ಅಭಿಷೇಕ್ 
ಸಿನಿಮಾ ಸುದ್ದಿ

ಅಮರ್ ಚಿತ್ರಕ್ಕಾಗಿ ಬೈಕ್ ನಲ್ಲಿ ಅಭಿಷೇಕ್ , ತನ್ಯಾ ರೈಡಿಂಗ್

ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, 50 ಬೈಕ್ ಗಳ ಜೊತೆ ಅಭಿಷೇಕ್ ಮತ್ತು ತನ್ಯಾ ಮಳೆ ಮತ್ತು ...

ಬೆಂಗಳೂರು: ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು,  50 ಬೈಕ್ ಗಳ ಜೊತೆ ಅಭಿಷೇಕ್ ಮತ್ತು ತನ್ಯಾ ಮಳೆ ಮತ್ತು ಬಿಸಿಲಿನಲ್ಲಿ ರೈಂಡಿಂಗ್ ಮಾಡುತ್ತಿದ್ದಾರೆ. 
ಅಮರ್ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ,. ಹೊಸ ದಾಖಲೆ ಬರೆಯಲು ಚಿತ್ರತಂಡ ತಯಾರಾಗಿದೆ, ಹಲವು ಲೋಕೆಶನ್ ಗಳ್ಲಿ ಶೂಟಿಂಗ್ ಗಾಗಿ ಸಿದ್ದತೆ ನಡೆಸಲಾಗಿದೆ. ಜೂನ್ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಆರಂಭವಾಯಿತು.  ಈಗ ರಾಜ್ಯಾದ್ಯಂತ ಶೂಟಿಂಗ್ ನಡೆಯುತ್ತಿದ್ದು ನೆರೆಹೊರೆಯ ರಾಜ್ಯಗಳಲ್ಲೂ ಶೂಟಿಂಗ್ ನಡೆಯಲಿದೆ,
ಮೊದಲು ಕೊಯಂಬತ್ತೂರಿನಿಂದ ಆರಂಭಿಸಲಾಯಿತು, ಬೆಳಗಾವಿ, ಮಣಿಪಾಲ, ಮಂಗಳೂರು ನಲ್ಲಿ ಆರು ದಿನಗಳ ಕಾಲ ತಂಗಿದ್ದರು, ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ ಸೇರಿದಂತೆ ಹಲವು ಸ್ಥಳಗಳಲ್ಲಿ ಶೂಟಿಂಗ್ ನಡೆಸಲಾಗಿದೆ. 
ಸದ್ಯ ಊಟಿಯಲ್ಲಿ ಶೂಟಿಂಗ್ ಮುಗಿದಿದೆ, ಮುಂದೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ ಎಂದು ನಾಗಶೇಖರ್ ಹೇಳಿದ್ದಾರೆ, ಜೈಪುರ ದಲ್ಲಿ ರೇಸ್ ಶೂಟಿಂಗ್ ನಡೆಯಲಿದೆ. ನಮ್ಮ ಸಿನಿಮಾದಲ್ಲಿ ಹೊಸ ಹೊಸ ಸ್ಥಳಗಳ ಬಗ್ಗೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ, ಇದು ಚಿತ್ರಕತೆಗೂ ಹೊಂದಿಕೆಯಾಗುತ್ತದೆ ಎಂದು ನಾಗಶೇಖರ್ ಹೇಳಿದ್ದಾರೆ.
ದೇಶದ ಹಲವು ನಗರಗಳಲ್ಲಿ ಮಳೆಯಾಗುತ್ತಿರುವುದು, ವಾತಾವರಣದ ಮೇಲೆ ಬೈಕ್ ರೈಡಿಂಗ್ ಮಾಡುವುದು ಅವಲಂಬಿತವಾಗಿದೆ. ಮಳೆ ವೇಳೆ ಬೈಕಿಂಗ್ ಮಾಡುವುದು ಸವಾಲಿನ ಕೆಲಸ, ಆದರೆ ಮಳೆಯನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ, ಶೇ. 50 ರಷ್ಟು ಶೂಟಿಂಗ್ ಪೂರ್ಣವಾಗಿದೆ, ವಿದೇಶದಲ್ಲೂ ಸಿನಿಮಾ ಶೂಟಿಂಗ್ ಮಾಡುವ ಪ್ಲಾನ್ ಇದೆ ಎಂದು ನಾಗಶೇಖರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT