ಪುನೀತ್ ರಾಜಕುಮಾರ್, ಸಂತೋಷ್ ಆನಂದರಾಮ್
ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ರಾಜಕುಮಾರ ಚಿತ್ರದ ನಂತರ ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜಕುಮಾರ್ ಮತ್ತೊಮ್ಮೆ ಜತೆಯಾಗುತ್ತಿದ್ದು ಈ ಚಿತ್ರದ ಕುರಿತು ಗಾಂಧಿನಗರದಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ.
ದಿವಂಗತ ವರನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಚಿತ್ರದ ಕುರಿತಂತೆ ಅಧಿಕೃತ ಘೋಷಣೆಯಾಗಲಿದೆ. ಆದರೆ ಇಲ್ಲಿಯವರೆಗೂ ಶೀರ್ಷಿಕೆ ಕುರಿತು ನಿರ್ಧಾರವಾಗಿಲ್ಲ. ಆದರೆ ಬಲ್ಲ ಮೂಲಗಳಿಂದ ಡಾ. ರಾಜಕುಮಾರ್ ಅವರು ಅಭಿನಯಿಸಿರುವ ಯಾವುದಾದರೂ ಚಿತ್ರದ ಟೈಟಲ್ ಅನ್ನೇ ತಮ್ಮ ಮುಂದಿನ ಚಿತ್ರಕ್ಕೆ ಇಡಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಅಂದರೆ ನಟಸಾರ್ವಭೌಮ ರಾಜಕುಮಾರ್ ಅಭಿನಯಿಸಿರುವ 205 ಚಿತ್ರಗಳ ಪೈಕಿ ಯಾವುದಾದರೂ ಒಂದು ಚಿತ್ರದ ಟೈಟಲ್ ಆಗಿರಲಿದೆ. ಇನ್ನು ನಿರ್ದೇಶಕರು ಕಥೆಗೆ ಸಂಬಂಧಿಸಿದಂತೆ ಮೂರು ಟೈಟಲ್ ಗಳನ್ನು ಆಯ್ಕೆ ಮಾಡಿದ್ದು ಅದರಲ್ಲಿ ಯಾವ ಟೈಟಲ್ ಅಂತಿಮವಾಗುತ್ತದೆ ಕಾದು ನೋಡಬೇಕು. ನಿರ್ದೇಶಕರು ಮಾತ್ರ ತಮ್ಮ ಚಿತ್ರದ ಟೈಟಲ್ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ.
ಚಿತ್ರಕ್ಕೆ ರಾಜರತ್ನ ಎಂದು ಶೀರ್ಷಿಕೆ ಇಡುವಂತೆ ಪುನೀತ್ ಅಭಿಮಾನಿಗಳು ನಿರ್ದೇಶಕರಿಗೆ ಮನವಿ ಮಾಡಿದ್ದರು. ಆದರೆ ಚಿತ್ರದ ಕಥೆ ಸಾಮಾಜಿಕ ಸಮಸ್ಯೆಗಳ ಕುರಿತಾದ್ದರಿಂದ ನಿರ್ದೇಶಕರು ಈ ಟೈಟಲ್ ಸೂಕ್ತ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಟೈಟಲ್ ಯಾವುದೇ ಅಂತಿಮವಾಗಲಿ ಆದರೆ ಅದು ಖಂಡಿತ ಪರಿಣಾಮ ಬೀರಲಿದೆ.
ಹೊಂಬಾಳೆ ಫಿಲ್ಮಂ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಚುನಾವಣೆ ಮುಗಿದ ನಂತರ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಪುನೀತ್ ಅಭಿಮಾನಿಗಳು ಮಾತ್ರ ಚಿತ್ರಕ್ಕೆ ಯಾವ ಟೈಟಲ್ ಇಡಬಹುದು ಎಂದು ಊಹಿಸಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos