ಟೈಗರ್ ಗಲ್ಲಿ ಚಿತ್ರದ ಸೋಲಿನ ನಂತರ ನಟ ಸತೀಶ್ ನೀನಾಸಂ ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಾರೆ.
ಚಂಬಲ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಸತೀಶ್ ಗೋಧಿ ಸಿನಿಮಾದಲ್ಲಿ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿದ್ದಾರೆ. ಈ ಮಧ್ಯೆ ಸತೀಶ್ ಅವರು ರಾಮ ಕಾಡಿಗೆ ಹೋದ ಎಂಬ ಕಾಮಿಡಿ ಥ್ರಿಲ್ಲರ್ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಹಲವು ಆಸಕ್ತಿಕರ ವಿಷಯಗಳಿರುತ್ತವೆ. ರಾಕೆಟ್ ನಂತರ ಸತೀಶ್ ಹೋಂ ಬ್ಯಾನರ್ ನಲ್ಲಿ ಇದು ಎರಡನೇ ಚಿತ್ರ. ಇಲ್ಲಿ ಇಬ್ಬರು ಯುವ ನಿರ್ದೇಶಕರಿದ್ದಾರೆ. ವಿಕ್ಕಿ ಮತ್ತು ವಿನಯ್ ಎಂಬ ಯುವ ನಿರ್ದೇಶಕರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ನನ್ನ ಮೊದಲ ಹೋಂ ಬ್ಯಾನರ್ ನ ಚಿತ್ರ ರಾಕೆಟ್ ಅಷ್ಟೊಂದು ತೃಪ್ತಿ ನೀಡಲಿಲ್ಲ. ಈ ಚಿತ್ರದಲ್ಲಿ ಇಬ್ಬರು ನಿರ್ದೇಶಕರಿರುವುದು ವಿಶೇಷ. ಇವರು ಈಗಾಗಲೇ ಆನ್ ಲೈನ್ ಶೋ ನಟ್ಟಿ ಫ್ಯಾಕ್ಟರಿಯಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಅದು ನನ್ನ ಗಮನ ಸೆಳೆಯಿತು. ಬಾಲಿವುಡ್ ನಲ್ಲಿ ಅಬ್ಬಾಸ್-ಮಸ್ತಾನ್ ಜೋಡಿ ಇರುವಂತೆ ಕನ್ನಡದಲ್ಲಿ ವಿಕ್ಕಿ-ವಿನಯ್ ಆಗಬಹುದು ಎಂಬ ಭರವಸೆ ನನ್ನದು. ರಾಮ ಕಾಡಿಗೆ ಹೋದ ಚಿತ್ರಕ್ಕೆ ಮಿತುನ್ ಮುಕುಂದನ್ ಅವರ ಸಂಗೀತ ಮತ್ತು ಪ್ರೀತಮ್ ಅವರ ಛಾಯಾಗ್ರಹಣವಿದೆ. ಲೂಸಿಯಾ ಚಿತ್ರಕ್ಕೆ ಪೋಸ್ಟರ್ ತಯಾರಿಸಿದ ಆದರ್ಶ್ ಅವರೇ ಈ ಚಿತ್ರಕ್ಕೂ ವಿನ್ಯಾಸ ಮಾಡಿದ್ದಾರೆ ಎಂದು ಸತೀಶ್ ವಿವರಣೆ ನೀಡಿದರು.
ಇದರ ಜೊತೆಗೆ ಸತೀಶ್ ಅವರು ಮಹೇಶ್ ಅವರ ಅಯೋಗ್ಯ ಚಿತ್ರದ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗಲಿದ್ದಾರೆ. ತಮಿಳಿನಲ್ಲಿ ತಾವು ನಟಿಸುತ್ತಿರುವ ಮೊದಲ ಚಿತ್ರ ಮುಂದಿನ ವರ್ಷವೇ ಆರಂಭವಾಗಲಿದೆ ಎನ್ನುತ್ತಾರೆ ಸತೀಶ್.