ಲೈಫ್ ಜೊತೆ ಒಂದ್ ಸೆಲ್ಫೀ ನಲ್ಲಿ ಪ್ರೇಮ್, ಹರಿಪ್ರಿಯಾ ಮತ್ತು ಪ್ರಜ್ವಲ್ ದೇವರಾಜ್ 
ಸಿನಿಮಾ ಸುದ್ದಿ

’ಲೈಫ್ ಜೊತೆ ಒಂದ್ ಸೆಲ್ಫೀ’ ತಂಡದಿಂಡ ಅದ್ದೂರಿ ಆಡಿಯೋ ಲಾಂಚ್ ಗೆ ತಯಾರಿ

ನಿರ್ದೇಶಕ ದಿನಕರ ತೂಗುದೀಪ್ ತಮ್ಮ ’ಲೈಫ್ ಜೊತೆ ಒಂದ್ ಸೆಲ್ಫೀ’ ಚಿತ್ರದ ಆಡಿಯೋ ಬಿಡುಗಡೆಗೆ ಭಾರೀ ತಯಾರಿ ನಡೆಸಿದ್ದಾರೆ.

ಬೆಂಗಳೂರು: ನಿರ್ದೇಶಕ ದಿನಕರ ತೂಗುದೀಪ್ ತಮ್ಮ ’ಲೈಫ್ ಜೊತೆ ಒಂದ್ ಸೆಲ್ಫೀ’ ಚಿತ್ರದ  ಆಡಿಯೋ ಬಿಡುಗಡೆಗೆ ಭಾರೀ ತಯಾರಿ ನಡೆಸಿದ್ದಾರೆ. ಜೂನ್ 15ರಂದು ಈ ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ಚಿತ್ರತಂಡ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ದರ್ಶನ್ ತೂಗುದೀಪ್ ಅವರುಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲು ತೀರ್ಮಾನಿಸಿದೆ.
ದಿನಕರ್ ಅವರ ಪತ್ನಿ ಮಾನಸ ಚಿತ್ರದ ಕಥೆ ತಯಾರಿಸಿದ್ದು ಇದು ಮೂವರು ಗೆಳೆಯರ ಜೀವನವನ್ನು ಒಳಗೊಂಡಿದೆ. ಚಿತ್ರದಲ್ಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಹಾಗೂ ಹರಿಪ್ರಿಯಾ ಮುಖ್ಯ ತಾರಾಂಗಣದಲ್ಲಿದ್ದಾರೆ.
ಚಿತ್ರದ ಹಾಡುಗಳೆಲ್ಲ ಕೇವಲ ಕಮರ್ಷಿಯಲ್ ದೃಷ್ಟಿಕೋನವುಳ್ಳವಾಗಿ ಇಲ್ಲ, ಬದಲಿಗೆ ಚಿತ್ರದ ಕಥೆ, ಸನ್ನಿವೇಶಕ್ಕೆ ತಕ್ಕಂತೆ ಹಾಡಿನ ಸಂಯೋಜನೆ ನಡೆದಿದೆ ಎನ್ನುವ ನಿರ್ದೇಶಕ ದಿನಕರ್ "ಹರಿಕೃಷ್ಣ ಸಂಗೀತವಿರುವ ಈ ಆಲ್ಬಮ್ ನಲ್ಲಿ ಒಂದು ಪಾರ್ಟಿ ಹಾಡು, ಒಂದು  ಭಾವನಾತ್ಮಕ ಗೀತೆ ಮತ್ತು ಎರಡು ವರ್ಣರಂಜಿತ, ವೈವಿದ್ಯಮಯ ಹಾಡುಗಳಿದೆ ಎಂದರು.
"ಈ ಚಿತ್ರಕ್ಕಾಗಿ ಗೀತರಚನೆಕಾರರಾದ ಕವಿರಾಜ್ ಇದೇ ಮೊದಲ ಬಾರಿಗೆ ಚಿತ್ರ ಶಿರ್ಷಿಕೆ ಗೀತೆಯನ್ನು ರಚಿಸಿದ್ದಾರೆ. ಈ ಹಾಡು ಲೈಫ್ ಜೊತೆ ಒಂದ್ ಸೆಲ್ಫೀ ಚಿತ್ರದ ಟೈಟಲ್ ಜತೆಗೆ ಪ್ರಾರಂಭವಾಗುತ್ತದೆ. ಇದಲ್ಲದೆ ಕವಿರಾಜ್ ನಮ್ಮ ಚಿತ್ರಕ್ಕಾಗಿ ಇನ್ನೆರಡು ಗೀತೆಗಳನ್ನು ಸಹ ಬರೆದು ಕೊಟ್ಟಿದ್ದಾರೆ. ಇನ್ನು ಯೋಗರಾಜ್ ಭಟ ಸಹ ಒಂದು ಸುಂದರ ಕವಿತೆಯನ್ನು ನೀಡಿದ್ದಾರೆ. ನಾಗೇಂದ್ರ ಪ್ರಸಾದ್ ಸಹ ಎರಡು ಕವಿತೆಗಳನ್ನು ಬರೆದಿದ್ದು ಇದರಲ್ಲಿ ಒಂದು ತಾಯಿ-ಮಗನ ಸಂಬಂಧದ ಭಾವನಾತ್ಮಕತೆಯನ್ನು ಸಾರುತ್ತದೆ" ದಿನಕರ್ ಹೇಳಿದ್ದಾರೆ.
ಲೈಫ್ ಜೊತೆ ಒಂದ್ ಸೆಲ್ಫೀ ಚಿತ್ರದ ಆಡಿಯೋ ಈ ವಾರ ಬಿಡುಗಡೆಯಾಗುತ್ತಿದ್ದು ಚಿತ್ರವು ಆಗಸ್ಟ್ ಮೊದಲ ವಾರ ತೆರೆಗೆ  ಬರುವ ನಿರೀಕ್ಷೆ ಇದೆ. ನಿರಂಜನ್ ಬಾಬು ಛಾಯಾಗ್ರಹಣವಿರುವ ಈ ಚಿತ್ರವನ್ನು ಸಮೃದ್ದಿ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT