ಐಂದ್ರಿತಾ ರೇ 
ಸಿನಿಮಾ ಸುದ್ದಿ

'ಗರುಡ' ಸಿನೆಮಾದಲ್ಲಿ ಐಂದ್ರಿತಾ ರೇ

ಸಿದ್ಧಾರ್ಥ್ ಮಹೇಶ್ ನಟಿಸುತ್ತಿರುವ 'ಗರುಡ' ಸಿನೆಮಾಗೆ ಮಾರ್ಚ್ ನಲ್ಲಿ ಮುಹೂರ್ತ ನೆರವೇರಿತ್ತು ಮತ್ತು ಈ ವಾರ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಕೊನೆಯ ಘಳಿಗೆಯಲ್ಲಿ ನಾಯಕನಟಿಯ

ಬೆಂಗಳೂರು: ಸಿದ್ಧಾರ್ಥ್ ಮಹೇಶ್ ನಟಿಸುತ್ತಿರುವ 'ಗರುಡ' ಸಿನೆಮಾಗೆ ಮಾರ್ಚ್ ನಲ್ಲಿ ಮುಹೂರ್ತ ನೆರವೇರಿತ್ತು ಮತ್ತು ಈ ವಾರ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಕೊನೆಯ ಘಳಿಗೆಯಲ್ಲಿ ನಾಯಕನಟಿಯ ಬದಲಾವಣೆಯಾಗಿದ್ದು, ಮೊದಲಿಗೆ ನಟಿಸಬೇಕಿದ್ದ ದೀಪಾ ಸನ್ನಿಧಿ ಅವರನ್ನು ಐಂದ್ರಿತಾ ರೇ ಬದಲಿಸಿದ್ದಾರೆ.
ನಟ ಸಿದ್ಧಾರ್ಥ್ ಎದುರು, ಮತ್ತೊಬ್ಬ ನಟಿ ಆಶಿಕಾ ರಂಗನಾಥ ಕೂಡ ನಟಿಸುತ್ತಿದ್ದಾರೆ. ಚಿತ್ರತಂಡದ ಮೂಲಗಳು ಹೇಳುವಂತೆ "ದೀಪಾ ಸನ್ನಿಧಿ ಅವರಿಗೆ ಮನೆಯ ಕಡೆ ತುರ್ತು ಕೆಲಸವಿತ್ತು, ಆದುದರಿಂದ ಅವರಿಗೆ ಮೇ ೨೯ ರಿಂದ ನಮಗೆ ಅವರ ಸಮಯ ಒದಗಿಸಲು ಸಾಧ್ಯವಾಗಲಿಲ್ಲ. ಅವರಿಗೆ ಸಿನೆಮಾದಿಂದ ಹೊರಹೋಗುವುದ ಬಿಟ್ಟು ಬೇರೆ ಅವಕಾಶ ಇರಲಿಲ್ಲ. ನಮಗೆ ಈಗಾಗಲೇ ಜನಪ್ರಿಯವಾದ ನಾಯಕನಟಿಯ ಅವಶ್ಯಕತೆ ಇತ್ತು. ಐಂದ್ರಿತಾ ರೇ ಇದಕ್ಕೆ ಸೂಕ್ತವಾಗುತ್ತಾರೆ. ಮೇ ೨೯ ಕ್ಕೆ  ನಟಿ ಸೆಟ್ ಸೇರಲಿದ್ದಾರೆ. ಚಿತ್ರೀಕರಣ ಗೋವಾದಲ್ಲಿ ಮುಂದಿನ ೧೫ ದಿನಗಳ ಕಾಲ ನಡೆಯಲಿದೆ" ಎನ್ನುತ್ತಾರೆ. 
ಐಂದ್ರಿತಾ ಕೊನೆಯ ಬಾರಿಗೆ ತರುಣ್ ಸುಧೀರ್ ಅವರ 'ಚೌಕ' ದಲ್ಲಿ ಕಾಣಿಸಿಕೊಂಡಿದ್ದರು. ಅವರು ಸದ್ಯಕ್ಕೆ ಬೆಂಗಾಳಿ ಸಿನೆಮಾ 'ಅಮರ್ ಅಪಂಜನ್' ನಲ್ಲಿ ನಿರತರಾಗಿದ್ದು, ಬಾಲಿವುಡ್ ನಲ್ಲಿ ಕೂಡ ಪಾದಾರ್ಪಣೆ ಮಾಡುತ್ತಿದ್ದಾರೆ. ಚಂದ್ರಕಾಂತ್ ಸಿಂಗ್ ನಿರ್ದೇಶನದ ಹಿಂದಿ ಸಿನೆಮಾದಲ್ಲಿ ಅವರು ಅರ್ಬಾಜ್ ಖಾನ್ ಎದುರು ನಟಿಸಲಿದ್ದಾರೆ. 
ಪ್ರಸಾದ್ ರೆಡ್ಡಿ ನಿರ್ಮಿಸುತ್ತಿರುವ 'ಗರುಡ' ಸಿದ್ಧಾರ್ಥ್ ಅವರಿಗೆ 'ಸಿಪಾಯಿ' ನಂತರ ಎರಡನೆಯ ಸಿನೆಮಾ. ನೃತ್ಯನಿರ್ದೇಶಕ ಧನಕುಮಾರ್ ಮೊದಲ ಬಾರಿಗೆ ಈ ಸಿನೆಮಾ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಲಿದ್ದು, ಜೈ ಆನಂದ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT