ಶರ್ಮಿಳಾ ಮಾಂಡ್ರೆ 
ಸಿನಿಮಾ ಸುದ್ದಿ

ಒಳ್ಳೆಯ ಕಾರಣವಿದ್ದರೆ ಮಾತ್ರ ಐಟಂ ಹಾಡಿಗೆ ಡ್ಸಾನ್ಸ್: ಮಾಂಡ್ರೆ

ಇತ್ತೀಚಿನ ದಿನಗಳಲ್ಲಿ ನಾಯಕ ನಟಿಯರು ಚಿತ್ರದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಅಂತೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ...

ಇತ್ತೀಚಿನ ದಿನಗಳಲ್ಲಿ ನಾಯಕ ನಟಿಯರು ಚಿತ್ರದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಅಂತೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಪತ್ರಕರ್ತೆ ಪಾತ್ರದ ಜೊತೆಗೆ ಶರ್ಮಿಳಾ ಮಾಂಡ್ರೆ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 
ಈ ವಿಶೇಷ ಹಾಡಿನ ಬಗ್ಗೆ ಮಾತನಾಡಿರುವ ಮಾಂಡ್ರೆ ಒಳ್ಳೆಯ ಕಾರಣವಿದ್ದರೆ ನಾನು ಚಿತ್ರದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುತ್ತೇನೆ ಎಂದು ಹೇಳಿದ್ದಾರೆ. ಚಿತ್ರದ ಪಾತ್ರದ ಬಗ್ಗೆ ನಿರ್ದೇಶಕರು ಹೇಳುವಾಗಿ ಚಿತ್ರದ ವಿಶೇಷ ಹಾಡಿನ ಬಗ್ಗೆಯೂ ಹೇಳಿದರು. ಅದಕ್ಕೆ ನಾನು ನಾಯಕನ ಜತೆ ಪ್ರೀತಿಯಲ್ಲಿ ಬಿಳುತ್ತೇನೆ. ಇಬ್ಬರ ಮಧ್ಯೆಯ ಡುಯೇಟ್ ಸಾಂಗ್ ಬರುವುದು ಸಾಮಾನ್ಯ ಅದರಲ್ಲಿ ಏನು ವಿಶೇಷ ಇದೇನು ಐಟಂ ಸಾಂಗ ಎಂದು ಪ್ರಶ್ನಿಸಿದ್ದೇ ಎಂದು ಹೇಳಿದ್ದಾರೆ. 
ನಿರ್ದೇಶಕ ನರಸಿಂಹ ಅವರು ಕಥೆ ಹೇಳಿದ್ದು ನನಗೆ ತುಂಬಾ ಇಷ್ಟ ಆಯ್ತು. ಈ ಪಾತ್ರವನ್ನು ನಾನೇ ಮಾಡಬೇಕು ಎಂದು ಆಫರ್ ಸ್ವೀಕರಿಸಿದೆ. ನಾನು ಚಿತ್ರದಲ್ಲಿ ರಹಸ್ಯ ಪತ್ರಕರ್ತೆಯಾಗಿ ಅಭಿನಯಿಸಿದ್ದೇನೆ. ಮೊದಲಿಗೆ ವಿಶೇಖ ಹಾಡಿನ ಬಗ್ಗೆ ಪ್ರಸ್ತಾವನೆ ಇರಲಿಲ್ಲ. ಚಿತ್ರದ ಚಿತ್ರೀಕರಣ ಶುರುವಾದ ಎರಡು ವಾರಗಳ ನಂತರ ನಿರ್ದೇಶಕರು ಹಾಡೊಂದು ಮಾಡಿದರೆ ಹೇಗಿರುತ್ತೆ ಎಂದು ಕೇಳಿದರು. ಈ ಕಲ್ಪನೆ ಎಲ್ಲರಿಗೂ ಇಷ್ಟವಾಗಿ ನಾವು ವಿಶೇಖ ಹಾಡೊಂದನ್ನು ಮಾಡಿದ್ದೇವೆ ಎಂದು ಮಾಂಡ್ರೆ ಹೇಳಿದ್ದಾರೆ. 
ಶರ್ಮಿಳಾ ಮಾಂಡ್ರೆ ಅಭಿನಯದ ಆಕೆ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಶಿವಣ್ಣ ಜತೆಗಿನ ಮಾಸ್ ಲೀಡರ್ ಚಿತ್ರ ಸಹ ಬಿಡುಗಡೆಗೆ ರೆಡಿಯಾಗುತ್ತಿದ್ದು ಮಾಂಡ್ರೆ ಅವರಿಗೆ ಡಬಲ್ ಖುಷಿ ತಂದಿದೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT