ರಮ್ಯಾ 
ಸಿನಿಮಾ ಸುದ್ದಿ

'ಧ್ವಜ'ದ ರಮ್ಯಾಗೂ ನಟಿ-ರಾಜಕಾರಣಿ ರಮ್ಯಾಗೂ ಸಂಬಂಧವಿಲ್ಲ: ಅಶೋಕ್ ಕಶ್ಯಪ್

ಹೊಸ ನಾಯಕ ನಟ ರವಿ ಮತ್ತು ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಅಭಿನಯದ ಧ್ವಜ ಚಿತ್ರದ ಮೊದಲ ಟೀಸರ್ ...

ಹೊಸ ನಾಯಕ ನಟ ರವಿ ಮತ್ತು ಖ್ಯಾತ ಬಹುಭಾಷಾ ನಟಿ ಪ್ರಿಯಾಮಣಿ ಅಭಿನಯದ ಧ್ವಜ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ತಮಿಳಿನ ಯಶಸ್ವಿ ಚಿತ್ರ ಕೋಡಿಯ ರಿಮೇಕ್ ಚಿತ್ರ ಇದಾಗಿದ್ದು ಅಲ್ಲದೆ ರಾಜಕೀಯ ವಿಡಂಬನೆಯ ಚಿತ್ರವಾಗಿರುವ ಇದು ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.  ಈ ಚಿತ್ರದಲ್ಲಿ ಪ್ರಿಯಾಮಣಿ ಪಾತ್ರದ ಹೆಸರು ರಮ್ಯಾ ಎಂದು. ಆ ಕಾರಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಪಾತ್ರದಲ್ಲಿನ ರಮ್ಯಾಗೂ ನಟಿ, ರಾಜಕಾರಣಿ ರಮ್ಯಾಗೂ ಹೋಲಿಕೆ ಮಾಡಲಾಗಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ಬಗ್ಗೆ ಅಶೋಕ್ ಕಶ್ಯಪ್ ಹೇಳುವುದು ಹೀಗೆ: ಚುನಾವಣೆ ಹೊಸ್ತಿಲಿನಲ್ಲಿರುವುದರಿಂದ ಈ ಸಮಯದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ರಮ್ಯಾ ಎಂದು ಪ್ರಿಯಾಮಣಿ ಪಾತ್ರಕ್ಕೆ ಹೆಸರಿಡುವುದು ಸೂಕ್ತವೆನಿಸಿತು. ಆದರೆ ಚಿತ್ರದಲ್ಲಿರುವ ಪಾತ್ರಕ್ಕೂ ನಟಿ, ರಾಜಕಾರಣಿ ರಮ್ಯಾ ಅವರಿಗೂ ಇಲ್ಲಿ ಯಾವುದೇ ಹೋಲಿಕೆಯಿರುವುದಿಲ್ಲ. ಇದು ಕೋಡಿ ಚಿತ್ರದ ರಿಮೇಕ್ ಆಗಿರುವುದರಿಂದ ಜೀವನಾಧಾರಿತ ಚಿತ್ರವನ್ನು ಮಾಡುತ್ತಿಲ್ಲ. ಇದೊಂದು ಕಾಲ್ಪನಿಕ ರಾಜಕೀಯ ಥ್ರಿಲ್ಲರ್ ಚಿತ್ರ ಎನ್ನುತ್ತಾರೆ.

ಚಿತ್ರ ಬಿಡುಗಡೆಗೆ ಮುನ್ನ ಆಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ವರ್ಷ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ವಿಡಂಬನೆ ಚಿತ್ರವಾಗಿರುವುದರಿಂದ ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡುತ್ತಿದ್ದೇವಷ್ಟೆ.ಇಲ್ಲಿ ರಮ್ಯಾ ಅವರ ಹೆಸರಿಗೆ ಮಸಿಬಳಿಯುವ ಯಾವುದೇ ಕೆಲಸ ಮಾಡಿಲ್ಲ. ಅದು ಅವರಿಗೂ ಚೆನ್ನಾಗಿ ಗೊತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಮ್ಯಾ ಎನ್ನುವುದು ಯಾರ ಹೆಸರು ಬೇಕಾದರೂ ಆಗಬಹುದಲ್ಲವೇ ಎನ್ನುತ್ತಾರೆ ಅಶೋಕ್ ಕಶ್ಯಪ್.

ಚಿತ್ರದಲ್ಲಿ ಟಿ.ಎನ್.ಸೀತಾರಾಮ್, ದಿವ್ಯ ಉರುಡುಗ, ತಬಲಾ ನಾಣಿ, ವೀಣಾ ಸುಂದರ್ ಕೂಡ ಅಭಿನಯಿಸಿದ್ದಾರೆ. ಸಂತೋಷ್ ನಾರಾಯಣನ್ ಮತ್ತು ಚಿನ್ನ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT