ಪತ್ನಿ, ಮಗಳೊಡನೆ ರಾಕಿಂಗ್ ಸ್ಟಾರ್ ಸುದ್ದಿಗೋಷ್ಠಿ 
ಸಿನಿಮಾ ಸುದ್ದಿ

ನಾನು ನಟ, ಆದರೆ ತಂದೆಯಾಗಿ ಈ ಭಾವನೆ ಹಂಚಿಕೊಳ್ಳೋಕಾಗಲ್ಲ: ಪತ್ನಿ, ಮಗಳೊಡನೆ ರಾಕಿಂಗ್ ಸ್ಟಾರ್ ಸುದ್ದಿಗೋಷ್ಠಿ

ನಾನು ನಟನೇ ಆಗಿದ್ದರೂ, ಈಗ ತಂದೆಯಾಗಿ, ಈ ಭಾವನೆ, ಅನುಭವವನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ, ಹೆಣ್ಣು ಮಗುವಾಗಿರುವುದು ಬಹಳ ಖುಷಿ ತಂದಿದೆ. ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿಕೊಂಡಿದ್ದಾರೆ.

ಬೆಂಗಳೂರು: ನಾನು ನಟನೇ ಆಗಿದ್ದರೂ, ಈಗ ತಂದೆಯಾಗಿ, ಈ ಭಾವನೆ, ಅನುಭವವನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ, ಹೆಣ್ಣು ಮಗುವಾಗಿರುವುದು ಬಹಳ ಖುಷಿ ತಂದಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ತನ್ನ ಪತ್ನಿ, ನಟಿ ರಾಧಿಕಾ ಪಂಡಿತ್ ಹಾಗೂ ಮಗಳೊಡನೆ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಿದ್ದರು.
"ಆ ದಿನ ನಾನು ಬೇರೆ ಕೆಲಸದಲ್ಲಿದ್ದೆ. ಹಾಗಾಗಿ ನಾನು ಯಾರನ್ನೂ ಮಾತನಾಡಿಸಲು ಸಾಧ್ಯವಾಗಿಲ್ಲ. ಆದರೆ ನೀವು ನಮ್ಮ ಮಾತಿಗೆ ಗೌರವ ನೀಡಿದ್ದೀರಿ, " ಎಂದ ಯಶ್ "ಇದೊಂದು ಸ್ಪೆಷಲ್ ಅನುಭವ ನಟನಾಗಿ ನಾನು ಯಾವ ಭಾವನೆಯನ್ನೂ ತೋರಬಲ್ಲೆನಾದರೂ ಈ ಅನುಭವ, ಭಾವನೆಯನ್ನು ಹಂಚಿಕೊಳ್ಳುವುದು ತೀರಾ ಕಷ್ಟ." ಎಂದಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯಿಂದ ರಾಧಿಕಾ ಡಿಸ್ಚಾರ್ಜ್ ಆಗಿರುವ ಹಿನ್ನೆಲೆಯಲ್ಲಿ ಯಶ್ ಹಾಗೂ ರಾಧಿಕಾ ಸುದ್ದಿಗೋಷ್ಠಿ ನಡೆಸಿದರು.
"ಇವತ್ತು ನಮ್ಮ ಮದುವೆಯಾಗಿ ಎರಡು ವರ್ಷ ಆಯ್ತು. ನನಗೆ ಹೆಣ್ಣು ಮಗುವಾಗಿದೆ, ಹೆಣ್ಣು ಮಕ್ಕಳೆಂದ್ರೆ ನನಗೆ ಮೊದಲಿಂದಲೂ ಇಷ್ಟ ನಮ್ಮ ಕುಟುಂಬಕ್ಕೂ ಹೆಣ್ಣು ಮಗು ಮನೆಗೆ ಬಂದಿರುವುದು ಖುಷಿಯಾಗಿದೆ. 
"ರಾಧಿಕಾಗೆ ಗಂಡುಮಗು ಎಂದರೆ ಇಷ್ಟ, ಹಾಗಾಗಿ ಗಂಡಾಗಿದ್ದರೆ ಇದೇ ಹೆಸರು ಇಡಬೇಕೆಂದು ಹೆಸರನ್ನೂ ಕೂಡಾ ಸೆಲೆಕ್ಟ್ ಮಾಡಿಕೊಂಡಿದ್ದರು. ಆದರೆ ನನ್ನಿಷ್ಟದಂತೆ ಹೆಣ್ಣು ಮಗುವಾಗಿದೆ. ಈಗ ಹೆಸರು ಕುರಿತು ಯೋಚಿಸುತ್ತಿದ್ದೇನೆ " ಅವರು ಹೇಳಿದ್ದಾರೆ.
"ನಾನು ತಾಯ್ತನಕ್ಕೆ ಹೊಂದಿಕೊಂಡಿದ್ದೇನೆ, ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ" ರಾಧಿಕಾ ಪಂಡಿತ್ ಹೇಳಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT