ವೈಭವಿ ಶಾಂಡಿಲ್ಯ 
ಸಿನಿಮಾ ಸುದ್ದಿ

ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ವೈಭವಿ ಶಾಂಡಿಲ್ಯ ಹವಾ!

ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಮರಾಠಿ ನಟಿಯರಿಗೆ ಕೈತುಂಬಾ ಅವಕಾಶಗಳು ಸಿಗುತ್ತಿವೆ. ಅಂಥಹ ನಟಿಯರ ಪೈಕಿ ವೈಭವಿ ಶಾಂಡಿಲ್ಯ...

ಬೆಂಗಳೂರು: ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಮರಾಠಿ ನಟಿಯರಿಗೆ ಕೈತುಂಬಾ ಅವಕಾಶಗಳು ಸಿಗುತ್ತಿವೆ. ಅಂಥಹ ನಟಿಯರ ಪೈಕಿ ವೈಭವಿ ಶಾಂಡಿಲ್ಯ ಕೂಡ ಸೇರಿದ್ದಾರೆ.
ತಮಿಳು ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದ ವೈಭವಿ ಕನ್ನಡದ ರಾಜ್-ವಿಷ್ಣು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆ.ಮಾದೇಶ ನಿರ್ದೇಶನದ ಸಿನಿಮಾದಲ್ಲಿ ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ.
ರಾಜ್ -ವಿಷ್ಣು ತಮಿಳಿನ ರಜನಿ-ಮುರುಗನ್  ರಿಮೇಕ್ ಆಗಿದ್ದರಿಂದ ತಾನು ಈ ಸಿನಿಮಾದೆಡೆಗೆ ಆಕರ್ಷಿತಳಾಗಿದ್ದೇನೆ, ಆರಂಭದಿಂದ ನಾನು ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ, ರಜನಿ-ಮುರುಗನ್ ಸಿನಿಮಾವನ್ನು ನಾನು ವೀಕ್ಷಿಸಿದ್ದೇನೆ ಎಂದು ವೈಭವಿ ಹೇಳಿದ್ದಾರೆ.
ಸಿನಿಮಾ ಹಾಡು ಹಾಗೂ ಕಥೆಯನ್ನು ನಿರೂಪಿಸಿರುವ ರೀತಿ, ಪಾತ್ರಗಳು ಅದರಲ್ಲೂ ನಾಯಕಿಯ ಪಾತ್ರವನ್ನು ಕೀರ್ತಿ ಸುರೇಶ್ ಅದ್ಬುತವಾಗಿ ನಿರ್ವಹಿಸಿದ್ದಾರೆ. ರಾಮು ಬ್ಯಾನರ್  ಅಡಿ ಕನ್ನಡದಲ್ಲಿ ಸಿನಿಮಾ ರಿಮೇಕ್ ಆಗುತ್ತಿದೆ ಎಂದು ಕೇಳಲ್ಪಟ್ಟಿದ್ದೆ. ನನಗೆ ಆಫರ್ ಬಂದಾಗ ಎರಡನೇ ಮಾತಿಲ್ಲದೇ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿದೆ ಎಂದು ಶಾಂಡಿಲ್ಯ ತಿಳಿಸಿದ್ದಾರೆ.
ಸದ್ಯಕ್ಕೆ ತಮಿಳಿನಲ್ಲಿ ಶಾಂಡಿಲ್ಯ 2 ಸಿನಿಮಾಗಳಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ. ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸಲು ನನಗೆ ಅಭ್ಯಂತರವಿಲ್ಲ,ಉತ್ತಮ ತಂಡ ಹಾಗೂ ಒಳ್ಳೆಯ ಕಥೆ ಇರಬೇಕು ಎಂದು ಹೇಳಿದ್ದಾರೆ.
ನನ್ನ ಆಂಟಿ ಸುಷ್ಮಾ ಕೌಲ್ ಅವರನ್ನು ನನ್ನ ಮ್ಯಾನೇಜರ್ ಆಗಿ  ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಕಳೆದ 25 ವರ್ಷಗಳಿಂದ ಅವರು ಚಿತ್ರ ರಂಗದಲ್ಲಿದ್ದಾರೆ, ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಜನ ಅವರನ್ನು ಗೌರವಿಸುತ್ತಾರೆ. ಸುಷ್ಮಾ ಅವರಿಗೆ ಮಾಲಾಶ್ರೀ ಹಲವು ವರ್ಷಗಳಿಂದ ಸ್ನೇಹಿತೆ, ಹೀಗಾಗಿ ನಾನು ಈ ಪ್ರಾಜೆಕ್ಟ್ ಗೆ ಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಇನ್ನು ತೆಲುಗಿನಲ್ಲಿ ನಟಿ ಸಾಯಿಕುಮಾರ್ ಪುತ್ರ ಆದಿ ಜೊತೆ ಮೊತ್ತಮೊದಲ ಬಾರಿಗೆ ಟಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT