ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಬಿಗ್ ಬಾಸ್ ಸೀಸನ್-5 ಅ.15ರಿಂದ ಆರಂಭ; ಬಿಗ್ ಹೌಸ್ ಸೆಲೆಬ್ರಿಟಿ ಪಟ್ಟಿಯಲ್ಲಿ ಯಾರಿದ್ದಾರೆ ಗೊತ್ತಾ?

ನಟ ಕಿಚ್ಚಾ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಷೋಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 15ರಿಂದ ಕಾರ್ಯಕ್ರಮ ಆರಂಭವಾಗಲಿದೆ.

ಬೆಂಗಳೂರು: ನಟ ಕಿಚ್ಚಾ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಷೋಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಅಕ್ಟೋಬರ್ 15ರಿಂದ ಕಾರ್ಯಕ್ರಮ ಆರಂಭವಾಗಲಿದೆ.
ಒಟ್ಟು 100 ದಿನಗಳ ಕಾಲ ನಡೆಯುವ ಈ ಬಹು ನಿರೀಕ್ಷಿತ ರಿಯಾಲಿಟಿ ಷೋನಲ್ಲಿ ಈ ಬಾರಿ ಸೆಲೆಬ್ರಿಟಿಗಳು ಮಾತ್ರವಲ್ಲದೇ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಇದೇ ಅಕ್ಟೋಬರ್ 15ರಂದು ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗಲಿದ್ದು, ಅಕ್ಟೋಬರ್ 16ರಿಂದ ಬಿಗ್ ಹೌಸ್ ನಲ್ಲಿ ಸ್ಪರ್ಧಿಗಳ 100 ದಿನಗಳ ಸಂಸಾರ ಶುರುವಾಗಲಿದೆ. ಈ ಬಗ್ಗೆ ಸ್ವತಃ ಕಲರ್ಸ್ ಸೂಪರ್ ಚಾನಲ್ ಪ್ರಕಟಣೆ ನೀಡಿದ್ದಲ್ಲದೇ ಕಾರ್ಯಕ್ರಮ ಕುರಿತ ಪ್ರಮೋವನ್ನೂ ಕೂಡ ಫೇಸ್ ಬುಕ್ ನಲ್ಲಿ ಬಿಡುಗಡೆ ಮಾಡಿದೆ.

ಸೆಲೆಬ್ರಿಟಿಗಳೊಂದಿಗೆ ಅರ್ಧದಷ್ಟು ಜನಸಾಮಾನ್ಯರು
ಬಿಗ್ ಹೌಸ್ ನೊಳಗೆ ಪ್ರವೇಶ ಪಡೆಯಲು ಈ ಬಾರಿ ತೀವ್ರ ಪೈಪೋಟಿ ಎದುರಾಗಿದ್ದು, ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಪ್ರತೀ ಬಾರಿ ಸೆಲೆಬ್ರಿಟಿಗಳಿಂದ ತುಂಬಿರುತ್ತಿದ್ದ ಬಿಗ್ ಹೌಸ್  ನಲ್ಲಿ ಈ ಬಾರಿ ಅರ್ಧದಷ್ಟು ಜನ ಸಾಮಾನ್ಯರು ಕಾಣಸಿಗಲಿದ್ದಾರೆ. ಕಳೆದ ಸೀಸನ್ 3 ನಲ್ಲಿಯೇ ಇಂತಹುದೊಂದು ಪ್ರಯೋಗಕ್ಕೆ ಬಿಗ್ ಬಾಸ್ ತಂಡ ಮುಂದಾಗಿತ್ತು. ಅದರಂತೆ ನೇಹಾಗೌಡ, ಜಯಶ್ರೀ ಅವರನ್ನು ಸ್ಪರ್ಧಿಗಳಾಗಿ ಆಯ್ಕೆ  ಮಾಡಲಾಗಿತ್ತು.

ಈ ಬಾರಿ ಚಿತ್ರರಂಗ, ಟೆಲಿವಿಷನ್ ರಂಗದ ಗಣ್ಯರು ಸೇರಿದಂತೆ ಜನ ಸಾಮಾನ್ಯರು ಕೂಡ ಬಿಗ್ ಹೌಸ್ ನಲ್ಲಿ ಕಾಣಸಿಗಲಿದ್ದಾರೆ. ಪತ್ರಿಕೆಯೊಂದು ವರದಿ ಮಾಡಿರುವಂತೆ ಈ ಬಾರಿ ಬಿಗ್ ಹೌಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಇಷ್ಟಕಾಮ್ಯ  ಚಿತ್ರದ ನಾಯಕಿ ಕಾವ್ಯಾಶೆಟ್ಟಿ, ನಟ ಕೋಮಲ್, ನಟಿ ತಾರಾ, ನಟ ಸುನಿಲ್ ರಾವ್, ನಿರ್ದೇಶಕ ಎಸ್ ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್, ನಟ ದಿಗಂತ್, ಹಾಸ್ಯ ನಟ ರಾಜು ತಾಳಿಕೋಟೆ, ಒಗ್ಗರಣೆ ಡಬ್ಬಿ ಕಾರ್ಯಕ್ರಮ  ನಿರೂಪಕ ಮುರಳಿ ಸೇರಿದಂತೆ ಹಲವು ಗಣ್ಯರ ಹೆಸರುಗಳು ಕೇಳಿಬರುತ್ತಿವೆ. ಒಟ್ಟು 16 ಮಂದಿ ಸ್ಪರ್ಧಿಗಳ ಪೈಕಿ 7 ಅಥವಾ 8 ಮಂದಿ ಸ್ಪರ್ಧಿಗಳು ಸೆಲೆಬ್ರಿಟಿಗಳಾದರೆ. ಉಳಿದ 7 ಅಥವಾ 8 ಮಂದಿ ಜನಸಾಮಾನ್ಯರು  ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿರಲಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT