ಸಿನಿಮಾ ಸುದ್ದಿ

ಶ್ರೀಪಂಚಾಕ್ಷರಿ ಗವಾಯಿಗಳ ಮಠದ ಸುನೀಲ್ ಸರಿಗಮಪ 13ರ ವಿಜೇತ

Vishwanath S
ಜೀ ಕನ್ನಡ ಟಿವಿಯ ರಿಯಾಲಿಟಿ ಶೋ ಸರಿಗಮಪ 13ನೇ ಆವೃತ್ತಿಯಲ್ಲಿ ಗದುಗಿನ ಶ್ರೀಪಂಚಾಕ್ಷರಿ ಗವಾಯಿಗಳ ಮಠದ ಶಿಷ್ಯ ಸುನೀಲ್ ವಿಜೇತರಾಗಿ ಹೊರಹೊಮ್ಮಿದ್ದಾರೆ. 
ಜೀ ಕನ್ನಡ ವಾಹಿನಿ ಗ್ರ್ಯಾಂಡ್ ಫಿನಾಲೆ ಸ್ಫರ್ಧೆಯನ್ನು ನೇರಪ್ರಸಾರ ಮಾಡಿತ್ತು. ಫಿನಾಲೆಯಲ್ಲಿ ಧನುಷ್, ಸುನೀಲ್, ಶ್ರೀಹರ್ಷ, ದೀಕ್ಷಾ, ಮೊಹಬೂಬ್ ಸಾಬ್ ಹಾಗೂ ಅರವಿಂದ್ ಸ್ಫರ್ಧಿಸಿದ್ದು ಅಂತಿಮವಾಗಿ ಸುನೀಲ್ ವಿನ್ನರ್ ಆಗಿ ಮೆಹಬೂಬ್ ಸಾಬ್ ರನ್ನರಪ್ ಆಗಿ ಹೊರ ಹೊಮ್ಮಿದ್ದಾರೆ. 
ಗ್ರ್ಯಾಂಡ್ ಫಿನಾಲೆಯಲ್ಲಿ ನಾದ ಬ್ರಹ್ಮ ಹಂಸಲೇಖ ವಿಶೇಷ ತೀರ್ಪುಗಾರರಾಗಿದ್ದರು. ವಿಜಯಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಸಾಥ್ ನೀಡಿದರು.
SCROLL FOR NEXT