ಸುದೀಪ್ 
ಸಿನಿಮಾ ಸುದ್ದಿ

ಹಾಸ್ಯ ಚಿತ್ರವೊಂದಕ್ಕೆ ಒಂದಾಗಲಿದ್ದಾರೆ ಕೃಷ್ಣ ಮತ್ತು ಸುದೀಪ್

ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಬೆಂಗಳೂರು: ಕುಟುಂಬದೊಂದಿಗೆ ಪ್ರವಾಸ ಮುಗಿಸಿ ಬಂದಿರುವ ನಿರ್ದೇಶಕ ಕೃಷ್ಣ ಕೆಲಸಕ್ಕೆ ಹಿಂದಿರುಗಿದ್ದಾರೆ. ಅವರು ಮುಂದಿನ ಯೋಜನೆಗೆ ಅಣಿಯಾಗುತ್ತಿದ್ದು, ಮತ್ತೊಮ್ಮೆ ಸುದೀಪ್ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 
ನಿರ್ದೇಶಕ ಸದ್ಯಕ್ಕೆ ಕಥೆಗಾರರೊಂದಿಗೆ ಹೈದರಾಬಾದ್ ನಲ್ಲಿದ್ದು, ವಿವಿಧ ಕಥೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವಾರಾಂತ್ಯಕ್ಕೆ ನಗರಕ್ಕೆ ಹಿಂದಿರುಗಳಿರುವ ನಟ ನಂತರ ಬ್ಯಾಂಗ್ಕಾಕ್ ಗೆ ತೆರಳಿ ಅಲ್ಲಿ ನಟ ಸುದೀಪ್ ಅವರನ್ನು ಭೇಟಿ ಮಾಡಲಿದ್ದಾರೆ. ಸುದೀಪ್ ಸದ್ಯಕ್ಕೆ ಬ್ಯಾಂಗ್ಕಾಕ್ ನಲ್ಲಿ 'ದ ವಿಲನ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 
"ಬ್ಯಾಂಗ್ಕಾಕ್ ಗೆ ಪ್ರವಾಸ ನನಗೆ ಅವಶ್ಯಕ ಏಕೆಂದರೆ ಸುದೀಪ್ ಯಾವ ವಿಷಯದ ಸಿನೆಮಾ ಇಷ್ಟ ಪಡುತ್ತಾರೋ ಅದನ್ನು ಅಂತಿಮಗೊಳಿಸಬಹುದು. ನಂತರ ಚಿತ್ರಕಥೆ ಮುಂದುವರೆಸುವುದಕ್ಕೆ ನನಗೆ ಸಾಕಷ್ಟು ಸಮಯ ಸಿಗುತ್ತದೆ" ಎನ್ನುತ್ತಾರೆ ನಿರ್ದೇಶಕ. 
ಸುದೀಪ್ ಅವರಿಗೆ ಆಯ್ಕೆ ಮಾಡಿಕೊಳ್ಳಲು ಕೃಷ್ಣ ಅವರ ಬಳಿ ಹಲವು ಸ್ಕ್ರಿಪ್ಟ್ ಗಳು ಇವೆಯಂತೆ. "ಈ ಬಾರಿ ಮಾಮೂಲಿತನದಿಂದ ಹೊರಬಂದು ಇಲ್ಲಿಯವರೆಗೂ ನಾನು ಪ್ರಯತ್ನಿಸದ ಚಿತ್ರಕಥೆಯನ್ನು ಹೇಳಬೇಕೆಂದಿದ್ದೇನೆ" ಎನ್ನುವ ಕೃಷ್ಣ ಹಾಸ್ಯ ಮನರಂಜನಾ ಚಿತ್ರದ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸುತ್ತಾರೆ. 
ಕೃಷ್ಣ ನಿರ್ದೇಶನದ ಸುದೀಪ್ ಅಭಿನಯದ 'ಹೆಬ್ಬುಲಿ' ಬಾಕ್ಸ್ ಆಫಿಸ್ ನಲ್ಲಿ ಉತ್ತಮ ಗಳಿಕೆ ಕಂಡು ಯಶಸ್ವಿ ಚಿತ್ರ ಎನಿಸಿಕೊಂಡಿತ್ತು. ಈಗ ಆ ಯಶಸ್ಸನ್ನು ಮರುಕಳಿಸಲು ನಿರ್ದೇಶಕ ಸಿದ್ಧರಾಗುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT