'ಭೀಮಸೇನ ನಳಮಹಾರಾಜ' ಪೋಸ್ಟರ್ 
ಸಿನಿಮಾ ಸುದ್ದಿ

ಕೊಡಚಾದ್ರಿಯಲ್ಲಿ ಅಂತಿಮ ಹಂತದ ಶೂಟಿಂಗ್ ಮುಗಿಸಿದ 'ಭೀಮಸೇನ ನಳಮಹಾರಾಜ'

ರು: ಕಾರ್ತಿಕ್ ಸರಗೂರು ನಿರ್ದೇಶನದ ಚೊಚ್ಚಲ ಸಿನಿಮಾ ಭೀಮಸೇನ ನಳಮಹಾರಾಜ ಕೊಡಚಾದ್ರಿಯಲ್ಲಿ 13 ದಿನಗಳ ಶೂಟಿಂಗ್ ಮುಗಿಸಿದೆ. ...

ಬೆಂಗಳೂರು: ಕಾರ್ತಿಕ್ ಸರಗೂರು ನಿರ್ದೇಶನದ ಚೊಚ್ಚಲ ಸಿನಿಮಾ ಭೀಮಸೇನ ನಳಮಹಾರಾಜ ಕೊಡಚಾದ್ರಿಯಲ್ಲಿ 13 ದಿನಗಳ ಶೂಟಿಂಗ್ ಮುಗಿಸಿದೆ. ಸಿನಿಮಾದಲ್ಲಿ ಆರು ರಸಗಳ ಕುರಿತು ಕಥೆ ಎಣೆಯಲಾಗಿದೆ. ಸಿಹಿ, ಉಳಿ, ಉಪ್ಪು, ಕಹಿ, ಖಾರ, ಒಗರು ಎಂಬ ಆರು ರಸಗಳು ಆರು ಪಾತ್ರಗಳನ್ನು ಪ್ರತಿನಿಧಿಸುತ್ತವೆ.
ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಅರವಿಂದ್ ಐಯ್ಯರ್, ಅಚ್ಯುತ ಕುಮಾರ್, ಆರೋಹಿ ನಾರಾಯಣ, ಪ್ರಿಯಾಂಕ ತಿಮ್ಮೇಶ್, ಬಾಲಕ ಕಲಾವಿದರಾದ ಆದ್ಯ ಮತ್ತು ಚಿತ್ರಾಲಿ ಎಲ್ಲರೂ ಸೆಟ್ ನಲ್ಲಿ ಭಾಗವಹಿಸಿದ್ದರು. 
ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜೊತೆಗೆ ಟೀಸರ್ ಬಿಡುಗಡೆಗಾಗಿಯೂ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ, ಚಿತ್ರೀಕರಣಕ್ಕೆ ಮಾನ್ಸೂನ್ ಸೆಟ್ ತುಂಬಾ ಅನುಕೂಲವಾಯಿತು. ಸೂರ್ಯೋಧಯದ ನಂತರ ಹೆಚ್ಚಿನ ಭಾಗದ ಶೂಟಿಂಗ್ ನಡೆಸಲಾಗಿದೆ, ಮಧ್ಯರಾತ್ರಿ ವರೆಗೂ ನಾವು ಚಿತ್ರೀಕರಣ ನಡೆಸಿದೆವು ಎಂದು ಕಾರ್ತಿಕ್ ತಿಳಿಸಿದ್ದಾರೆ.
ಸದಭಿರುಚಿಯ ಅಡುಗೆ ಭಟ್ಟನಾಗಿ ಅರವಿಂದ್ ನಟಿಸಿದ್ದಾರೆ,  ಸರಳ ಕ್ರಿಶ್ಚಿಯನ್ ಹುಡುಗಿಯಾಗಿ ಪ್ರಿಯಾಂಕಾ, ಅಯ್ಯಂಗಾರಿ ಹುಡುಗಿಯಾಗಿ ಆರೋಹಿ ಕಾಣಿಸಿಕೊಂಡಿದ್ದಾರೆ, ಪುಷ್ಕರ ಮಲ್ಲಿಕಾರ್ಜುನಯ್ಯ, ಹೇಮಂತ್ ಎಂ ರಾವ್, ಮತ್ತು ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಪಕರಾಗಿದ್ದಾರೆ, ಚರಣ್ ರಾಜ್ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT