಿರ ಮಾಲೀಕರು ಬಂದ್ ಮಾಡಿ ಪ್ರತಿಭಟಿಸಿದ್ದಾರೆ.