ನಿರ್ದೇಶನದ ಪ್ರಥಮ ಪರಿಚಯದಲ್ಲಿಯೇ ಸಿದ್ಧಾರ್ಥ್ ಮಾರದೆಪ್ಪ 'ಮೊಡವೆ' ಅಸಾಮಾನ್ಯ ಶೀರ್ಷಿಕೆಯನ್ನು ಆರಿಸಿಕೊಂಡಿದ್ದಾರೆ. ಪಿಂಪಲ್ ಅರ್ಥ ಕೊಡುವ ಮೊಡವೆಯನ್ನು ಹದಿಹರೆಯದ ವರ್ಷದಲ್ಲಿನ ಡ್ರಾಮಕ್ಕೆ ಪರ್ಯಾಯವಾಗಿ ಬಳಸಲಾಗುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ.
ನಟ ಶಶಿಕುಮಾರ್ ಮಗ ಆದಿತ್ಯ ಶಶಿಕುಮಾರ್ ಈ ಚಿತ್ರದ ನಾಯಕ ನಟನಾಗಿ ಅಪೂರ್ವ ನಟಿಯಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ಮೃಧು ಪ್ರೇಮ ಕಥೆಯೊಂದಿಗೆ ಹದಿಹರೆಯದ ವಯಸ್ಸಿನವರ ತೋಳಾಲಾಟ ಚಿತ್ರದ ಕಥಾ ವಸ್ತು ಆಗಿರಲಿದೆ ಎಂದು ಹೇಳುವ ಸಿದ್ದಾರ್ಥ್ , ಇದರಲ್ಲಿ ತಪ್ಪು ಅರ್ಥ ಕಲ್ಪಿಸುವಂತಹುದೇನೂ ಇಲ್ಲ. ವಯಸ್ಸನ್ನು ಮಾತ್ರ ಪ್ರತಿಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿನ ಯೋಗರಾಜ್ ಭಟ್ , ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ ಶ್ರೀಧರ್ ವಿ. ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಬ್ರೌನ್ ಬುಲ್ ಸ್ಟುಡಿಯೊಸ್ ಅಡಿಯಲ್ಲಿ ಶಿವಾನಂದ ಶಾಗೊಟಿ, ಮತ್ತು ಆರ್. ಕೃಷ್ಣಮೂರ್ತಿ ಚಿತ್ರ ನಿರ್ಮಿಸುತ್ತಿದ್ದು, ಉದಯ್ ಬಲ್ಲಾಳ್ ಅವರ ಛಾಯಾಗ್ರಾಹಣ ಇರಲಿದೆ. ರವಿ ವರ್ಮ ಸಾಹಸ ಸಂಯೋಜಿಸುತ್ತಿದ್ದು, ದೀಪ್ ಎಸ್, ಕುಮಾರ್ ಸಂಕಲನಕಾರರಾಗಿದ್ದಾರೆ
ಮುಂದಿನ ತಿಂಗಳ 2 ರಂದು ಚಿತ್ರದ ಅದ್ದೂರಿ ಮುಹೂರ್ತ ನೆರವೇರಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕ್ಲಾಪ್ ಮಾಡಲಿದ್ದಾರೆ. ಮುಹೂರ್ತ ಆದ ಕೂಡಲೇ ಎರಡು ದಿನ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ತಿಂಗಳಲ್ಲಿ ಹಂಪಿ, ಬಾದಾಮಿ, ಪಟ್ಟದಕಲ್ಲು, ಬೀದರ್, ರಾಯಚೂರು, ಮತ್ತು ಗುಲ್ಬರ್ಗಾದಲ್ಲಿ ಚಿತ್ರೀಕರಣ ನಡೆಯಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos