ಬಿರುಗಾಳಿಯ ಅವಕೃಪೆಗೆ ತುತ್ತಾಗಿ ತೂರಿಹೋದ 'ದ ವಿಲನ್' ಸೆಟ್! 
ಸಿನಿಮಾ ಸುದ್ದಿ

ಬಿರುಗಾಳಿಯ ಅವಕೃಪೆಗೆ ತುತ್ತಾಗಿ ತೂರಿಹೋದ 'ದ ವಿಲನ್' ಸೆಟ್!

ಸುಂಟರಗಾಳಿ ಮತ್ತು ಬಿರುಗಾಳಿಯ ಅವಕೃಪೆಗೆ ಪ್ರೇಮ್ ನಿರ್ದೇಶನದ 'ದ ವಿಲನ್' ಚಿತ್ರತಂಡ ತುತ್ತಾಗಬೇಕಾಗಿ ಪರಿಸ್ಥಿತಿ ಬಂದಿತ್ತು. ಮಿಥುನ್ ಚಕ್ರವರ್ತಿ ಅವರ ಭಾಗದ ಚಿತ್ರೀಕರಣ ಮುಗಿಸಿದ್ದ

ಬೆಂಗಳೂರು: ಸುಂಟರಗಾಳಿ ಮತ್ತು ಬಿರುಗಾಳಿಯ ಅವಕೃಪೆಗೆ ಪ್ರೇಮ್ ನಿರ್ದೇಶನದ 'ದ ವಿಲನ್' ಚಿತ್ರತಂಡ ತುತ್ತಾಗಬೇಕಾಗಿ ಪರಿಸ್ಥಿತಿ ಬಂದಿತ್ತು. ಮಿಥುನ್ ಚಕ್ರವರ್ತಿ ಅವರ ಭಾಗದ ಚಿತ್ರೀಕರಣ ಮುಗಿಸಿದ್ದ ನಿರ್ದೇಶಕ, ಬೆಳಗಾವಿಯ ಝಳ ಝಳ ಬಿಸಿಲಿನಲ್ಲಿ ಸುದೀಪ್ ಅವರ ಭಾಗವನ್ನು ಶೂಟ್ ಮಾಡುತ್ತಿದ್ದರು. ೪೨ಡಿಗ್ರಿ ಉಷ್ಣಾಂಶದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಇನ್ನೇನು ಮುಗಿಸಬೇಕು ಎನ್ನುವಷ್ಟರದಲ್ಲಿ ಬೀಸಿದ ಬಿರುಗಾಳಿ, ಹಾಕಿದ್ದ ಸೆಟ್ ಅನ್ನೇ ತೂರಿಕೊಂಡು ಹೋಗಿದೆ. 
ಕೆಲವು ದೃಶ್ಯಗಳಲ್ಲಿ ಕೃತಕ ಬಿರುಗಾಳಿ ಬೀಸುವಂತೆ ಮಾಡಲು ವಿಶೇಷ ಫ್ಯಾನ್ ಗಳನ್ನೂ ಅಲ್ಲಿ ಅನುಷ್ಠಾನ ಮಾಡಿದ್ದರಂತೆ. ಆದರೆ ನಿಜಕ್ಕೂ ಬೀಸಿದ ಬಿರುಗಾಳಿ ಅವುಗಳನ್ನು ಧ್ವಂಸ ಮಾಡಿದೆ. "ಗಾಳಿ ಎಷ್ಟು ವೇಗವಾಗಿ ಬೀಸಿತೆಂದರೆ, ಬಹುತೇಕ ನಮ್ಮನ್ನು ತೂರಿಸಿಕೊಂಡು ಹೋಗುವಂತಿತ್ತು. ನಾನು ಮತ್ತು ಸುದೀಪ್ ಒಬ್ಬರನ್ನೊಬ್ಬರು ಬಿಗಿಯಾಗಿ ಹಿಡಿಯುಕೊಂಡಿದ್ದರೆ, ನಮ್ಮನ್ನು ರಕ್ಷಿಸಲು ೧೦ ಜನ ಸುತ್ತುವರಿದಿದ್ದರು. ಅಲ್ಲದೆ ಸೆಟ್ ನಲ್ಲಿ ೩೦೦ ಜನರ ಚಿತ್ರತಂಡ ನೆರೆದಿತ್ತು. ಎಲ್ಲರಿಗು ಉಸಿರಾಟವೇ ಕಷ್ಟವಾಗಿ ಹೋಯಿತು" ಎಂದು ವಿವರಿಸುವ ನಿರ್ದೇಶಕ ಯಾವುದೇ ಹಾನಿಯಾಗದೆ ಎಲ್ಲರು ಉಳಿದುಕೊಂಡಿದ್ದೆ ಅದೃಷ್ಟ ಎನ್ನುತ್ತಾರೆ. 
ಆದರೆ ಚಿತ್ರೀಕರಣಕ್ಕಾಗಿ ಹಾಕಿದ್ದ ಇಡೀ ಸೆಟ್ ಬಿರುಗಾಳಿಗೆ ಧ್ವಂಸವಾಯಿತಂತೆ. "ಇದರ ನಷ್ಟ ಲೆಕ್ಕ ಹಾಕುವ ಮನಸ್ಥಿತಿಯಲ್ಲಿ ಸದ್ಯಕ್ಕೆ ನಾನಿಲ್ಲ. ಶೂಟಿಂಗ್ ನೋಡಲು ಬಂದಿದ್ದವರು ಕೂಡ ಎಲ್ಲರು ಸುರಕ್ಷಿತವಾಗಿದ್ದಾರೆ ಎಂಬುದೇ ನನಗೆ ನೆಮ್ಮದಿ" ಎನ್ನುವ ಪ್ರೇಮ್ ಈ ದೃಶ್ಯವನ್ನು ಸಿನೆಮಾದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಕೂಡ. 
ಈಗ ಬೆಳಗಾವಿಯ ಚಿತ್ರೀಕರಣದ ನಂತರ ಚಿತ್ರತಂಡ ಲಂಡನ್ ಗೆ ತೆರಳಲಿದೆ. ಅಲ್ಲಿ ಶಿವರಾಜ್ ಕುಮಾರ್ ಮತ್ತು ಅಮಿ ಜಾಕ್ಸನ್ ಅವರನ್ನೊಳಗೊಂಡ ದೃಶ್ಯಗಳು ಚಿತ್ರೀಕರಣಗೊಳ್ಳಲಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT