ಬೆಂಗಳೂರು: ಕನ್ನಡ ಸಸ್ಪೆನ್ಸ್ ಚಿತ್ರಗಳ ನಿರ್ಮಾಣದಲ್ಲಿ ಹೆಸರಾದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೃಷ್ಟಿಯಾಗಿರುವ "ಉದ್ಘರ್ಷ" ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ.
"ತರ್ಕ", "ನಿಷ್ಕರ್ಷ", "ಉತ್ಕರ್ಷ" ಸೇರಿ ಹಲು ಚಿತ್ರಗಳನ್ನು ತಯಾರಿಸಿರುವ ದೇಸಾಯಿ ಈ ಚಿತ್ರವನ್ನು ಸಹ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಿಸುತ್ತಿದ್ದಾರೆ. ಚಿತ್ರವು ತಮಿಳು ಹಾಗೂ ಮಲಯಾಳಂ ಗೆ ಡಬ್ ಆಗುತ್ತದೆಂದು ಅವರು ಹೇಳಿದರು.
ಒಂದು ಆಕ್ಷನ್-ಥ್ರಿಲ್ಲರ್ ಕಥೆಯನ್ನು ಹೊಂದಿರುವ "ಉದ್ಘ್ಹರ್ಷ"ದಲ್ಲಿ ಸಿಂಗಂ - 3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, ಕಬಾಲಿಯ ಧನ್ಸಿಕಾ, ಬಾಹುಬಲಿ ಚಿತ್ರದ ಪ್ರಭಾಕರ್ ಇದ್ದ್ದಾರೆ.
ತನ್ಯಾ ಹೋಪ್, ಶ್ರದ್ದಾ ದಾಸ್, ಕಿಶೋರ್, ವಂಶಿ ಕೃಷ್ಣ, ಸೇರಿ ಅನೇಕ ನಟರು ಅಭಿನಯಿಸಿದ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚುತ್ರಕ್ಕೆ ಬಾಲಿವುಡ್ ಸಂಗೀರ ನಿರ್ದೇಶಕ ಸಂಜಯ್ ಚೌಧರಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರಕ್ಕೆ ಕೆಂಪರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನವಿದೆ.ವಿಷ್ಣುವರ್ಧನ್ ಹಾಗು ಪಿ. ರಾಜನ್ ಛಾಯಾಗ್ರಹಣವಿರುವ ಈ ಚಿತ್ರ ಹೈದರಾಬಾದ್, ಮಡಿಕೇರಿ, ಕೇರಳ ಹಾಗೂ ಬೆಂಗಳೂರುಗಳಲ್ಲಿ ಚಿತ್ರೀಕರಣಗೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos