ಸಿನಿಮಾ ಸುದ್ದಿ

ಪವರ್ ಸ್ಟಾರ್ ಪುನೀತ್ ಗೆ ಅಭಿಮಾನಿಯಿಂದ ವಾಲ್ಮೀಕಿ ರಾಮಾಯಣ ಉಡುಗೊರೆ

Raghavendra Adiga
ಬೆಂಗಳೂರು: ಕನ್ನಡ ವರನಟ ರಾಜ್ ಕುಮಾರ್ ಅವರ ಕಿಇರಿಯ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವರ ಅಭಿಮಾನಿಗಳೊಬ್ಬರು ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಟ ಪುನೀತ್ ಈ ಪುಸ್ತಕ ಹಿಡಿದಿರುವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು 'ಬೆಟ್ಟದ ಹೂವು ಸಿನಿಮಾದಲ್ಲಿ ಎಷ್ಟೇ ದುಡ್ಡು ಸೇವ್ ಮಾಡಿದ್ರೂ ತಗೊಳ್ಳೋಕೆ ಆಗಿರಲಿಲ್ಲ. Finally a fan gifted it.'  ಎಂದು ಬರೆದುಕೊಂಡಿದ್ದಾರೆ. ಪುನೀತ್ ಅವರ ಈ ಚಿತ್ರ ಹಾಗೂ ಬರಹಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಸಾಕಷ್ಟು ಜನರಿಂದ ಮೆಚ್ಚುಗೆ ಸುರಿಮಳೆಯಾಗಿದೆ.
'ಬೆಟ್ಟದ ಹೂವು' ಚಿತ್ರದಲ್ಲಿ "ಬಿಸಿಲೇ ಇರಲಿ, ಮಳೆಯೇ ಬರಲಿ" ಹಾಡಿನಲ್ಲಿ ತಾನು ಹಣವನ್ನು ಸೇರಿಸಿ ರಾಮಾಯಣ ಪುಸ್ತಕ ತೆಗೆದುಕೊಳ್ಳುತ್ತೇನೆ ಎನ್ನುವ ಸಾಲೊಂದು ಇದ್ದು ಚಿತ್ರದ ಅಂತ್ಯದವರೆಗೂ ಆ ಬಾಲಕನಿಗೆ ಪುಸ್ತಕ ಖರೀದಿಸಲು ಸಾಧ್ಯವಾಗುವುದಿಲ್ಲ. ಇದೇ ನೆನಪಿನಲ್ಲಿ ಪುನೀತ್ ರಾಮಾಯಣ ಪುಸ್ತಕ ಹಿಡಿದು ಈ ರೀತಿ ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರ 50 ದಿನ ಪೂರೈಸಿದ್ದು ಈ ವೇಳೆ ಅವರಿಗೆ ರಾಮಾಯಣ ಪುಸ್ತಕ ಉಡುಗೊರೆ ಸಿಕ್ಕಿದೆ. ಆದರೆ ಹೀಗೆ ಪುಸ್ತಕ ನೀಡಿದ್ದ ಅಭಿಮಾನಿ ಯಾರು ಎನ್ನುವ ಗುಟ್ಟನ್ನು ಸ್ಟಾರ್ ನಟ ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ.
SCROLL FOR NEXT