ಕ್ರೇಜಿ ಸ್ಟಾರ್ ರವಿಚಂದ್ರನ್ 
ಸಿನಿಮಾ ಸುದ್ದಿ

'ಬ್ಯಾಟ್ರಾಯ'ನ ಕಥೆ ಹೇಳೋಕೆ ಚೇತನ್ ಗೆ ಜತೆಯಾದ ಕ್ರೇಜಿ ಸ್ಟಾರ್!

ಚೇತನ್ ಸದ್ಯ ಸಾಮಾಜಿಕ ಕಾರ್ಯ ಹಾಗೂ ನತನೆ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ನಮಗೆ ಸಿಕ್ಕಿರುವ ಮಾಹಿರ್ತಿಯಂಯೆ "ಆ ದಿನಗಳು" ಖ್ಯಾತಿಯ ನಟ ತಮ್ಮ ಮುಂದಿನ....

ಬೆಂಗಳೂರು: ಚೇತನ್ ಸದ್ಯ ಸಾಮಾಜಿಕ ಕಾರ್ಯ ಹಾಗೂ ನತನೆ ಎರಡಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ನಮಗೆ ಸಿಕ್ಕಿರುವ ಮಾಹಿರ್ತಿಯಂಯೆ "ಆ ದಿನಗಳು" ಖ್ಯಾತಿಯ ನಟ ತಮ್ಮ ಮುಂದಿನ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಡನೆ ತೆರೆ ಹಂಚಿಕೊಳ್ಳುತಿದ್ದಾರೆ.
ಆರ್.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ "ಬ್ಯಾಟ್ರಾಯ" ಎಂದು ಹೆಸರಿಡಲಾಗಿದೆ. ಮದನ್ ಮೋಹನ್ ರೆಡ್ಡಿ ಇದಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಭಾನುವಾರ ಚಿತ್ರತಂಡ ಅತ್ಯಂತ ಸರಳವಾಗಿ ಚಿತ್ರದ ಮಹೂರ್ತ ಕಾರ್ಯಕ್ರಮವನ್ನು ಮುಗಿಸಿದ್ದು ಸದ್ಯವೇ ಚೊತ್ರದ ಕುರಿತು ಅಧಿಕೃತ ಘೋಷಣೆ  ಹೊರಬೀಳಲಿದೆ.. ಚೇತನ್ ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದು ಇದಕ್ಕಾಗಿ ಅವರು ತಮ್ಮ ಉದ್ದನೆಯ ಕೂದಲು ಹಾಗೂ ಗಡ್ಡವನ್ನು ಶೇವ್ ಮಾಡಲಿದ್ದಾರೆ.
ಕ್ರಿಸ್ ಮಸ್ ವಾರಾಂತ್ಯದಲ್ಲಿ ಚಿತ್ರದ ಪ್ರಥಮ ಫೋಟೋಶೂಟ್ ಮಡೆಯಲಿದೆ ಎನ್ನಲಾಗಿದ್ದು ಜನವರಿಯಲ್ಲಿ ಚಿತ್ರ ಸೆತ್ಟೇರಲಿದೆ. ಅಲ್ಲದೆ ಸಮ್ಕ್ರಾಂತಿ ಹಬ್ಬದ ಸಮಯಕ್ಕೆ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿದ್ದು ಈ ವೇಳೆ ರವಿಚಂದ್ರನ್ ಹಾಗೂ ಚೇತನ್ ಪಾತ್ರದ ಕುರುತು ವಿವರ ಸಿಕ್ಕಲಿದೆ.
ರವಿಚಂದ್ರನ್ ಸದ್ಯ ಉಪೇಂದ್ರ ಜತೆಗಿನ "ರವಿ ಚಂದ್ರ" ಚಿತ್ರದ ಚಿತ್ರೀಕರಣದಲ್ಲಿದ್ದಾರೆ.ಚೇತನ್ "ಅತಿರಥ" ಚಿತ್ರದ ತನ್ನ ಪಾಲಿನ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಆರ್.ಎಸ್. ಪ್ರೊಡಕ್ಷನ್ ಪಾಲಿಗೆ ಈ ಚಿತ್ರ ಎರಡನೇ ಚಿತ್ರವಾಗಿದ್ದು ಇದಕ್ಕೆ ಮುನ್ನ ಚಿರಂಜೀವಿ ಸರ್ಜಾ ಅಭಿನಯದ "ರಣಂ" ಅನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT