ಧ್ರುವ ಸರ್ಜಾ 
ಸಿನಿಮಾ ಸುದ್ದಿ

ಧ್ರುವ ಸರ್ಜಾ ಕಾಲ್ ಶೀಟ್ ಗಾಗಿ 2013 ರಿಂದ ಕಾಯುತ್ತಿದ್ದೇನೆ: ಉದಯ್ ಮೆಹ್ತಾ

ಭರ್ಜರಿ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಬಹು ಬೇಡಿಕೆಯ ನಟ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಈ ಹೊಸ ಸ್ಟಾರ್ ಗೆ...

ಬೆಂಗಳೂರು: ಭರ್ಜರಿ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಬಹು ಬೇಡಿಕೆಯ ನಟ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಸ್ಯಾಂಡಲ್ ವುಡ್ ನ ಈ ಹೊಸ ಸ್ಟಾರ್ ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ.
ಅದ್ದೂರಿ, ಬಹದ್ದೂರ್, ಭರ್ಜರಿ ನಂತರ ಧ್ರುವ ಕೇವಲ ಒಂದೇ ಒಂದು ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ನಟಿಸುತ್ತಿರುವ ಧ್ರುವಾ 5ನೇ ಪ್ರಾಜೆಕ್ಟ್ ಉದಯ್ ಮೆಹ್ತಾ ಅವರ ಜತೆ ಮಾಡಲಿದ್ದಾರೆ.
ತಮ್ಮ ನಿರ್ಮಾಣದ ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿನಯಸಲಿದ್ದಾರೆ ಎಂಬುದನ್ನು ಉದಯ್ ಮೆಹ್ತಾ ಸ್ಪಷ್ಟ ಪಡಿಸಿದ್ದಾರೆ. 2013 ರಿಂದ ನಾನು ಧ್ರುವ ಸರ್ಜಾ  ಡೇಟ್ಸ್ ಗಾಗಿ ಕಾಯುತ್ತಿದ್ದೇನೆ, ನಾನು ಬಚ್ಚನ್ ಸಿನಿಮಾ ಮಾಡುವಾಗಲೇ ಧ್ರುವ ಸರ್ಜಾ ಸಿನಿಮಾ ಮಾಡಬೇಕೆಂದು ಬಯಸಿದ್ದೆ, ಆದರೆ ಈಗ ನನಗೆ ಸಮಯ ಕೂಡಿ ಬಂದಿದೆ ಎಂದು ಉದಯ್ ಮೆಹ್ತಾ ಹೇಳಿದ್ದಾರೆ. 
ಮೊದಲ ಸಿನಿಮಾ ನಂತರ ಮೂರು ಚಿತ್ರಗಳಿಗೆ ಧ್ರುವ ಸರ್ಜಾ ಕಮಿಟ್ ಆಗಿದ್ದರು. ಹೀಗಾಗಿ ನನಗೆ ಡೇಟ್ಸ್ ಸಿಕ್ಕಿರಲಿಲ್ಲ, ಅವರ ಡೇಟ್ಸ್ ಗಾಗಿ ನಾನು ಕಾಯುತ್ತಿದ್ದೆ. 
ಅವರ ಜನಪ್ರಿಯತೆಯಿಂದಾಗಿ ಬಹು ದೊಡ್ಡ ಸ್ಟಾರ್ ಆಗಿದ್ದಾರೆ, ಜೊತೆಗೆ ಅವರು ಎಷ್ಟು ಹಣ ಕೇಳುತ್ತಾರೋ ಅಷ್ಟು ನೀಡಲು ನಿರ್ಮಾಪಕರು ಸಿದ್ದರಿದ್ದಾರೆ. ಅವರಿಗೆ ನಾನು ಎಷ್ಟು ಹಣ ನೀಡುತ್ತೇನೆ ಎಂಬುದು ಮುಖ್ಯವಲ್ಲ, ನೀಡುವ ಹಣಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಉದಯ್ ಹೇಳಿದ್ದಾರೆ.
ಉದಯ್ ಮೆಹ್ತಾ ಅವರ ಜೊತೆ ಸಿನಿಮಾ ಮಾಡಲು ಧ್ರುವ ಸರ್ಜಾ ಒಪ್ಪಿದ್ದಾರೆ. ಭರ್ಜರಿ ಸಿನಿಮಾ ರಿಲೀಸ್ ಗು ಮುನ್ನ ಈ ಸಂಬಂಧ ಒಪ್ಪಿಗೆ ನೀಡಿದ್ದಾರೆ. ಧ್ರುವ ಸರ್ಜಾ ಪ್ರತಿಭೆ ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT