ಸಿನಿಮಾ ಸುದ್ದಿ

ರಜನಿ ಸರ್ ಅವರಿಂದ ಪ್ರಶಂಸೆಯೇ ನನಗೆ ವಿಶ್ವ: ಅರುಣ್ ವಿಜಯ್

Guruprasad Narayana
ಚೆನ್ನೈ: 'ಕುಟ್ಟ್ರಮ್ ೨೩' ಸಿನೆಮಾ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ನಟ ಅರುಣ್ ವಿಜಯ್ ಅವರಿಗೆ ಕರೆ ಮಾಡಿ ಅಭಿನಿಂದಿಸಿದಾಗ ನನ್ನ ಆನಂದಕ್ಕೆ ಎಲ್ಲೆಯೇ ಇರಲಿಲ್ಲ ಎನ್ನುತ್ತಾರೆ ನಟ. ಅವರ ಪ್ರಶಂಸೆಯೇ ನನಗೆ ವಿಶ್ವ ಎಂದಿದ್ದಾರೆ. 
"ಸೂಪರ್ ಸ್ಟಾರ್ ಕರೆ ಮಾಡಿ ನಿಮ್ಮ ಕೆಲಸಕ್ಕೆ ಅಭಿನಂದಿಸಿದಾಗ ನಿಮಗೆ ಗೌರವ ಸಿಕ್ಕಂತೆ. ನಾನು ಬೇರೆ ಯಾವುದೋ ಲೋಕದಲ್ಲಿ ತೇಲುತ್ತಿದ್ದಂತೆನಿಸಿತು ಮತ್ತು ರಜನಿ ಸರ್ ಅವರಿಂದ ಪ್ರಶಂಸೆಯೇ ನನಗೆ ವಿಶ್ವ" ಎಂದು ಅರುಣ್ ಹೇಳಿದ್ದಾರೆ. 
ವಿಶೇಷ ಪ್ರದರ್ಶನದಲ್ಲಿ ಸಿನೆಮಾ ನೋಡಿದ ನಟ ರಜನಿಕಾಂತ್ ಇಡೀ ತಂಡವನ್ನು ಮನತುಂಬಿ ಹೊಗಳಿದ್ದಾರೆ. ಹಾಗೆಯೇ ಅರುಣ್, ನಿರ್ದೇಶಕ ಮತ್ತು ಸಿನೆಮಾದ ನಿರ್ಮಾಪಕರನ್ನು ಮನೆಗೆ ಆಹ್ವಾನಿಸಿದ್ದಾರೆ. 
ಕಾದಂಬರಿ ಆಧಾರಿತ ಈ ಸಿನೆಮಾ ನಿರ್ದೇಶಿಸಿರುವ ಅರಿವಜಗನ್, ವೈದ್ಯಕೀಯ ಅಪರಾಧಗಳ ಮೇಲೆ ಬೆಳಕು ಚೆಲ್ಲಿದ್ದಾರೆ. 
SCROLL FOR NEXT