ಸಿನಿಮಾ ಸುದ್ದಿ

ಟೈಗರ್ ಗಲ್ಲಿ ಸೋಲಿನಿಂದ ಹೊರಬಂದ ಸತೀಶ್, ಉತ್ಸಾಹದೊಂದಿಗೆ ಹೊಸ ಚಿತ್ರದಲ್ಲಿ ಭಾಗಿ

Sumana Upadhyaya
ಟೈಗರ್ ಗಲ್ಲಿ ಚಿತ್ರದ ಸೋಲಿನ ನಂತರ ನಟ ಸತೀಶ್ ನೀನಾಸಂ ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವ ಮುನ್ನ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತಾರೆ.
ಚಂಬಲ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಸತೀಶ್ ಗೋಧಿ ಸಿನಿಮಾದಲ್ಲಿ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿದ್ದಾರೆ. ಈ ಮಧ್ಯೆ ಸತೀಶ್ ಅವರು ರಾಮ ಕಾಡಿಗೆ ಹೋದ ಎಂಬ ಕಾಮಿಡಿ ಥ್ರಿಲ್ಲರ್ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಹಲವು ಆಸಕ್ತಿಕರ ವಿಷಯಗಳಿರುತ್ತವೆ. ರಾಕೆಟ್ ನಂತರ ಸತೀಶ್ ಹೋಂ ಬ್ಯಾನರ್ ನಲ್ಲಿ ಇದು ಎರಡನೇ ಚಿತ್ರ. ಇಲ್ಲಿ ಇಬ್ಬರು ಯುವ ನಿರ್ದೇಶಕರಿದ್ದಾರೆ. ವಿಕ್ಕಿ ಮತ್ತು ವಿನಯ್ ಎಂಬ ಯುವ ನಿರ್ದೇಶಕರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 
ನನ್ನ ಮೊದಲ ಹೋಂ ಬ್ಯಾನರ್ ನ ಚಿತ್ರ ರಾಕೆಟ್ ಅಷ್ಟೊಂದು ತೃಪ್ತಿ ನೀಡಲಿಲ್ಲ. ಈ ಚಿತ್ರದಲ್ಲಿ ಇಬ್ಬರು ನಿರ್ದೇಶಕರಿರುವುದು ವಿಶೇಷ. ಇವರು ಈಗಾಗಲೇ ಆನ್ ಲೈನ್ ಶೋ ನಟ್ಟಿ ಫ್ಯಾಕ್ಟರಿಯಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಅದು ನನ್ನ ಗಮನ ಸೆಳೆಯಿತು. ಬಾಲಿವುಡ್ ನಲ್ಲಿ ಅಬ್ಬಾಸ್-ಮಸ್ತಾನ್ ಜೋಡಿ ಇರುವಂತೆ ಕನ್ನಡದಲ್ಲಿ ವಿಕ್ಕಿ-ವಿನಯ್ ಆಗಬಹುದು ಎಂಬ ಭರವಸೆ ನನ್ನದು. ರಾಮ ಕಾಡಿಗೆ ಹೋದ ಚಿತ್ರಕ್ಕೆ ಮಿತುನ್ ಮುಕುಂದನ್ ಅವರ ಸಂಗೀತ ಮತ್ತು ಪ್ರೀತಮ್ ಅವರ ಛಾಯಾಗ್ರಹಣವಿದೆ. ಲೂಸಿಯಾ ಚಿತ್ರಕ್ಕೆ ಪೋಸ್ಟರ್ ತಯಾರಿಸಿದ ಆದರ್ಶ್ ಅವರೇ ಈ ಚಿತ್ರಕ್ಕೂ ವಿನ್ಯಾಸ ಮಾಡಿದ್ದಾರೆ ಎಂದು ಸತೀಶ್ ವಿವರಣೆ ನೀಡಿದರು.
ಇದರ ಜೊತೆಗೆ ಸತೀಶ್ ಅವರು ಮಹೇಶ್ ಅವರ ಅಯೋಗ್ಯ ಚಿತ್ರದ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗಲಿದ್ದಾರೆ. ತಮಿಳಿನಲ್ಲಿ ತಾವು ನಟಿಸುತ್ತಿರುವ ಮೊದಲ ಚಿತ್ರ ಮುಂದಿನ ವರ್ಷವೇ ಆರಂಭವಾಗಲಿದೆ ಎನ್ನುತ್ತಾರೆ ಸತೀಶ್.
SCROLL FOR NEXT