ಪ್ರಿಯಾಂಕ ತಿಮ್ಮೇಶ್ 
ಸಿನಿಮಾ ಸುದ್ದಿ

ಚಿಲ್ಲಂನಲ್ಲಿ ನಟಿಸುತ್ತಿರುವುದು ಖುಷಿ ನೀಡಿದೆ: ಪ್ರಿಯಾಂಕ ತಿಮ್ಮೇಶ್

ಸರಿಯಾದ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ಪ್ರಿಯಾಂಕ ತಿಮ್ಮೇಶ್ ತಮ್ಮ ಪ್ರಾಜೆಕ್ಟ್ ಗಳನ್ನು ಜಾಗರೂಕತೆಯಿಂದ...

ಸರಿಯಾದ ಹಾದಿಯಲ್ಲಿ ಹೆಜ್ಜೆಯಿಡುತ್ತಿರುವ ಪ್ರಿಯಾಂಕ ತಿಮ್ಮೇಶ್ ತಮ್ಮ ಪ್ರಾಜೆಕ್ಟ್ ಗಳನ್ನು ಜಾಗರೂಕತೆಯಿಂದ ಆರಿಸುತ್ತಾರೆ. ಮಲಯಾಳಂನಲ್ಲಿ ಒಂದು ಮತ್ತು ಕನ್ನಡದಲ್ಲಿ ಎರಡು ಚಿತ್ರಗಳ ಶೂಟಿಂಗ್ ಮುಗಿಸಿರುವ ಪ್ರಿಯಾಂಕ ತಿಮ್ಮೇಶ್ ಸರಿಯಾದ ಚಿತ್ರಕಥೆಗೆ ಕಾಯುತ್ತಾರಂತೆ.

ಭೀಮಸೇನ ನಳ ಮಹರಾಜ ಚಿತ್ರದ ನಂತರ ಮನೋರಂಜನ್ ನಟನೆಯ ಚಿಲ್ಲಮ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಿಶನ್ ನಂತರ ಚಿತ್ರ ನಿರ್ಮಾಪಕರಿಗೆ ಪ್ರಿಯಾಂಕ ತಿಮ್ಮೇಶ್ ಈ ಪಾತ್ರಕ್ಕೆ ಸೂಕ್ತ ಎನಿಸಿದೆ.

ಗಣಪ ಚಿತ್ರದ ಹಿರೋಯಿನ್ ಪ್ರಿಯಾಂಕಾ ಹೇಳುವುದು ಹೀಗೆ: ಕನ್ನಡದಲ್ಲಿ ಅಪರೂಪ ಚಿತ್ರವಾಗಿರುವ ಚಿಲ್ಲಮ್ ನಲ್ಲಿ ಮಹಿಳಾ ನಿರ್ದೇಶಕಿಯಾದ ಜೆ.ಚಂದ್ರಕಲಾ ಅವರ ಜೊತೆ ಕೆಲಸ ಮಾಡುವುದು ಉತ್ಸಾಹವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಮನೋರಂಜನ್ ಮತ್ತು ಪ್ರಿಯಾಂಕಾ ನಾಯಕ-ನಾಯಕಿಯಾಗಿ ಅಭಿನಯಿಸುವ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಸರಿತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಂದ್ರಕಲಾ ಅವರು ಕಥೆಯನ್ನು ವಿವರಿಸಿದ ರೀತಿ ಇಷ್ಟವಾಯಿತು. ನನ್ನ ಪಾತ್ರವನ್ನು ವಿವರಿಸುವಾದ ಪ್ರತಿ ದೃಶ್ಯವನ್ನು ಗ್ರಹಿಸಿಕೊಂಡೆ. ಎಲ್ಲಾ ಕಲಾವಿದರಿಂದ ಅದ್ಭುತ ನಟನೆಯನ್ನು ಚಿತ್ರತಂಡ ಬಯಸಿದೆ. ಆಡಿಶನ್ ಮುಗಿಸಿ ಹೊರಗೆ ಬರುವಾಗ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಗಬೇಕು ಎಂದು ಭಾವಿಸುತ್ತಿದ್ದೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT