ದಿಗಂತ್, ಸೆನ್ನಾ ಹೆಗಡೆ ಮತ್ತು ಪೂಜಾ ದೇವಾರಿಯಾ 
ಸಿನಿಮಾ ಸುದ್ದಿ

ಸೆನ್ನಾ ಹೆಗ್ಡೆ ಅತ್ಯದ್ಭುತ ತಂತ್ರಜ್ಞ: ನಟ ದಿಗಂತ್ ಹೊಗಳಿಕೆ

ಸೆನ್ನಾ ಹೆಗೆಡೆ ನಿರ್ದೇಶನದ ಕಥೆಯೊಂದು ಸಿನಿಮಾದಲ್ಲಿ ನಟಿಸುತ್ತಿರುವ ದಿಂಗ್ತ ಸ್ವಲ್ಪ ಸೈಲೆಂಟ್ ಆಗಿದ್ದಾರೆ...

ಬೆಂಗಳೂರು:  ಸೆನ್ನಾ ಹೆಗೆಡೆ ನಿರ್ದೇಶನದ ಕಥೆಯೊಂದು ಸಿನಿಮಾದಲ್ಲಿ ನಟಿಸುತ್ತಿರುವ ದಿಂಗ್ತ ಸ್ವಲ್ಪ ಸೈಲೆಂಟ್ ಆಗಿದ್ದಾರೆ.
ಮಂಜುನಾಥ್ ನಿರ್ದೇಶನದ ಫಾರ್ಚೂನರ್ ಸಿನಿಮಾದ ಶೂಟಿಂಗ್ ಮುಗಿಸಿರುವ ದಿಗಂತ್ ಸೆನ್ನಾ ಹೆಗಡೆಯ ಕಥೆಯೊಂದು ಶುರುವಾಗಿದೆ ಸಿನಿಮಾಗೆ ಹಾಡೊಂದು ಬಾಕಿ ಉಳಿದಿದೆ.
ಸೆನ್ನಾ ಹೆಗ್ಡೆ ಅಪ್ರತಿಮ ತಂತ್ರಜ್ಞ ಎಂದು ದಿಗಂತ್ ಹೊಗಳಿದ್ದಾರೆ,ಇದೇ ಮೊದಲ ಬಾರಿಗೆ ನನ್ಗೆ ಇಂಥ ಅನುಭವವಾಗಿದೆ. ತಮ್ಮ ಸಿನಿಮಾಗೆ ನಾಯಕನಿಂದ ಏನು ಬೇಕು ಎಂಬುದರ ಬಗ್ಗೆ ನಿರ್ದೇಶಕರಿಗೆ ಸರಿಯಾದ ಐಡಿಯಾ ಹಾಗೂ ಸ್ಪಷ್ಟತೆ ಇದೆ. ಕಥೆಯೊಂದು ಶುರುವಾಗಿದೆ  ಒಂದು ಪ್ರೀತಿ ಕಥೆಯುಳ್ಳ ಮನರಂಜನಾತ್ಮಕ ಸಿನಿಮಾವಾಗಿದೆ. 
ರಕ್ಷಿತ್ ಶೆಟ್ಟಿ ಮತ್ತು ಪುಶ್ಕರ ಮಲ್ಲಿಕಾರ್ಜುನಯ್ಯ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಪೂಜಾ ದೇವಾರಿಯಾ,  ನಾಯಕಿಯಾಗಿ ನಟಿಸುತ್ತಿದ್ದಾರೆ, ಇದರ ಜೊತೆ ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಾ ಅಂಚನ್ ಮುಖ್ಯ ಭೂಮಿಕೆಯಲ್ಲಿದ್ದಾರೆ,.
ಸೆನ್ನಾ ಹೆಗಡೆ ಮಲಯಾಳಂ ನಿರ್ದೇಶಕರಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅವರಿಗಿರುವ ಒಲವು ನೋಡಿ ನನಗೆ ಖುಷಿಯಾಗಿದೆ. ಅವರು ತುಂಬಾ ವೃತ್ತಿಪರ ವ್ಯಕ್ತಿ, ನಾವಿಬ್ಬರೂ  ಉತ್ತಮ ಸ್ನೇಹಿತರು, ಸೆನ್ನಾ ಹೆಗಡೆ ಜೊತೆ ಕೆಲಸ ಮಾಡಲು ಸಂತಸವಾಗುತ್ತದೆ, ಅವರ ಜೊತೆ ಮತ್ತಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ದಿಗಂತ್ ಸದ್ಯ ವಿವಾಹ ಸಮಾರಂಭ ವೊಂದರಲ್ಲಿ ಪಾಲ್ಗೋಳ್ಳಲು ತಮ್ಮ ತವರಿಗೆ ತೆರಳುತ್ತಿದ್ದು, ನಿರ್ದೇಶಕ ಅರಸು ಅಂಥಾರೆ ಅವರ ಮುಂದಿನ ಪ್ರಾಜೆಕ್ಟ್ ಗಾಗಿ ಮಾತುಕತೆ ನಡೆದಿದೆ. ಸದ್ಯ ತಮ್ಮ ಸಿನಿಮಾ ರಿಲೀಸ್ ಗಾಗಿ ದಿಗಂತ್ ಕಾಯುತ್ತಿದ್ದಾರೆ, ತಮ್ಮ ಎರಡು ಸಿನಿಮಾಗಳು ಕ್ರಿಕೆಟ್ ಮತ್ತು ವಿಧಾನಸಭೆ ಚುನಾವಣೆ ಮುಗಿದ ಮೇಲೆ ರಿಲೀಸ್ ಗಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: EY ವರದಿ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಹಠಾತ್ ಪ್ರವಾಹ: ಭೂಕುಸಿತದಿಂದ ನಾಲ್ವರು ಸಾವು

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

SCROLL FOR NEXT