ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಎನ್ ಟಿಆರ್ ಕುಟುಂಬದ ಅತ್ಯಂತ ಧೈರ್ಯಶಾಲಿ ಮಗ: ಹರಿಕೃಷ್ಣ ಕುರಿತು ಎನ್ ಟಿಆರ್ 2ನೇ ಪತ್ನಿ ಹೇಳಿಕೆ

ಅಪಘಾತದಲ್ಲಿ ಮೃತಪಟ್ಟ ನಟ ಹರಿಕೃಷ್ಣ ನಂದಮೂರಿ ಕುಟುಂಬದ ಅತ್ಯಂತ ಧೈರ್ಯಶಾಲಿ ಮಗನಾಗಿದ್ದ. ಎಂದೂ ಆತ ಯಾರಿಗೂ ನೋವುಂಟು ಮಾಡಿರಲಿಲ್ಲ. ಹೀಗಿದ್ದೂ ಅವರಿಗೆ ಇಂತಹ ಸಾವು ಸರಿಯಲ್ಲ ಎಂದು ಎನ್ ಟಿಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ.

ಹೈದರಾಬಾದ್: ಅಪಘಾತದಲ್ಲಿ ಮೃತಪಟ್ಟ ನಟ ಹರಿಕೃಷ್ಣ ನಂದಮೂರಿ ಕುಟುಂಬದ ಅತ್ಯಂತ ಧೈರ್ಯಶಾಲಿ ಮಗನಾಗಿದ್ದ. ಎಂದೂ ಆತ ಯಾರಿಗೂ ನೋವುಂಟು ಮಾಡಿರಲಿಲ್ಲ. ಹೀಗಿದ್ದೂ ಅವರಿಗೆ ಇಂತಹ ಸಾವು ಸರಿಯಲ್ಲ ಎಂದು ಎನ್ ಟಿಆರ್ ಎರಡನೇ ಪತ್ನಿ ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಹರಿಕೃಷ್ಣ ಅವರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಲಕ್ಷ್ಮೀ ಪಾರ್ವತಿ ಅವರು, ನಿಜಕ್ಕೂ ಅವರ ಸಾವು ನನಗೆ ಅಪಾರ ಆಘಾತವನ್ನುಂಟು ಮಾಡಿದೆ. ಹರಿಕೃಷ್ಣ ಎನ್ ಟಿಆರ್ ಮಕ್ಕಳಲ್ಲೇ ನಾನು ಅತ್ಯಂತ ಪ್ರೀತಿಸುವ ಮಗವಾಗಿದ್ದ. ಅವರ ಸಾವಿನ ವಿಚಾರ ಕೇಳಿ ನಿಜಕ್ಕೂ ಅವರ ತಂದೆಯ ಆತ್ಮ ದುಃಖಿಸುತ್ತಿರಬಹುದು ಎಂದು ಹೇಳಿದ್ದಾರೆ.
ಹರಿಕೃಷ್ಣ ಎಂದಿಗೂ ಯಾರಿಗೂ ನೋವುಂಟು ಮಾಡಿದವರಲ್ಲ. ಆದರೂ ಇಂತಹ ಸಾವು ಏಕಾಯಿತು. ಅವರ ಸಾವು ನಿಜಕ್ಕೂ ತಡೆಯಲಾಗದ ನೋವು ತಂದಿದೆ. ಟಿಡಿಪಿ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಹರಿಕೃಷ್ಣ ಅವರ ಸಾವಿನಿಂದ ಅಪಾರ ಪ್ರಮಾಣದ ಎನ್ ಟಿಆರ್ ಅಭಿಮಾನಿಗಳಿಗೆ ದುಃಖವಾಗಿದೆ. ಅವರ ತಂದೆ ಟಿಡಿಪಿ ಪಕ್ಷ ಸ್ಥಾಪನೆ ಮಾಡಿದ್ದಾಗ ಇದೇ ಹರಿಕೃಷ್ಣ ಚೈತನ್ಯ ರಥಮ್ ಯಾತ್ರೆಯ ಸಾರಥಿಯಾಗಿದ್ದರು. ಪಕ್ಷದ ವಾಹನವನ್ನು ಖುದ್ಧು ತಾವೇ ಚಲಾಯಿಸಿಕೊಂಡು ಹೋಗಿದ್ದರು. ಅಲ್ಲದೆ ಅವರ ತಂದೆ ಮುಖ್ಯಮಂತ್ರಿಯಾಗುವಲ್ಲಿ ಹರಿಕೃಷ್ಣ ತುಂಬಾ ಶ್ರಮಿಸಿದ್ದರು. ಇಂತಹ ಹರಿಕೃಷ್ಣ ಅವರ ಸಾವು ಈ ರೀತಿ ಸಂಭವಿಸುತ್ತದೆ ಎಂದು ಯಾರೂ ತಿಳಿದಿರಲಿಲ್ಲ ಎಂದು ಲಕ್ಷ್ಮೀ ಪಾರ್ವತಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

SCROLL FOR NEXT