ಪುನೀತ್ ರಾಜಕುಮಾರ್-ಆದರ್ಶ್ ಕೆ ಈಶ್ವರಪ್ಪ 
ಸಿನಿಮಾ ಸುದ್ದಿ

ಪುನೀತ್ ಗಮನ ಸೆಳೆದ ಶುದ್ಧಿ ಟ್ರೇಲರ್

ಜನಮನ ಸೆಳೆದಿದ್ದ ಆದರ್ಶ್ ಕೆ ಈಶ್ವರಪ್ಪ ಅರವ ಚೊಚ್ಚಲ ನಿರ್ದೇಶನದ 'ಶುದ್ಧಿ' ಟ್ರೇಲರ್ ಈಗ ತಾರಾನಟ ಪುನೀತ್ ರಾಜಕುಮಾರ್ ಅವರ ಗಮನ ಸೆಳೆದಿದೆ. ಟ್ರೇಲರ್ ಗೆ ಮೆಚ್ಚುಗೆ ಸೂಚಿಸಿರುವ

ಬೆಂಗಳೂರು: ಜನಮನ ಸೆಳೆದಿದ್ದ ಆದರ್ಶ್ ಕೆ ಈಶ್ವರಪ್ಪ ಅರವ ಚೊಚ್ಚಲ ನಿರ್ದೇಶನದ 'ಶುದ್ಧಿ' ಟ್ರೇಲರ್ ಈಗ ತಾರಾನಟ ಪುನೀತ್ ರಾಜಕುಮಾರ್ ಅವರ ಗಮನ ಸೆಳೆದಿದೆ. ಟ್ರೇಲರ್ ಗೆ ಮೆಚ್ಚುಗೆ ಸೂಚಿಸಿರುವ ಪುನೀತ್ ಸಿನೆಮಾ ನೋಡಲು ಉತ್ಸುಕರಾಗಿರುವುದಾಗಿ ಆದರ್ಶ್ ಅವರಿಗೆ ಹೇಳಿದ್ದಾರಂತೆ. 
"'ಅಂಜನಿಪುತ್ರ' ಸಿನೆಮಾ ಸೆಟ್ ನಲ್ಲಿ ಬ್ಯುಸಿಯಾಗಿರುವ ಪುನೀತ್ ನಮ್ಮ ಸಿನೆಮಾದ ಟ್ರೇಲರ್ ವೀಕ್ಷಿಸಿದರು" ಎಂದು ತಿಳಿಸುವ ಆದರ್ಶ್ "ಸೆನ್ಸಾರ್ ಪ್ರಮಾಣಪತ್ರ ದೊರಕಿದ ಮೇಲೆ ಸಿನೆಮಾ ವೀಕ್ಷಿಸಲು ಬಯಸುವುದಾಗಿ ಹೇಳಿದ್ದರು. ಈಗ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ನಿರ್ದೇಶಕ ಎ ಹರ್ಷ ಮತ್ತು ನಟಿ ರಶ್ಮಿಕಾ ಮಂದಣ್ಣ ಕೂಡ ಟ್ರೇಲರ್ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದರು" ಎನ್ನುತ್ತಾರೆ. 
ನಿಜ ಘಟನೆಗಳ ಮೇಲೆ ಆದರ್ಶ್ ಅವರ 'ಶುದ್ಧಿ' ಸಿನೆಮಾ ಚಿತ್ರೀಕರಣಗೊಂಡಿದೆ. ಅಮೆರಿಕಾದ ಹುಡುಗಿ ಲಾರೆನ್ ಸ್ಪಾರ್ತನೋ ಪಾತ್ರವೊಂದನ್ನು ನಿರ್ವಹಿಸಿದ್ದು, ಅವರು ಭಾರತಕ್ಕೆ ಆಧ್ಯಾತ್ಮ ಪ್ರವಾಸ ಬರುವ ಕಥೆ ಮತ್ತು ದ್ವೇಷದ ಕಥೆಯನ್ನು ಸಿನೆಮಾ ಹೆಣೆಯುತ್ತದೆ. ನಟಿ ನಿವೇದಿತಾ ಮತ್ತು ಅಮೃತ ಕರಗದ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. 
ಪುನೀತ್ ಅವರು ಸಿನೆಮಾ ನೋಡುವ ಭರವಸೆ ನೀಡಿದ್ದಲ್ಲದೆ, ಒಳ್ಳೆಯ ಕಥೆ ಸಿಕ್ಕಾಗ ಕಾಣುವಂತೆ ಹೇಳಿರುವುದು ಕೂಡ ಆದರ್ಶ್ ಅವರ ಸಂತಸವನ್ನು ಇಮ್ಮಡಿಗೊಳಿಸಿದೆ. "'ಶುದ್ಧಿ' ಸಿನೆಮಾದ ಪ್ರಚಾರಕ್ಕೆ ಕೂಡ ಪುನೀತ್ ನಮಗೆ ಸಲಹೆಗಳನ್ನು ನೀಡಿದರು. ಕಾಲೇಜುಗಳಿಗೆ ಭೇಟಿ ನೀಡಿ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳುವ ಸಲಹೆ ಕೂಡ ನೀಡಿದರು. ದೊಡ್ಡ ನಟ ಈ ಸಲಹೆಗಳನ್ನು ನೀಡಿದ್ದು ನಮ್ಮ ಸಿನೆಮಾಗೆ ಒಳ್ಳೆಯ ಬೆಳವಣಿಗೆ" ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಐಷಾರಾಮಿ ರಿಯಲ್ ಎಸ್ಟೇಟ್ ಮೂಲಕ ಅಮೆರಿಕದಿಂದ 'ಹೊಸ ಗಾಜಾ' ಕಟ್ಟುವ ಭರವಸೆ!

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತದಿಂದ ಮುರಳಿ ಕೃಷ್ಣ ಸಾವು!

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ 'ದಂಡುಪಾಳ್ಯ ಗ್ಯಾಂಗ್' ಸದಸ್ಯನ ಬಂಧನ!

ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ; ಪಾಕಿಸ್ತಾನ ಸಹಿ!

SCROLL FOR NEXT