ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವಣ್ಣನಿಗಿಲ್ಲ ಲೀಡರ್ ಪಟ್ಟ: ಮಾಸ್ ಲೀಡರ್ ಆಗಿ ಸೆಂಚ್ಯುರಿ ಸ್ಟಾರ್

ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ "ಲೀಡರ್" ಟೈಟಲ್‌ಗೆ ಸಂಬಂಧಿಸಿದಂತೆ ತಲೆದೋರಿದ್ದ ವಿವಾದಕ್ಕೆ ತೆರೆಬಿದ್ದಂತಾಗಿದೆ. ಲೀಡರ್ ಟೈಟಲ್ ...

ಬೆಂಗಳೂರು: ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ "ಲೀಡರ್" ಟೈಟಲ್‌ಗೆ ಸಂಬಂಧಿಸಿದಂತೆ ತಲೆದೋರಿದ್ದ ವಿವಾದಕ್ಕೆ ತೆರೆಬಿದ್ದಂತಾಗಿದೆ. ಲೀಡರ್  ಟೈಟಲ್ ಬಳಸದಂತೆ ಫಿಲ್ಮ್ ಛೇಂಬರ್‌ ನಿರ್ಮಾಪಕ ತರುಣ್ ಅವರಿಗೆ ಪತ್ರ ಬರೆದಿದೆ.

ಕಳೆದ 6 ತಿಂಗಳಿಂದ 'ಲೀಡರ್ ' ಟೈಟಲ್‌ ವಿಚಾರವಾಗಿ ಗೊಂದಲ ಉಂಟಾಗಿತ್ತು. ಟೈಟಲ್‌ ವಿಚಾರವಾಗಿ ನಿರ್ಮಾಪಕ ತರುಣ್ ಪಿಕ್ಚರ್ ಹಾಗೂ ವಸಿಷ್ಠ ಪಿಕ್ಚರ್ಸ್ ಎಂ ಆರ್ ರಮೇಶ್‌‌ ನಡುವೆ ಗಲಾಟೆ ನಡೆಯುತ್ತಿತ್ತು. ತಾವು ರಿಜಿಸ್ಟರ್ ಮಾಡಿಸಿರುವ ಟೈಟಲ್‌ನ್ನು ಬೇರೆಯವರು ಬಳಸುತ್ತಿರುವ ಬಗ್ಗೆ ವಸಿಷ್ಠ ಪಿಕ್ಚರ್‌ನ  ನಿರ್ದೇಶಕ ಎ ಎಂ ಆರ್ ರಮೇಶ್ ದೂರು ನೀಡಿದ್ದರು.

ಸದ್ಯ ಲೀಡರ್ ಸಿನಿಮಾ ತಂಜ ಖತಾರ್ ನಲ್ಲಿ ಹಾಡಿನ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ನಮಗೆ ಟೈಟಲ್ ನಿಂದ ಯಾವುದೇ ತೊಂದರೆಯಿಲ್ಲ, ಎಎಂಆರ್ ರಮೇಶ್ ಈ ವಿಷಯವನ್ನು ಏಕೆ ಇಷ್ಟು ದೊಡ್ಡದು ಮಾಡಿದರೊ ತಿಳಿದಿಲ್ಲ ಎಂದು ನಿರ್ಮಾಪಕ ತರುಣ್ ಶಿವಪ್ಪ ಹೇಳಿದ್ದಾರೆ.

ನಮ್ಮ ಸಿನಿಮಾ ಟೈಟಲ್ ಮಾಸ್ ಲೀಡರ್, ಇದನ್ನು ನಾವು ಬರಹಗಾರ ಅಜಯ್ ಕುಮಾರ್ ಅವರಿಂದ ಪಡೆದುಕೊಂಡಿದ್ದೇವೆ. ಅಜಯ್ ಕುಮಾರ್ ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟ್ರಾರ್ ಮಾಡಿಸಿದ್ದರು. ಸಂಕ್ರಾಂತಿ ಹಬ್ಬದ ವೇಳೆ, ನಾವು ಸಿನಿಮಾ ಬಗ್ಗೆ ಜಾಹೀರಾತು ನೀಡಿದ ವೇಳೆಯಿಂದ ರಮೇಶ್ ಲೀಡರ್ ಟೈಟಲ್ ತಮ್ಮದು. ನನ್ನ ಗಮನಕ್ಕೆ ತರದೇ ಟೈಟಲ್ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಣಿಜ್ಯಮಂಡಳಿಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲೀಡರ್ ಟೈಟಲ್ ನೋಂದಾಯಿಸಿದ್ದ ರಘುನಾಥ್ ನಾವು ಪ್ರಾಜೆಕ್ಟ್ ನಿಲ್ಲಿಸಿದ್ದು , ಅದನ್ನು ಬಳಕೆ ಮಾಡಿಕೊಳ್ಳುವಂತೆ ನಮಗೆ ಹೇಳಿದ್ದರು. ರಮೇಶ್ 2010 ರಲ್ಲಿ ತಮ್ಮ ಟೈಟಲ್ ರಿಜಿಸ್ಟ್ರಾರ್ ಮಾಡಿಸಿದ್ದಾರೆ. 2014 ರಲ್ಲೆ  ಈ ಸಂಬಂಧ ದೂರು ನೀಡಬೇಕಿತ್ತು, ಆದರೆ ಈಗ ಏಕೆ ಈ ಸಂಬಂಧ ಜಗಳ ತೆಗೆಯುತ್ತಿದ್ದಾರೆ ಎಂಬದು ತಿಳಿಯುತ್ತಿಲ್ಲ ಎಂದು ತರುಣ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT