ಕೃಷಿ ತಾಪಂಡ 
ಸಿನಿಮಾ ಸುದ್ದಿ

'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾದಲ್ಲಿ ನನ್ನ ಪಾತ್ರ ಖುಷಿ ನೀಡಿದೆ : ಕೃಷಿ ತಾಪಂಡ

ಕುಶಾಲ್ ಗೌಡ ನಿರ್ದೇಶನದ ಕನ್ನಡಕ್ಕಾಗಿ ಒಂದನ್ನು ಒತ್ತಿ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಚಿತ್ರ ಎಂದು ನಟಿ ಕೃಷಿ ...

ಕುಶಾಲ್ ಗೌಡ ನಿರ್ದೇಶನದ ಕನ್ನಡಕ್ಕಾಗಿ ಒಂದನ್ನು ಒತ್ತಿ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಚಿತ್ರ ಎಂದು ನಟಿ ಕೃಷಿ ತಾಪಂಡ ಭಾವಿಸಿದ್ದಾರೆ. ನಾಡಿದ್ದು ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದ್ದು ಹಲವು ಕಲಾವಿದರನ್ನು ಚಿತ್ರ ಒಳಗೊಂಡಿದ್ದರೂ ಕೂಡ ನಾಯಕಿಯ ಸುತ್ತ ಕಥೆ ಸುತ್ತಿಕೊಂಡಿದೆ ಎನ್ನುತ್ತಾರೆ.

ಈ ಚಿತ್ರದಲ್ಲಿ ನಾನು ಎರಡು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಒಂದು, ಕಾಲೇಜಿಗೆ ಹೋಗುವ ಯುವತಿ ಪಾತ್ರವಾಗಿದ್ದು ಇನ್ನೊಂದನ್ನು ಕುತೂಹಲವಾಗಿ ಇರಿಸಲಾಗಿದೆ. ಅದು ಚಿತ್ರ ಬಿಡುಗಡೆಯಾದ ದಿವ ಗೊತ್ತಾಗಲಿದೆ ಎನ್ನುತ್ತಾರೆ ಕೃಷಿ. ನಿರ್ದೇಶಕರು ತಮಗೆ ವಿಶಿಷ್ಟ ಪಾತ್ರ ಕೊಟ್ಟಿದ್ದಾರೆ ಎಂದು ಖುಷಿಯಾಗಿದ್ದಾರೆ ಅವರು.

ನನ್ನ ಪಾತ್ರಗಳಲ್ಲಿ ಪ್ರಯೋಗ ಮಾಡುವುದೆಂದರೆ ನನಗೆ ಇಷ್ಟ. ಆದರೆ ಅನೇಕ ನಿರ್ದೇಶಕರು ಬಬ್ಲಿ ಪಾತ್ರಗಳನ್ನು ಹಿಡಿದುಕೊಂಡು ಕಥೆ ಹೇಳಿಕೊಂಡು ಬರುತ್ತಾರೆ. ನನ್ನ ಆಫ್ ಸ್ಕ್ರೀನ್ ನೋಟ ಅಂತಹ ಪಾತ್ರಗಳಿಗೆ ಹೊಂದಿಕೆಯಾಗಬಹುದೆಂದು ಎಂದು ಭಾವಿಸುವುದಾಗಿರಬಹುದು. ಸರಿಯಾದ ಪಾತ್ರಗಳು ಸಿಗುವ ಚಿತ್ರಗಳಿಗಾಗಿ ನಾನು ಕಾಯುತ್ತಿದ್ದೇನೆ. ಅದು ನನ್ನ ವೃತ್ತಿ ಜೀವನದಲ್ಲಿ ಮೈಲಿಗಲ್ಲಾಗಿರಬೇಕು. ಕನ್ನಡಕ್ಕಾಗಿ ಅಂತಹ ಪಾತ್ರ ಹೊಂದಿರುವ ಚಿತ್ರ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಕೃಷಿ.

ಇದೊಂದು ಲವ್ ಸ್ಟೋರಿ. ಅದರಲ್ಲಿ ಹಲವು ಟ್ವಿಸ್ಟ್ ಗಳು ಬರುತ್ತವೆ. ಇದು ರಿಮೇಕ್ ಚಿತ್ರವಲ್ಲ ಎಂದು ಸ್ಪಷ್ಟನೆ ನೀಡಿದರು. ತಮಿಳಿನಲ್ಲಿ ಇಂತಹದ್ದೇ ಶೀರ್ಷಿಕೆಯ ಚಿತ್ರವೊಂದಿದ್ದು ಆ ಚಿತ್ರದ ರಿಮೇಕ್ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಸ್ವಮೇಕು ಸಿನಿಮಾ ಎಂದರು.
ಕೃಷಿಗೆ ಜೋಡಿಯಾಗಿ ಶತಮರ್ಶನ್ ಅವಿನಾಶ್ ನಟಿಸಿದ್ದರೆ ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಕೂಡ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

5 ವರ್ಷದ ಬಾಲಕನ ಜೊತೆ ಅಸ್ವಾಭಾವಿಕ s*x; ವಸತಿ ಶಾಲೆ ವಿದ್ಯಾರ್ಥಿಯ ಗಂಟಲು ಸೀಳಿದ ಗಾರ್ಡ್!

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದು ಕೋರಿದ ಅನಂತಕುಮಾರ್ ಹೆಗಡೆ!

'ವೃದ್ಧ ಸಮಾಜದತ್ತ ಶ್ರೀಲಂಕಾ': ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಹಿರಿಯರ ಸಂಖ್ಯೆ; 40 ವರ್ಷಗಳಲ್ಲಿ ಮೂರು ಪಟ್ಟು ಜಾಸ್ತಿ!

SCROLL FOR NEXT