ದರ್ಶನ್ 
ಸಿನಿಮಾ ಸುದ್ದಿ

ಮುನಿರತ್ನರಿಂದಾಗಿ 'ಕುರುಕ್ಷೇತ್ರ' ಚಿತ್ರವಾಗಲು ಸಾಧ್ಯವಾಯಿತು: ನಟ ದರ್ಶನ್

ಸ್ಯಾಂಡಲ್ವುಡ್ ಬಹುನಿರೀಕ್ಷಿತ ಮುನಿರತ್ನ ಕುರುಕ್ಷೇತ್ರ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ...

ಸ್ಯಾಂಡಲ್ವುಡ್ ಬಹುನಿರೀಕ್ಷಿತ ಮುನಿರತ್ನ ಕುರುಕ್ಷೇತ್ರ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಸಿಟಿ ಎಕ್ಸ್ ಪ್ರೆಸ್ ತಂಡ ಚಿತ್ರೀಕರಣದ ಸೆಟ್ ಗೆ ಭೇಟಿ ನೀಡಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದುರ್ಯೋಧನ ಪಾತ್ರದ ಕೆಲ ಫೋಟೋಗಳು ನಮ್ಮ ತಂಡಕ್ಕೆ ಸಿಕ್ಕಿದೆ. ಈ ಮಧ್ಯೆ ಚಿತ್ರದ ಕುರಿತಂತೆ ದರ್ಶನ್ ಅವರನ್ನು ಸಂದರ್ಶಿಸಿದಾಗ ಕೆಲ ಮಹತ್ವದ ವಿಚಾರಗಳನ್ನು ತಂಡದೊಂದಿಗೆ ಹಂಚಿಕೊಂಡಿದ್ದಾರೆ. 
ಕುರುಕ್ಷೇತ್ರ ಚಿತ್ರವಾಗುತ್ತದೆ ಎಂದು ನೀವು ಭಾವಿಸಿದ್ದೀರಾ?
ಇಲ್ಲವೇ ಇಲ್ಲ. ನಾನು ನಿಜವಾಗಿಯೂ ಭಾವಿಸಿರಲ್ಲಿಲ್ಲಾ. ಆದರೆ ಕೆಲ ವಿಷಯಗಳು ಸಂಭವಿಸಿವೆ. ಇಂದು ಭಾರೀ ಬಜೆಟ್ ನ ಕುರುಕ್ಷೇತ್ರ ಚಿತ್ರವಾಗುತ್ತಿದ್ದು ಇದೆಲ್ಲಾ ಸಾಧ್ಯವಾಗಿದ್ದು ಮುನಿರತ್ನ ಅವರಿಂದ. ಇದಕ್ಕೂ ಮೊದಲು ನಾನು ಮುನಿರತ್ನ ನಿರ್ಮಾಣದ ಅನಾಥರು ಚಿತ್ರದಲ್ಲಿ ನಟಿಸಿದ್ದೇ. ಅವರು ಎಲ್ಲಾ ನಿರ್ಮಾಪಕರಂತಲ್ಲ. ಅವರು ಆಯ್ಕೆ ಮಾಡುವ ಕಥೆಗಳು ವಿಭಿನ್ನವಾಗಿರುತ್ತವೆ. ರಾಜಕೀಯದಲ್ಲಿದ್ದರೂ ಸಹ ಚಿತ್ರ ನಿರ್ಮಾಣದ ಬಗ್ಗೆ ಹೆಚ್ಚು ಆಸಕ್ತಿ. ನನ್ನ 50ನೇ ಚಿತ್ರದ ಕುರಿತು ಮಾತನಾಡುತ್ತಿದ್ದಾಗ ಕುರುಕ್ಷೇತ್ರದ ಕಥೆಯನ್ನು ಹೇಳಿದರು. ಆಗ ನಿಜಕ್ಕೂ ನನಗೆ ರೋಮಾಂಚನವಾಯಿತು ಎಂದು ದರ್ಶನ್ ಹೇಳಿದರು. 
'ಕುರುಕ್ಷೇತ್ರದ ವಿವಿಧ ಆವೃತ್ತಿಗಳನ್ನು ನಾನು ಕೇಳಬೇಕಾಗಿತ್ತು'
ಕಳೆದ ಮೇ ನಲ್ಲಿ ಚಿತ್ರದ ಕುರಿತು ಮಾತುಕತೆ ನಡೆಯಿತು. ಇದಾದ ಎರಡೇ ತಿಂಗಳಲ್ಲಿ ಚಿತ್ರ ಸೆಟ್ಟೇರಿತು. ಮೊದಲ ದಿನದಿಂದಲೂ ನನ್ನ ಪಾತ್ರಕ್ಕಾಗಿ ತಯಾರಿ ನಡೆಸಬೇಕಾಯಿತು. ನಾನು ನನ್ನ ಬೇರೆ ಚಿತ್ರಗಳ ಕುರಿತ ವಿಭಿನ್ನ ಆವೃತ್ತಿಗಳನ್ನು ಕೇಳಿರಲಿಲ್ಲ, ಆದರೆ ನಾನು ಕುರುಕ್ಷೇತ್ರಕ್ಕಾಗಿ ಇದನ್ನು ಮಾಡಿದ್ದೇ. ಕೊನೆಗೆ ಅಂತಿಮ ಆವೃತ್ತಿ ನಿರ್ಧಾರವಾದ ನಂತರ ನಾನು ನನ್ನ ಪಾತ್ರದ ಕುರಿತ ಕಲ್ಪನೆಯಲ್ಲಿ ತೊಡಗಿದೆ. ಸ್ವತಃ ನಾನೇ ನನ್ನ ಪಾತ್ರದ ಕುರಿತು ಚಿತ್ರಿಸಿಕೊಂಡೆ, ಇನ್ನು ಬೇರೆ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿದ್ದಾಗಲು ನಾನು ಮುನಿರತ್ನ ಅವರಿಗೆ ಕರೆ ಮಾಡುತ್ತಿದ್ದೆ ಎಂದು ಹೇಳಿದರು. 
'ನಾನು ಮೂಲತಃ ರಂಗಭೂಮಿ ಕಲಾವಿದ'
ಒಂದು ಕಮರ್ಷಿಯಲ್ ಚಿತ್ರವನ್ನು ಸಲಿಸಾಗಿ ಮಾಡಬಹುದು. ಆದರೆ ಒಂದು ಪೌರಾಣಿಕ ಚಿತ್ರಕ್ಕಾಗಿ ಹಲವು ಕಸರತ್ತುಗಳನ್ನು ಮಾಡಬೇಕಾಗಿ ಬರುತ್ತದೆ. ಪೌರಾಣಿಕ ಚಿತ್ರಕ್ಕಾಗಿ ಸಂಭಾಷಣೆ, ವೇಷಭೂಷಣಗಳು ಮತ್ತು ನನ್ನ ಹಾವಭಾವಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ನಾನೊಬ್ಬ ಕಮರ್ಷಿಯಲ್ ನಟ ಎಂದು ಭಾವನೆ ಎಲ್ಲರಲ್ಲಿದೆ. ಆದರೆ ನಾನು ಮೂಲತಃ ರಂಗಭೂಮಿ ಕಲಾವಿದ. ನಾನು ನಿನಾಸಂನಲ್ಲಿ ಅಭಿನಯ ಕಲಿತೆ. ಇದಕ್ಕೂ ಮುನ್ನ ನಾನು ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ನಟಿಸಿದ್ದೇ ಅದಾದ ನಂತರ ಇದು ನನ್ನ ಮೊದಲ ಪೌರಾಣಿಕ ಚಿತ್ರ ಎಂದರು. 
'ಕುರುಕ್ಷೇತ್ರದಂತಾ ಚಿತ್ರಗಳು ನಿರ್ಮಾಪಕನಿಗೆ ಒಂದು ಕಪ್ ಚಹಾದಂತಲ್ಲ'
ಕುರುಕ್ಷೇತ್ರದಂತಾ ಅದ್ಭುತ ಪೌರಾಣಿಕ ಚಿತ್ರದಲ್ಲಿ ನಾನು ಅಭಿನಯಿಸುತ್ತಿರುವುದಕ್ಕೆ ಸಂತೋಷವಾಗಿದೆ. ಇನ್ನು ಚಿತ್ರರಂಗ ಹಲವು ಹಿರಿಯ ನಟರೊಂದಿಗೆ ನಟಿಸುತ್ತಿರುವುದು ನನ್ನ ಜೀವನದ ಅವಿಸ್ಮರಣೀಯ ಘಟನೆ. ಚಿತ್ರದಲ್ಲಿ ಹಿರಿಯ ನಟರಾದ ಶ್ರೀನಾಥ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ ಮತ್ತು ರವಿಶಂಕರ್ ನಟಿಸಿದ್ದಾರೆ. ಕುರುಕ್ಷೇತ್ರ ಚಿತ್ರ ಬರೀ ದುರ್ಯೋಧನನ ಚಿತ್ರವಲ್ಲ. ಎಲ್ಲಾ ಪಾತ್ರಗಳಿಗೂ ತನ್ನದೇ ಆದ ಮಹತ್ವವಿದೆ. ಇನ್ನು ಕುರುಕ್ಷೇತ್ರದಂತಾ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಿಸುವುದು ನಿರ್ಮಾಪಕರಿಗೆ ಒಂದು ಕಪ್ ಚಹಾದಂತಲ್ಲ. ಆದರೆ ನಿರ್ಮಾಪಕರ ಮುನಿರತ್ನ ಅವರಿಗೆ ಧೈರ್ಯ ಜಾಸ್ತಿ. ಇನ್ನು ಚಿತ್ರದಲ್ಲಿ ಅಭಿನಯಿಸಿರುವ ಪ್ರತಿಯೊಬ್ಬ ನಟನು ಸಹ ತಮ್ಮ ಪಾತ್ರವನ್ನು ಸವಾಲಿನಂತೆ ಸ್ವೀಕರಿಸಿದ್ದಾರೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT