ನಟಿ ಸಿಂಧು ಲೋಕನಾಥ್ 
ಸಿನಿಮಾ ಸುದ್ದಿ

'ಲೂಸ್ ಕನೆಕ್ಷನ್' ಮೂಲಕ ವೆಬ್ ಧಾರಾವಾಹಿಗೆ ಪಾದಾರ್ಪಣೆ ಮಾಡಿದ ಸಿಂಧು ಲೋಕನಾಥ್

ಇತ್ತೀಚಿಗೆ ಬೆಳ್ಳಿತೆರೆ ನಟ ನಟಿಯರು ವೆಬ್ ಧಾರವಾಹಿ ಲೋಕಕ್ಕೆ ಪಾದಾರ್ಪಣೆ ಮಾಡುವ ಪ್ರಯೋಗ ಮಾಡುತ್ತಿರುವ ಸಮಯದಲ್ಲಿ ಅದಕ್ಕೆ ಹೊಸ ಪ್ರವೇಶ ಕನ್ನಡ ಚಿತ್ರ ರಂಗದ ನಾಯಕನಟಿ

ಬೆಂಗಳೂರು: ಇತ್ತೀಚಿಗೆ ಬೆಳ್ಳಿತೆರೆ ನಟ ನಟಿಯರು ವೆಬ್ ಧಾರವಾಹಿ ಲೋಕಕ್ಕೆ ಪಾದಾರ್ಪಣೆ ಮಾಡುವ ಪ್ರಯೋಗ ಮಾಡುತ್ತಿರುವ ಸಮಯದಲ್ಲಿ ಅದಕ್ಕೆ ಹೊಸ ಪ್ರವೇಶ ಕನ್ನಡ ಚಿತ್ರ ರಂಗದ ನಾಯಕನಟಿ ಸಿಂಧು ಲೋಕನಾಥ್. 
'ಲೂಸ್ ಕನೆಕ್ಷನ್' ಎಂಬ ಶೀರ್ಷಿಕೆ ಹೊತ್ತ ಈ ರೋಮ್ಯಾಂಟಿಕ್ ಹಾಸ್ಯ ವೆಬ್ ಧಾರಾವಾಹಿಯನ್ನು ಸಕತ್ ಸ್ಟುಡಿಯೋ ನಿರ್ಮಿಸುತ್ತಿದೆ. ಆರ್ ಜೆ ಪ್ರದೀಪ್ ಮತ್ತು ತಂಡವಾದ ರಘು ಶಾಸ್ತ್ರಿ, ಶಾಮ್ ಖಾನ್ ಹಾಗು ಹಸಿನ್ ಖಾನ್ ಈ ವೆಬ್ ಧಾರಾವಾಹಿಯ ಆವೃತ್ತಿಗಳನ್ನು ಬರೆದು ನಿರ್ದೇಶಿಸಿದ್ದಾರೆ. 
ಇಂದಿನ ದಿನದ ಪ್ರೇಕ್ಷಕರು ಚಿತ್ರಮಂದಿರ ಅಥವಾ ಟಿವಿಯ ಬದಲು ಮನರಂಜನೆಗೆ ಸಾಮಾಜಿಕ ಜಾಲತಾಣದ ಮೊರೆಹೋಗುತ್ತಿದ್ದಾರೆ. ಈಗ ವೆಬ್ ಧಾರವಾಹಿ ಮನರಂಜನೆಯ ಹೊಸ ಮಂತ್ರ ಎನ್ನುವ ನಟಿ ಸಿಂಧು "ಇದು ನನ್ನ ಮೊದಲ ಪ್ರಯತ್ನ. ಇದನ್ನು ಜನ ಹೇಗೆ ಸ್ವೀಕರಿಸಲಿದ್ದಾರೆ ಎಂದು ತಿಳಿಯಲು ಉತ್ಸಾಹದಿಂದ ಕಾಯುತ್ತಿದ್ದೇನೆ" ಎನ್ನುತ್ತಾರೆ. 
ಸಿನೆಮಾ ಆಗಿರಲಿ ವೆಬ್ ಧಾರಾವಾಹಿ ಆಗಿರಲಿ ನಟನ ಶ್ರಮ ಒಂದೇ ಎನ್ನುವ ಸಿಂಧು "'ಲೂಸ್ ಕನೆಕ್ಷನ್' ಚಿತ್ರೀಕರಣ ನನ್ನ ಯಾವುದಾದರೂ ಸಿನೆಮಾ ಚಿತ್ರೀಕರಣದಂತೆಯೇ. ಇದು ಹಲವು ಆವೃತ್ತಿಗಳಲ್ಲಿ ಬಿಡುಗಡೆ ಆಗಲಿದೆ" ಎನ್ನುತ್ತಾರೆ. 
ಈ ವೆಬ್ ಧಾರಾವಾಹಿಯಲ್ಲಿ ಸುನಿಲ್ ರಾವ್ ಮತ್ತು ಅನುಪಮಾ ಗೌಡ ಕೂಡ ನಟಿಸಿದ್ದಾರೆ. ಇದು ಜೂನ್ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ. ಬಂಗಾಳಿ ಸಿನೆಮಾಗಳಲ್ಲಿ ಕೆಲಸ ಮಾಡಿರುವ ರಾಯ್ ಇದಕ್ಕೆ ಸಂಗೀತ ನೀಡಿದ್ದಾರೆ. 
ಈ ಮಧ್ಯೆ ಹೀರೋಯಿನ್ ಕೇಂದ್ರಿತ ಸಿನೆಮಾ 'ಸಮಯದ ಗೊಂಬೆ'ಯ ಚಿತ್ರೀಕರಣ ಮುಗಿಸಿದ್ದಾರೆ ಸಿಂಧು. ಹಾಗೆಯೇ 'ಕಾಣದಂತೆ ಮಾಯವಾದನು' ಸಿನಿಮಾದಲ್ಲಿಯೂ ಸಿಂಧು ನಟಿಸುತ್ತಿದ್ದಾರೆ. ಯೋಗರಾಜ್ ಗರಡಿಯಲ್ಲಿ ಪಳಗಿರುವ ರಾಜ್ ಪತಿಪತಿ ಈ ಸಿನೆಮಾದ ನಿರ್ದೇಶಕ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT