ಫಸ್ಟ್ ರ್ಯಾಂಕ್ ರಾಜು ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪರಿಚಿತರಾಗಿದ್ದ ಗುರುನಂದನ್ ಸದ್ಯ ರಾಜು ಕನ್ನಡ ಮಿಡಿಯಂ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದು ಈ ಮಧ್ಯೆ ರಘುರಾಂ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ.
ಈ ಎರಡು ಚಿತ್ರಗಳ ನಂತರ ಗುರುನಂದನ್ ಇದೀಗ ಛಾಯಾಗ್ರಾಹಕರಾಗಿದ್ದ ಮನೋಹರ್ ಜೋಷಿ ಅವರು ನಿರ್ದೇಶಕನಕ್ಕೆ ಮುಂದಾಗಿದ್ದು ಈ ಚಿತ್ರದಲ್ಲಿ ಗುರುನಂದನ್ ಅಭಿನಯಿಸಲಿದ್ದಾರಂತೆ. ಇನ್ನು ಈ ಚಿತ್ರವನ್ನು ಸೌಂದರ್ಯ ಜಗದೀಶ್ ನಿರ್ಮಿಸಲಿದ್ದಾರಂತೆ. ಮೊದಲಿಗೆ ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆಯಾದ ನಂತರ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಸದ್ಯ ಗುರುನಂದನ್ ಆ ಚಿತ್ರದ ಪಾತ್ರಕ್ಕಾಗಿ ಕಸರತ್ತು ಶುರುಮಾಡಿದ್ದಾರೆ. ಸೌಂದರ್ಯ ಜಗದೀಶ್ ಅವರು ಬೇರೆ ಪ್ರಾಜೆಕ್ಟ್ ಗಳಲ್ಲಿ ಬಿಜಿಯಾಗಿರುವುದರಿಂದ ಆ ಎಲ್ಲಾ ಯೋಜನೆಗಳು ಮುಗಿದ ನಂತರ ಹೊಸ ಚಿತ್ರ ಸೆಟ್ಟೇರಲಿದೆ.
ಗುರುನಂದನ್ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರ ಸದ್ಯ ಸೆನ್ಸಾರ್ ಬೋರ್ಡ್ ಮುಂದಿದೆ. ಚಿತ್ರವನ್ನು ಅಕ್ಟೋಬರ್ 27ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಫಸ್ಟ್ ರ್ಯಾಂಕ್ ರಾಜು ಚಿತ್ರವನ್ನು ನಿರ್ದೇಶಿಸಿದ್ದ ನರೇಶ್ ಕುಮಾರ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.