ವಿ ಹರಿಕೃಷ್ಣ-ದರ್ಶನ್ 
ಸಿನಿಮಾ ಸುದ್ದಿ

'ಕುರುಕ್ಷೇತ್ರ'ದ ಸಂಗೀತ ಕಹಳೆ ಮೊಳಗಿಸಲು ಸಿದ್ಧರಾಗುತ್ತಿರುವ ಹರಿಕೃಷ್ಣ

ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ನೀಡಿ, ಪ್ರೇಕ್ಷಕರ ಮನಗೆದ್ದಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಹೊಸದೊಂದು ಸವಾಲು ಈಗ ಎದುರಿಗಿದೆ. ನಟ ದರ್ಶನ್ ಅವರ ೫೦ನೆಯ ಚಿತ್ರ

ಬೆಂಗಳೂರು: ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ನೀಡಿ, ಪ್ರೇಕ್ಷಕರ ಮನಗೆದ್ದಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರಿಗೆ ಹೊಸದೊಂದು ಸವಾಲು ಈಗ ಎದುರಿಗಿದೆ. ನಟ ದರ್ಶನ್ ಅವರ ೫೦ನೆಯ ಚಿತ್ರ ಐತಿಹಾಸಿಕ ಮಹಾಭಾರತ ಕಥೆಯು 'ಕುರುಕ್ಷೇತ್ರ'ಕ್ಕೆ ಅವರು ಸಂಗೀತ ನೀಡಲಿದ್ದಾರೆ. 
ಈ ಹಿಂದೆ ಐತಿಹಾಸಿಕ ಸಿನೆಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನೆಮಾಗೆ ಹರಿಕೃಷ್ಣ ಹಿನ್ನಲೆ ಸಂಗೀತ ಒದಗಿಸಿದ್ದರೂ, ಇದೆ ಮೊದಲ ಬಾರಿಗೆ ಐತಿಹಾಸಿಕ ಸಿನೆಮಾವೊಂದಕ್ಕೆ ಸಂಪೂರ್ಣ ಸಂಗೀತ ನೀಡುತ್ತಿರುವುದು. ಈ ನಿಟ್ಟಿನಲ್ಲಿ ಹರಿಕೃಷ್ಣ ಆಗಲೇ ಕಾರ್ಯೋನ್ಮುಖರಾಗಿದ್ದಾರೆ. 
"ನಾವು ಕೇಳಿಕೊಂಡು ಬೆಳೆದಿರುವ ಪಾತ್ರಗಳುಳ್ಳ ಕಥೆ ಇದು. ನಾವು ಇವುಗಳ ಬಗ್ಗೆ ಸಾಕಷ್ಟು ಕೇಳಿದ್ದೇವೆ, ಟಿವಿಯಲ್ಲಿ ನೋಡಿದ್ದೇವೆ. ಇವೆಲ್ಲ ದಂತಕಥೆಗಳು... ಕೃಷ್ಣ, ದುರ್ಯೋಧನ, ಅರ್ಜುನ, ಕರ್ಣ, ಭೀಮ. ಆದುದರಿಂದ ಇಂತಹ ಸಿನೆಮಾಗೆ ಸಂಗೀತ ನೀಡುತ್ತಿರುವುದಕ್ಕೆ ಅತಿ ಹೆಚ್ಚಿನ ಸಂತೋಷವಾಗಿದೆ. ಇದು ದರ್ಶನ್ ಅವರ ಮೈಲಿಗಲ್ಲಿನ ಸಿನೆಮಾ ಕೂಡ ಮತ್ತು ಇದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ" ಎನ್ನುತ್ತಾರೆ ಹರಿಕೃಷ್ಣ. 
ಹಾಡುಗಳ ರೆಕಾರ್ಡಿಂಗ್ ಆಗಲೇ ಪ್ರಾರಂಭವಾಗಿದ್ದು, ಸಿನೆಮಾದಲ್ಲಿ ೮ ಹಾಡುಗಳು ಇರಲಿವೆಯಂತೆ. "ಈಗ ಎರಡು ಹಾಡುಗಳನ್ನು ಮುಗಿಸಿದ್ದೇನೆ" ಎನ್ನುವ ಹರಿಕೃಷ್ಣ "ನನ್ನ ಜೊತೆಗೆ ಗೀತರಚನಕಾರ ನಾಗೇಂದ್ರ ಪ್ರಸಾದ್, ಜೆ ಕೆ ಭೈರವಿ ಮತ್ತು ನಿರ್ದೇಶಕ ನಾಗಣ್ಣ ಇದ್ದಾರೆ. ಅವರೆಲ್ಲರೂ ಈ ಮಹಾಕಾವ್ಯದ ಮೇಲಿನ ಪ್ರೀತಿಯಿಂದ ನನಗೆ ಸಹಾಯ ಮಾಡುತ್ತದ್ದಾರೆ" ಎನ್ನುತ್ತಾರೆ. 
ಮುನಿರತ್ನ ನಿರ್ಮಿಸುತ್ತಿರುವ ಈ ದೊಡ್ಡ ಬಜೆಟ್ ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡುತ್ತಿದ್ದರೆ, ರವಿಚಂದ್ರನ್ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದ ತಾರಾಗಣದ ಬಗ್ಗೆ ಚಿತ್ರತಂಡ ತುಟಿಬಿಚ್ಚುತ್ತಿಲ್ಲ. ನಿರ್ಮಾಪಕರ ಹುಟ್ಟುಹಬ್ಬವಾದ ಜುಲೈ ೨೩ ರಂದು ಸಿನೆಮಾಗೆ ಚಾಲನೆ ಸಿಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT